Home / ಕವನ / ಕವಿತೆ / ನಾಭಿಯ ನುಡಿ

ನಾಭಿಯ ನುಡಿ

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ-
ನೆಲ ನುಡಿಯ ಬಲ್ಮೆಗೆ
ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ.
ಹೊಂಬಣ್ಣವೆಂದು

ಕನ್ನಡವ ಮೆಲ್ಲುತ್ತ ಹಾಡಿದರು
ಕುಡಿಯುತ್ತ ತೇಗಿದರು
ಕನ್ನಡದಲೇ ಮಿಂದರು ಜನಪದರು
ಕಾಯಕದ ಕಸ್ತೂರಿ
ಕನ್ನಡದ ತುತ್ತೂರಿ ಊದಿದರು.
ಈ ಮಣ್ಣಿನ ಕುಡಿ ನಾನಾಗಲಿಲ್ಲ
ತಾಯ್ನುಡಿಯ ಹಿರಿಮೆಗೆ ಕನ್ನಡಿ
ಅರಿಯಲಾಗಲಿಲ್ಲ ತಿರುಳ್ಗನ್ನಡದ
ಮೈ ವಜ್ರ ವಡ್ಯಾಣವೆಂದು.

ಹಳ್ಳಿಗಾಡಿನ ಹುಂಬ ಹೈಕಳು
ಹಬ್ಬಿಸಿದರು, ಹರಳುಗಟ್ಟಿಸಿ
ನುಡಿಯ ಬೆಳಸುತಿಹರು
ಈ ಮಣ್ಣಿನ ಕುಡಿ ಕಲಿತ ಮಣಿ
ನಾನಾಗಲಿಲ್ಲ ಮುನ್ನುಡಿ
ಕೋಶ ಓದಿ, ನಾಡ ಸುತ್ತಿ ಪರಂಪರೆ ಸಂಸೃತಿಯ
ಉದ್ದೂದ್ದ ಭಾಷಣವ ಬಿಗಿದೆ.
ಕಟ್ಟಲಿಲ್ಲ, ಕಿವಿಗೊಡಲೂ ಇಲ್ಲ
ಕನ್ನಡದ ಹಾಡಿಗೆ.
ಬಗೆಯಲಾಗಲಿಲ್ಲ ಬಗೆಗೂಡಿಗೆ
ಕನ್ನಡವು ಬೆಳ್ನುಡಿಯೆಂದು

ಪೇಟೆ ಜನರ ಬಾಯಲ್ಲಿ
ಟೂಸ್ಸುಪುಸ್ಸು ಇಂಗ್ಲೀಷ ಕೇಳಿ ಬೆರಗಾದೆ
ಮಣಿದೆ, ಮರಳುಗೊಳಿಸಿತು ಆಂಗ್ಲತೆ
ಮರೆತೆ ಹೆತ್ತೊಡಲ ನುಡಿಯ ಒರತೆ ಇಲ್ಲ.
ಮರೆತೆನೆಂಬುದು ಬರಿಯ ನಾಟಕದ ನಿದ್ರೆ.
ತಾಯ್ಮೊಲೆಯ ಚೀಪುತ್ತ ಕೇಳಿದೊಂದು
ನುಡಿಯ ನೆನಪು ನಾಭಿಯಲಿ ಮುದ್ರೆ
ಅಂಬೆಗಾಲಿಕ್ಕಿ ಮಗುವಿನಂತೆ
ತೊದಲುನುಡಿಯಲಿ ಕನ್ನಡಮ್ಮಗೆ ಹರಕೆ
ತನುಮನಧನವೂ ಕನ್ನಡಕೆ
ಕನ್ನಡದ ನುಡಿಗೋಪುರದಿ ತಾನತನನಕೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...