ದೇಹ ತುಂಡಾಯ್ತು !

ಮುಂದೆ ಇಡುವ ಅಡಿಯು ಜಾರಿ
ಓಡಿ ಬರುವ ಗಾಡಿ ಹಾರಿ
ತುಂಬಿತೇನೋ ಕೆಂಪು ರಂಗು ದಾರಿ
ಹಾ ಬಿದ್ದ ಜೀವ ಉಸಿರ ಕಾರಿ !

ಬಾಳಿಗೆಲಿವ ಧ್ಯೇಯ ಬಲಿ ಆಯ್ತು
ನಲಿವ ಹೊಸ ದೀಪ ನಂದಿ ಹೋಯ್ತು
ಎಲುಬು ಮಾಂಸ ಸಿಡಿದು ಹೋಳಾಯ್ತು
ತುಂಬಿ ಬೆಳೆದ ದೇಹ ತುಂಡಾಯ್ತು !

ಹರೆಯ ಮಗನ ನಂಬಿ ನಡೆದ
ತಾಯ ಕರುಳು ಹಾಯ್ ಭಸ್ಮವಾಯ್ತು
ನೀರ ನಡುವೆ ನಲಿದು ನಡೆದ
ಬಾಳ ಡೋಣಿ ಮುಳುಗಿ ಹೋಯ್ತು !

ಎದೆಯ ಒಡೆದು; ಗಾಡಿ ಓಡಿ
ಒಡಲ ಸೀಳಿ; ಜೀವ ಹೀರಿ
ಬೆಳೆವ ಬಾಳು ಹಾಳು ಮಾಡಿ
ಮೊಳಗಿತೇನೊ ಅಂತ್ಯ ಭೇರಿ !

ಅಳಲು ಉಕ್ಕಿ; ಕಡಲು ಕೂಡಿ
ಮುಸುಕಿತದೋ ಪ್ರಾಣ ಬೇಡಿ
ಎದೆಯ ಕೋಡಿ; ಮಣ್ಣ ರಕ್ತಮಾಡಿ
ಹರಿಯಿತಗೊ ಬಲಿಯ ನೀಡಿ !

ಸೆಳಕು ಮಿಂಚಾಗಿ ಹೋಯ್ತು ಸುದ್ದಿ
ತಾಯ ಹೃದಯ ಕರುಳ ತಾಕಿ
ಬೆಳೆವ ಮಗನ ನಂಬಿತ್ತು ಬುದ್ದಿ
ಹಾಯಿ ಹೋಳಾಯ್ತು ವಿಧಿಯು ತಾಕಿ!

ಕಂಡು ಕೇಳಿ ಹಿಂಡು ಜನ ಕೂಡಿತು
ನೆಲಕೆ ಬೆರೆತ ರಕ್ತ ಕಂಡಿತು
ಕಣ್ಣು ಮನವು ಗುಂಗು ಹಿಡಿಸಿತು
ಅಯ್ಯೋ ವಿಧಿಯು ಕೆಡಿಸಿತು!

ನನಸು ಊಹೆ ಕನಸಿಗಾಯಿತು
ಮುದಿಯ ತಾಯ ಕರುಳು ಕೊಚ್ಚಿತು
ಬಂದ ನಿಂದ ಸಂದಣಿಯು ಮಂದವಾಯಿತು
ದೈವ ಬಿಡದೆ ಗುಡುಗ ಹಾಕಿತು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಮಾನ
Next post ಚುಟುಕಗಳೆಂದರೆ – ೨

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…