ಸೋಮವಾರದ ಗಾಡಿ

ಹೇಗೆ ಹೋಗುತಿದೆ ನೋಡಿ
ಸೋಮವಾರದ ಗಾಡಿ
ಸುತ್ತಾಡಿ ಗಲ್ಲಿ ಗಲ್ಲಿ
ಒಡೆದು ದಾಮರ ಜಲ್ಲಿ
ಗುರುತುಗಳು ವಕ್ರ ವಕ್ರ
ತುಳಿದಲ್ಲಿ ಭಾರೀ ಚಕ್ರ
ಕಾಣಿಸುವುದೇಕ ಪಾತ್ರ

ಕಣ್ಣುಗಳು ಅನೇಕ ಮಾತ್ರ
ಮಾತಿಗೆ ಮಾತು ಜೋತು
ನಿಂತಿರುವುದು ಸೇತು
ಅಲ್ಲಿ ಹೊಳೆ ಇಲ್ಲಿ ಹೊಳೆ
ಕೆಳ ಬಾಯತೆರೆದ ಮೊಸಳೆ
ಬಿಟ್ಟಲ್ಲಿ ಖಂಡಿತ ಬಿರುಕು
ಮುಳುಗುವುದು ಸರಕು
ದೈವವೆಂಬ ವಿಶ್ವಾಸ
ತೀರ ಕೊನೆಯ ಪ್ರಾಸ

ಕೂಲಿ ಕುತುಬ್‌ಶಹನ ಘಜಲು
ಹಾಡಲಾಗದು ಹಗಲು
ಮಿನಾರದ ಮೇಲೆ ರೆಂಜೆ
ಹೂ ಚೆಲ್ಲಿದಾಗ ಸಂಜೆ
ಕುಣಿಯುವಳು ಭಾಗ್ಯಮತಿ
ಕವಿಯ ಚಿರಂತನ ಯುವತಿ
ನಿನ್ನೆಗಳ ಗೋರಿಯಲಿ ನಿಂದು
ನಮ್ಮ ಕನಸಿನಲಿ ಬಂದು

ರೂಪರೂಪಕಗಳಲ್ಲಿ ನಿಮಗೆ
ಪ್ರಿಯವಾದುದಾವ ಬಗೆ?
ಅಥವ ಭಾಷೆಯನದರ
ನಗ್ನತೆಯಲೆ ಕೊಳ್ಳಬಯಸುವಿರ ?
ಕೊಂಡೇನು ಮಾಡುವಿರಿ-
ಇದ್ದ ಶಬ್ದಗಳಲ್ಲಿ ಯಾವುದಷ್ಟೆ ಸರಿ?
ಒಮ್ಮೆ ಬಂದಾದ ನಂತರ
ಬರುವುದೇನು ಅದೇ ವಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಭಿಯ ನುಡಿ
Next post ಬಲೆ-ಬೆಲೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys