ಸೋಮವಾರದ ಗಾಡಿ

ಹೇಗೆ ಹೋಗುತಿದೆ ನೋಡಿ
ಸೋಮವಾರದ ಗಾಡಿ
ಸುತ್ತಾಡಿ ಗಲ್ಲಿ ಗಲ್ಲಿ
ಒಡೆದು ದಾಮರ ಜಲ್ಲಿ
ಗುರುತುಗಳು ವಕ್ರ ವಕ್ರ
ತುಳಿದಲ್ಲಿ ಭಾರೀ ಚಕ್ರ
ಕಾಣಿಸುವುದೇಕ ಪಾತ್ರ

ಕಣ್ಣುಗಳು ಅನೇಕ ಮಾತ್ರ
ಮಾತಿಗೆ ಮಾತು ಜೋತು
ನಿಂತಿರುವುದು ಸೇತು
ಅಲ್ಲಿ ಹೊಳೆ ಇಲ್ಲಿ ಹೊಳೆ
ಕೆಳ ಬಾಯತೆರೆದ ಮೊಸಳೆ
ಬಿಟ್ಟಲ್ಲಿ ಖಂಡಿತ ಬಿರುಕು
ಮುಳುಗುವುದು ಸರಕು
ದೈವವೆಂಬ ವಿಶ್ವಾಸ
ತೀರ ಕೊನೆಯ ಪ್ರಾಸ

ಕೂಲಿ ಕುತುಬ್‌ಶಹನ ಘಜಲು
ಹಾಡಲಾಗದು ಹಗಲು
ಮಿನಾರದ ಮೇಲೆ ರೆಂಜೆ
ಹೂ ಚೆಲ್ಲಿದಾಗ ಸಂಜೆ
ಕುಣಿಯುವಳು ಭಾಗ್ಯಮತಿ
ಕವಿಯ ಚಿರಂತನ ಯುವತಿ
ನಿನ್ನೆಗಳ ಗೋರಿಯಲಿ ನಿಂದು
ನಮ್ಮ ಕನಸಿನಲಿ ಬಂದು

ರೂಪರೂಪಕಗಳಲ್ಲಿ ನಿಮಗೆ
ಪ್ರಿಯವಾದುದಾವ ಬಗೆ?
ಅಥವ ಭಾಷೆಯನದರ
ನಗ್ನತೆಯಲೆ ಕೊಳ್ಳಬಯಸುವಿರ ?
ಕೊಂಡೇನು ಮಾಡುವಿರಿ-
ಇದ್ದ ಶಬ್ದಗಳಲ್ಲಿ ಯಾವುದಷ್ಟೆ ಸರಿ?
ಒಮ್ಮೆ ಬಂದಾದ ನಂತರ
ಬರುವುದೇನು ಅದೇ ವಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಭಿಯ ನುಡಿ
Next post ಬಲೆ-ಬೆಲೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…