ದೇಹ ತುಂಡಾಯ್ತು !

ಮುಂದೆ ಇಡುವ ಅಡಿಯು ಜಾರಿ
ಓಡಿ ಬರುವ ಗಾಡಿ ಹಾರಿ
ತುಂಬಿತೇನೋ ಕೆಂಪು ರಂಗು ದಾರಿ
ಹಾ ಬಿದ್ದ ಜೀವ ಉಸಿರ ಕಾರಿ !

ಬಾಳಿಗೆಲಿವ ಧ್ಯೇಯ ಬಲಿ ಆಯ್ತು
ನಲಿವ ಹೊಸ ದೀಪ ನಂದಿ ಹೋಯ್ತು
ಎಲುಬು ಮಾಂಸ ಸಿಡಿದು ಹೋಳಾಯ್ತು
ತುಂಬಿ ಬೆಳೆದ ದೇಹ ತುಂಡಾಯ್ತು !

ಹರೆಯ ಮಗನ ನಂಬಿ ನಡೆದ
ತಾಯ ಕರುಳು ಹಾಯ್ ಭಸ್ಮವಾಯ್ತು
ನೀರ ನಡುವೆ ನಲಿದು ನಡೆದ
ಬಾಳ ಡೋಣಿ ಮುಳುಗಿ ಹೋಯ್ತು !

ಎದೆಯ ಒಡೆದು; ಗಾಡಿ ಓಡಿ
ಒಡಲ ಸೀಳಿ; ಜೀವ ಹೀರಿ
ಬೆಳೆವ ಬಾಳು ಹಾಳು ಮಾಡಿ
ಮೊಳಗಿತೇನೊ ಅಂತ್ಯ ಭೇರಿ !

ಅಳಲು ಉಕ್ಕಿ; ಕಡಲು ಕೂಡಿ
ಮುಸುಕಿತದೋ ಪ್ರಾಣ ಬೇಡಿ
ಎದೆಯ ಕೋಡಿ; ಮಣ್ಣ ರಕ್ತಮಾಡಿ
ಹರಿಯಿತಗೊ ಬಲಿಯ ನೀಡಿ !

ಸೆಳಕು ಮಿಂಚಾಗಿ ಹೋಯ್ತು ಸುದ್ದಿ
ತಾಯ ಹೃದಯ ಕರುಳ ತಾಕಿ
ಬೆಳೆವ ಮಗನ ನಂಬಿತ್ತು ಬುದ್ದಿ
ಹಾಯಿ ಹೋಳಾಯ್ತು ವಿಧಿಯು ತಾಕಿ!

ಕಂಡು ಕೇಳಿ ಹಿಂಡು ಜನ ಕೂಡಿತು
ನೆಲಕೆ ಬೆರೆತ ರಕ್ತ ಕಂಡಿತು
ಕಣ್ಣು ಮನವು ಗುಂಗು ಹಿಡಿಸಿತು
ಅಯ್ಯೋ ವಿಧಿಯು ಕೆಡಿಸಿತು!

ನನಸು ಊಹೆ ಕನಸಿಗಾಯಿತು
ಮುದಿಯ ತಾಯ ಕರುಳು ಕೊಚ್ಚಿತು
ಬಂದ ನಿಂದ ಸಂದಣಿಯು ಮಂದವಾಯಿತು
ದೈವ ಬಿಡದೆ ಗುಡುಗ ಹಾಕಿತು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಮಾನ
Next post ಚುಟುಕಗಳೆಂದರೆ – ೨

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys