Home / ಕವನ / ಕವಿತೆ / ನಾಭಿಯ ನುಡಿ

ನಾಭಿಯ ನುಡಿ

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ-
ನೆಲ ನುಡಿಯ ಬಲ್ಮೆಗೆ
ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ.
ಹೊಂಬಣ್ಣವೆಂದು

ಕನ್ನಡವ ಮೆಲ್ಲುತ್ತ ಹಾಡಿದರು
ಕುಡಿಯುತ್ತ ತೇಗಿದರು
ಕನ್ನಡದಲೇ ಮಿಂದರು ಜನಪದರು
ಕಾಯಕದ ಕಸ್ತೂರಿ
ಕನ್ನಡದ ತುತ್ತೂರಿ ಊದಿದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ
ತಾಯ್ನುಡಿಯ ಹಿರಿಮೆಗೆ ಕನ್ನಡಿ
ಅರಿಯಲಾಗಲಿಲ್ಲ ತಿರುಳ್ಗನ್ನಡದ
ಮೈ ವಜ್ರ ವಡ್ಯಾಣವೆಂದು.

ಹಳ್ಳಿಗಾಡಿನ ಹುಂಬ ಹೈಕಳು
ಹಬ್ಬಿಸಿದರು, ಹರಳುಗಟ್ಟಿಸಿ
ನುಡಿಯ ಬೆಳಸುತಿಹರು
ಈ ಮಣ್ಣಿನ ಕುಡಿ ಕಲಿತ ಮಣಿ
ನಾನಾಗಲಿಲ್ಲ ಮುನ್ನುಡಿ
ಕೋಶ ಓದಿ, ನಾಡ ಸುತ್ತಿ ಪರಂಪರೆ ಸಂಸೃತಿಯ
ಉದ್ದೂದ್ದ ಭಾಷಣವ ಬಿಗಿದೆ.
ಕಟ್ಟಲಿಲ್ಲ, ಕಿವಿಗೊಡಲೂ ಇಲ್ಲ
ಕನ್ನಡದ ಹಾಡಿಗೆ.
ಬಗೆಯಲಾಗಲಿಲ್ಲ ಬಗೆಗೂಡಿಗೆ
ಕನ್ನಡವು ಬೆಳ್ನುಡಿಯೆಂದು

ಪೇಟೆ ಜನರ ಬಾಯಲ್ಲಿ
ಟೂಸ್ಸುಪುಸ್ಸು ಇಂಗ್ಲೀಷ ಕೇಳಿ ಬೆರಗಾದೆ
ಮಣಿದೆ, ಮರಳುಗೊಳಿಸಿತು ಆಂಗ್ಲತೆ
ಮರೆತೆ ಹೆತ್ತೊಡಲ ನುಡಿಯ ಒರತೆ ಇಲ್ಲ.
ಮರೆತೆನೆಂಬುದು ಬರಿಯ ನಾಟಕದ ನಿದ್ರೆ.
ತಾಯ್ಮೊಲೆಯ ಚೀಪುತ್ತ ಕೇಳಿದೊಂದು
ನುಡಿಯ ನೆನಪು ನಾಭಿಯಲಿ ಮುದ್ರೆ
ಅಂಬೆಗಾಲಿಕ್ಕಿ ಮಗುವಿನಂತೆ
ತೊದಲುನುಡಿಯಲಿ ಕನ್ನಡಮ್ಮಗೆ ಹರಕೆ
ತನುಮನಧನವೂ ಕನ್ನಡಕೆ
ಕನ್ನಡದ ನುಡಿಗೋಪುರದಿ ತಾನತನನಕೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...