Home / ಕವನ / ಕವಿತೆ / ನಾಭಿಯ ನುಡಿ

ನಾಭಿಯ ನುಡಿ

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ-
ನೆಲ ನುಡಿಯ ಬಲ್ಮೆಗೆ
ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ.
ಹೊಂಬಣ್ಣವೆಂದು

ಕನ್ನಡವ ಮೆಲ್ಲುತ್ತ ಹಾಡಿದರು
ಕುಡಿಯುತ್ತ ತೇಗಿದರು
ಕನ್ನಡದಲೇ ಮಿಂದರು ಜನಪದರು
ಕಾಯಕದ ಕಸ್ತೂರಿ
ಕನ್ನಡದ ತುತ್ತೂರಿ ಊದಿದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ
ತಾಯ್ನುಡಿಯ ಹಿರಿಮೆಗೆ ಕನ್ನಡಿ
ಅರಿಯಲಾಗಲಿಲ್ಲ ತಿರುಳ್ಗನ್ನಡದ
ಮೈ ವಜ್ರ ವಡ್ಯಾಣವೆಂದು.

ಹಳ್ಳಿಗಾಡಿನ ಹುಂಬ ಹೈಕಳು
ಹಬ್ಬಿಸಿದರು, ಹರಳುಗಟ್ಟಿಸಿ
ನುಡಿಯ ಬೆಳಸುತಿಹರು
ಈ ಮಣ್ಣಿನ ಕುಡಿ ಕಲಿತ ಮಣಿ
ನಾನಾಗಲಿಲ್ಲ ಮುನ್ನುಡಿ
ಕೋಶ ಓದಿ, ನಾಡ ಸುತ್ತಿ ಪರಂಪರೆ ಸಂಸೃತಿಯ
ಉದ್ದೂದ್ದ ಭಾಷಣವ ಬಿಗಿದೆ.
ಕಟ್ಟಲಿಲ್ಲ, ಕಿವಿಗೊಡಲೂ ಇಲ್ಲ
ಕನ್ನಡದ ಹಾಡಿಗೆ.
ಬಗೆಯಲಾಗಲಿಲ್ಲ ಬಗೆಗೂಡಿಗೆ
ಕನ್ನಡವು ಬೆಳ್ನುಡಿಯೆಂದು

ಪೇಟೆ ಜನರ ಬಾಯಲ್ಲಿ
ಟೂಸ್ಸುಪುಸ್ಸು ಇಂಗ್ಲೀಷ ಕೇಳಿ ಬೆರಗಾದೆ
ಮಣಿದೆ, ಮರಳುಗೊಳಿಸಿತು ಆಂಗ್ಲತೆ
ಮರೆತೆ ಹೆತ್ತೊಡಲ ನುಡಿಯ ಒರತೆ ಇಲ್ಲ.
ಮರೆತೆನೆಂಬುದು ಬರಿಯ ನಾಟಕದ ನಿದ್ರೆ.
ತಾಯ್ಮೊಲೆಯ ಚೀಪುತ್ತ ಕೇಳಿದೊಂದು
ನುಡಿಯ ನೆನಪು ನಾಭಿಯಲಿ ಮುದ್ರೆ
ಅಂಬೆಗಾಲಿಕ್ಕಿ ಮಗುವಿನಂತೆ
ತೊದಲುನುಡಿಯಲಿ ಕನ್ನಡಮ್ಮಗೆ ಹರಕೆ
ತನುಮನಧನವೂ ಕನ್ನಡಕೆ
ಕನ್ನಡದ ನುಡಿಗೋಪುರದಿ ತಾನತನನಕೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...