ಸೋಮವಾರದ ಗಾಡಿ

ಹೇಗೆ ಹೋಗುತಿದೆ ನೋಡಿ
ಸೋಮವಾರದ ಗಾಡಿ
ಸುತ್ತಾಡಿ ಗಲ್ಲಿ ಗಲ್ಲಿ
ಒಡೆದು ದಾಮರ ಜಲ್ಲಿ
ಗುರುತುಗಳು ವಕ್ರ ವಕ್ರ
ತುಳಿದಲ್ಲಿ ಭಾರೀ ಚಕ್ರ
ಕಾಣಿಸುವುದೇಕ ಪಾತ್ರ

ಕಣ್ಣುಗಳು ಅನೇಕ ಮಾತ್ರ
ಮಾತಿಗೆ ಮಾತು ಜೋತು
ನಿಂತಿರುವುದು ಸೇತು
ಅಲ್ಲಿ ಹೊಳೆ ಇಲ್ಲಿ ಹೊಳೆ
ಕೆಳ ಬಾಯತೆರೆದ ಮೊಸಳೆ
ಬಿಟ್ಟಲ್ಲಿ ಖಂಡಿತ ಬಿರುಕು
ಮುಳುಗುವುದು ಸರಕು
ದೈವವೆಂಬ ವಿಶ್ವಾಸ
ತೀರ ಕೊನೆಯ ಪ್ರಾಸ

ಕೂಲಿ ಕುತುಬ್‌ಶಹನ ಘಜಲು
ಹಾಡಲಾಗದು ಹಗಲು
ಮಿನಾರದ ಮೇಲೆ ರೆಂಜೆ
ಹೂ ಚೆಲ್ಲಿದಾಗ ಸಂಜೆ
ಕುಣಿಯುವಳು ಭಾಗ್ಯಮತಿ
ಕವಿಯ ಚಿರಂತನ ಯುವತಿ
ನಿನ್ನೆಗಳ ಗೋರಿಯಲಿ ನಿಂದು
ನಮ್ಮ ಕನಸಿನಲಿ ಬಂದು

ರೂಪರೂಪಕಗಳಲ್ಲಿ ನಿಮಗೆ
ಪ್ರಿಯವಾದುದಾವ ಬಗೆ?
ಅಥವ ಭಾಷೆಯನದರ
ನಗ್ನತೆಯಲೆ ಕೊಳ್ಳಬಯಸುವಿರ ?
ಕೊಂಡೇನು ಮಾಡುವಿರಿ-
ಇದ್ದ ಶಬ್ದಗಳಲ್ಲಿ ಯಾವುದಷ್ಟೆ ಸರಿ?
ಒಮ್ಮೆ ಬಂದಾದ ನಂತರ
ಬರುವುದೇನು ಅದೇ ವಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಭಿಯ ನುಡಿ
Next post ಬಲೆ-ಬೆಲೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys