Home / ಕವನ / ಕವಿತೆ / ನಾಭಿಯ ನುಡಿ

ನಾಭಿಯ ನುಡಿ

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ-
ನೆಲ ನುಡಿಯ ಬಲ್ಮೆಗೆ
ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ.
ಹೊಂಬಣ್ಣವೆಂದು

ಕನ್ನಡವ ಮೆಲ್ಲುತ್ತ ಹಾಡಿದರು
ಕುಡಿಯುತ್ತ ತೇಗಿದರು
ಕನ್ನಡದಲೇ ಮಿಂದರು ಜನಪದರು
ಕಾಯಕದ ಕಸ್ತೂರಿ
ಕನ್ನಡದ ತುತ್ತೂರಿ ಊದಿದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ
ತಾಯ್ನುಡಿಯ ಹಿರಿಮೆಗೆ ಕನ್ನಡಿ
ಅರಿಯಲಾಗಲಿಲ್ಲ ತಿರುಳ್ಗನ್ನಡದ
ಮೈ ವಜ್ರ ವಡ್ಯಾಣವೆಂದು.

ಹಳ್ಳಿಗಾಡಿನ ಹುಂಬ ಹೈಕಳು
ಹಬ್ಬಿಸಿದರು, ಹರಳುಗಟ್ಟಿಸಿ
ನುಡಿಯ ಬೆಳಸುತಿಹರು
ಈ ಮಣ್ಣಿನ ಕುಡಿ ಕಲಿತ ಮಣಿ
ನಾನಾಗಲಿಲ್ಲ ಮುನ್ನುಡಿ
ಕೋಶ ಓದಿ, ನಾಡ ಸುತ್ತಿ ಪರಂಪರೆ ಸಂಸೃತಿಯ
ಉದ್ದೂದ್ದ ಭಾಷಣವ ಬಿಗಿದೆ.
ಕಟ್ಟಲಿಲ್ಲ, ಕಿವಿಗೊಡಲೂ ಇಲ್ಲ
ಕನ್ನಡದ ಹಾಡಿಗೆ.
ಬಗೆಯಲಾಗಲಿಲ್ಲ ಬಗೆಗೂಡಿಗೆ
ಕನ್ನಡವು ಬೆಳ್ನುಡಿಯೆಂದು

ಪೇಟೆ ಜನರ ಬಾಯಲ್ಲಿ
ಟೂಸ್ಸುಪುಸ್ಸು ಇಂಗ್ಲೀಷ ಕೇಳಿ ಬೆರಗಾದೆ
ಮಣಿದೆ, ಮರಳುಗೊಳಿಸಿತು ಆಂಗ್ಲತೆ
ಮರೆತೆ ಹೆತ್ತೊಡಲ ನುಡಿಯ ಒರತೆ ಇಲ್ಲ.
ಮರೆತೆನೆಂಬುದು ಬರಿಯ ನಾಟಕದ ನಿದ್ರೆ.
ತಾಯ್ಮೊಲೆಯ ಚೀಪುತ್ತ ಕೇಳಿದೊಂದು
ನುಡಿಯ ನೆನಪು ನಾಭಿಯಲಿ ಮುದ್ರೆ
ಅಂಬೆಗಾಲಿಕ್ಕಿ ಮಗುವಿನಂತೆ
ತೊದಲುನುಡಿಯಲಿ ಕನ್ನಡಮ್ಮಗೆ ಹರಕೆ
ತನುಮನಧನವೂ ಕನ್ನಡಕೆ
ಕನ್ನಡದ ನುಡಿಗೋಪುರದಿ ತಾನತನನಕೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...