ಸೋಮವಾರದ ಗಾಡಿ

ಹೇಗೆ ಹೋಗುತಿದೆ ನೋಡಿ
ಸೋಮವಾರದ ಗಾಡಿ
ಸುತ್ತಾಡಿ ಗಲ್ಲಿ ಗಲ್ಲಿ
ಒಡೆದು ದಾಮರ ಜಲ್ಲಿ
ಗುರುತುಗಳು ವಕ್ರ ವಕ್ರ
ತುಳಿದಲ್ಲಿ ಭಾರೀ ಚಕ್ರ
ಕಾಣಿಸುವುದೇಕ ಪಾತ್ರ

ಕಣ್ಣುಗಳು ಅನೇಕ ಮಾತ್ರ
ಮಾತಿಗೆ ಮಾತು ಜೋತು
ನಿಂತಿರುವುದು ಸೇತು
ಅಲ್ಲಿ ಹೊಳೆ ಇಲ್ಲಿ ಹೊಳೆ
ಕೆಳ ಬಾಯತೆರೆದ ಮೊಸಳೆ
ಬಿಟ್ಟಲ್ಲಿ ಖಂಡಿತ ಬಿರುಕು
ಮುಳುಗುವುದು ಸರಕು
ದೈವವೆಂಬ ವಿಶ್ವಾಸ
ತೀರ ಕೊನೆಯ ಪ್ರಾಸ

ಕೂಲಿ ಕುತುಬ್‌ಶಹನ ಘಜಲು
ಹಾಡಲಾಗದು ಹಗಲು
ಮಿನಾರದ ಮೇಲೆ ರೆಂಜೆ
ಹೂ ಚೆಲ್ಲಿದಾಗ ಸಂಜೆ
ಕುಣಿಯುವಳು ಭಾಗ್ಯಮತಿ
ಕವಿಯ ಚಿರಂತನ ಯುವತಿ
ನಿನ್ನೆಗಳ ಗೋರಿಯಲಿ ನಿಂದು
ನಮ್ಮ ಕನಸಿನಲಿ ಬಂದು

ರೂಪರೂಪಕಗಳಲ್ಲಿ ನಿಮಗೆ
ಪ್ರಿಯವಾದುದಾವ ಬಗೆ?
ಅಥವ ಭಾಷೆಯನದರ
ನಗ್ನತೆಯಲೆ ಕೊಳ್ಳಬಯಸುವಿರ ?
ಕೊಂಡೇನು ಮಾಡುವಿರಿ-
ಇದ್ದ ಶಬ್ದಗಳಲ್ಲಿ ಯಾವುದಷ್ಟೆ ಸರಿ?
ಒಮ್ಮೆ ಬಂದಾದ ನಂತರ
ಬರುವುದೇನು ಅದೇ ವಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಭಿಯ ನುಡಿ
Next post ಬಲೆ-ಬೆಲೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…