Home / ಕವನ / ಕವಿತೆ / ದೇಹ ತುಂಡಾಯ್ತು !

ದೇಹ ತುಂಡಾಯ್ತು !

ಮುಂದೆ ಇಡುವ ಅಡಿಯು ಜಾರಿ
ಓಡಿ ಬರುವ ಗಾಡಿ ಹಾರಿ
ತುಂಬಿತೇನೋ ಕೆಂಪು ರಂಗು ದಾರಿ
ಹಾ ಬಿದ್ದ ಜೀವ ಉಸಿರ ಕಾರಿ !

ಬಾಳಿಗೆಲಿವ ಧ್ಯೇಯ ಬಲಿ ಆಯ್ತು
ನಲಿವ ಹೊಸ ದೀಪ ನಂದಿ ಹೋಯ್ತು
ಎಲುಬು ಮಾಂಸ ಸಿಡಿದು ಹೋಳಾಯ್ತು
ತುಂಬಿ ಬೆಳೆದ ದೇಹ ತುಂಡಾಯ್ತು !

ಹರೆಯ ಮಗನ ನಂಬಿ ನಡೆದ
ತಾಯ ಕರುಳು ಹಾಯ್ ಭಸ್ಮವಾಯ್ತು
ನೀರ ನಡುವೆ ನಲಿದು ನಡೆದ
ಬಾಳ ಡೋಣಿ ಮುಳುಗಿ ಹೋಯ್ತು !

ಎದೆಯ ಒಡೆದು; ಗಾಡಿ ಓಡಿ
ಒಡಲ ಸೀಳಿ; ಜೀವ ಹೀರಿ
ಬೆಳೆವ ಬಾಳು ಹಾಳು ಮಾಡಿ
ಮೊಳಗಿತೇನೊ ಅಂತ್ಯ ಭೇರಿ !

ಅಳಲು ಉಕ್ಕಿ; ಕಡಲು ಕೂಡಿ
ಮುಸುಕಿತದೋ ಪ್ರಾಣ ಬೇಡಿ
ಎದೆಯ ಕೋಡಿ; ಮಣ್ಣ ರಕ್ತಮಾಡಿ
ಹರಿಯಿತಗೊ ಬಲಿಯ ನೀಡಿ !

ಸೆಳಕು ಮಿಂಚಾಗಿ ಹೋಯ್ತು ಸುದ್ದಿ
ತಾಯ ಹೃದಯ ಕರುಳ ತಾಕಿ
ಬೆಳೆವ ಮಗನ ನಂಬಿತ್ತು ಬುದ್ದಿ
ಹಾಯಿ ಹೋಳಾಯ್ತು ವಿಧಿಯು ತಾಕಿ!

ಕಂಡು ಕೇಳಿ ಹಿಂಡು ಜನ ಕೂಡಿತು
ನೆಲಕೆ ಬೆರೆತ ರಕ್ತ ಕಂಡಿತು
ಕಣ್ಣು ಮನವು ಗುಂಗು ಹಿಡಿಸಿತು
ಅಯ್ಯೋ ವಿಧಿಯು ಕೆಡಿಸಿತು!

ನನಸು ಊಹೆ ಕನಸಿಗಾಯಿತು
ಮುದಿಯ ತಾಯ ಕರುಳು ಕೊಚ್ಚಿತು
ಬಂದ ನಿಂದ ಸಂದಣಿಯು ಮಂದವಾಯಿತು
ದೈವ ಬಿಡದೆ ಗುಡುಗ ಹಾಕಿತು !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...