ಹುಲ್ಲು ಹೇಗೆ ಹಾಲಾಗುತ್ತೆ?

ಹುಲ್ಲು ಹೇಗೆ ಹಾಲಾಗುತ್ತೆ?

Hasuhullu
ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ?
ಹಕ್ಕಿಗೆ ಉಸಿರು ಕಟ್ಟೋಲ್ವಾಂತ ಪುಟ್ಟನೆ ಮೊಟ್ಟೇಲಿ?
ಮೋಡದ ತುಂಬ ನೀರಿದ್ರೂನೂ ಅದ್ಹೇಗೆ ತೇಲತ್ತೆ?
ರಾತ್ರೋ ರಾತ್ರಿ ಸೀ ಹಾಲೇಕೆ ಹುಳಿ ಮೊಸರಾಗುತ್ತೆ?

ದೇವ್ರೇ ಇದೆಲ್ಲ ಮಾಡ್ತಾನಂತೆ
ಕಷ್ಟ ಇಲ್ದೇನೆ!
ಬರಿಗೈಯಲ್ಲಿ ಒಬ್ಬನೆ ಹೇಗೆ
ಎಲ್ಲ ಮಾಡ್ತಾನೆ?
ಮಕ್ಕಳ ಎದುರು ಯಾತಕ್ ಹೀಗೆ
ಬಚ್ಚಿಟ್ಕೋತಾನೆ?
ನಮಗೇನ್ ಯಾರೂ ತೋರ್‍ಸೋರಿಲ್ವಾ?
ನೋಡೇ ಬಿಡ್ತೇನೆ!

ಕಮಲಾ ಮೇಡಂ ತೋರ್‍ಸೋದಿಲ್ಲ,
ಅಮ್ಮನೂ ಹಾಗೇನೇ;
ನೀನಿನ್ನೂನು ಚಿಕ್ಕೋನ್ ಅಂತ
ಹೇಳ್ತಾರ್ ಸುಮ್ನೇನೆ.
ದುಡ್ಡನ್ನೆಲ್ಲಾ ಕೂಡಿಸ್ಕೊಂಡು
ಅಂಗಡಿಗ್ಹೋಗ್ತೀನಿ,
ದೊಡ್ಡ ದುರ್ಬೀನ್ ತಂದು ದೇವ್ರನ್
ನೋಡೇ ಬಿಡ್ತೀನಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರ್ವಾಸರಿಗೆ
Next post ಹೊಸ ಹಾಡು

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…