Home / ಲೇಖನ / ಇತರೆ / ಹೊಸ ಹಾಡು

ಹೊಸ ಹಾಡು

ಪ್ರಿಯ ಸಖಿ,Sangeeta
ಗಳಿಗೆ ಗಳಿಗೆಗೂ ಹೊಸ ಹೊಸರೀತಿಗೆ
ಈ ಜಗವೋಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಓ ಜಗವೋಡುತಿದೆ
ಕವಿ ಪುತಿನ ಅವರ ‘ಹೊಸಹಾಡು’ ಕವನದ ಈ ಸಾಲುಗಳನ್ನು ಕೇಳಿದ್ದೀಯಲ್ಲವೇ? ಬದುಕು ನಿಂತ ನೀರಲ್ಲ ಅದು ನಿರಂತರ ಹೊಸತರ ಅನ್ವೇಷಕ.  ರೀತಿನೀತಿಗಳಿಗೆ ಜಗತ್ತು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಜೊತೆಗೇ ಹಳತೆಲ್ಲವನ್ನೂ ಗೇಲಿಮಾಡಿ ನಗುತ್ತಲೂ ಇರುತ್ತದೆ. ಕವಿ ಇಲ್ಲಿ ಹಾಗಿದ್ದರೆ ಹಳತೆಲ್ಲವೂ ವ್ಯರ್ಥವೇ? ಹೊಸತು ಯಾವುದೇ ಆದರೂ ಸರಿಯೇ? ಅದರ ಪೂರ್ವಪರ ವಿವೇಚಿಸದೇ ಅದನ್ನು ಅಪ್ಪಿಕೊಳ್ಳುವುದು ಸರಿಯೇ? ಎಂದು ಚಿಂತಿಸುತ್ತಾರೆ.

ಹೊಸತರಲ್ಲಿ ಗುಣಾವಗುಣಗಳಿರುವಂತೆ ಹಳತರಲ್ಲಿ ಕೂಡ ಗುಣಾವಗುಣಗಳಿವೆ. ಹೊಸತು-ಹಳತು ಎರಡರ ಧನಾತ್ಮಕ ಗುಣಗಳನ್ನೂ ಹೀರಿಕೊಂಡು ನಡೆದಾಗ ಮಾತ್ರ ಜಗತ್ತು ಪ್ರಗತಿಯನ್ನು ಸಾಧಿಸುತ್ತದೆ. ಷೋಪೆನ್ ಹಾರ್ ಎಂಬ ಚಿಂತಕ ‘ಹೊಸದು ಬರುವುದು. ಯಾವಾಗಲೂ ಹಳೆಯದರ ಆಧಾರದ ಮೇಲೆಯೇ’ ಎನ್ನುತ್ತಾರೆ. ವಿವೇಚನೆಯಿಲ್ಲದೇ, ಹೂಸತೆನ್ನುತ್ತಾ ವಿಜ್ಞಾನ, ತಂತ್ರಜ್ಞಾನದ ಹೆಸರಿನಲ್ಲಿ ಪ್ರಗತಿಯನ್ನು ಸಾಧಿಸಿದ್ದೇನೆಂದುಕೊಳ್ಳುತ್ತಾ ತನ್ನ ವಿನಾಶವನ್ನು ತಾನೇ ತೋಡಿಕೊಂಡರೆ ಅದು ಮೂರ್ಖತನವಲ್ಲವೇ? ಕವನದ ಕೊನೆಯಲಿ ಕವಿ
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಪ್ರಗತಿಯ ಹಂತಕೊ?
ಪ್ರಣಯ ದುರಂತಕೋ?
ಎಂದು ಪ್ರಶ್ನಿಸುತ್ತಾರೆ. ಹೊಸತೆಲ್ಲವನ್ನೂ ವಿವೇಚನೆಯಿಲ್ಲದೇ ಒಪ್ಪಿಕೊಂಡು ನಡೆದಾಗ ಅದು ನಮ್ಮನ್ನು ಪ್ರಳಯದ ಅಂಚಿಗೂ ತಂದು ನಿಲ್ಲಿಸಬಹುದಲ್ಲವೇ?

ಪ್ರಿಯ ಸಖಿ, ಹೊಸತೇ ಆಗಲಿ, ಹಳತೇ ಆಗಲಿ ಎಲ್ಲವನ್ನೂ ವಿವೇಚನೆಯ ಮೂಸೆಯಲ್ಲಿ ಬೇಯಿಸಿ ಉತ್ತಮವಾದುದನ್ನು ತೆಗೆದುಕೊಂಡು ಕೆಟ್ಟದನ್ನು ಬಿಟ್ಟಾಗ ಮಾತ್ರ ಪ್ರಗತಿ ಸಾಧ್ಯ. ಕಣ್ಣುಮುಚ್ಚಿ ಎಲ್ಲವನ್ನೂ ಸ್ವೀಕರಿಸಿದಲ್ಲಿ ಖಂಡಿತಾ ಪ್ರಳಯವೇ! ನಮ್ಮ ಕವಿವಾಣಿಯೇ ಹೇಳಿಲ್ಲವೆ? ‘ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು’ ಎಂದು ಬರಿಯ ಹಳತಿನಿಂದ ಅಥವಾ ಬರಿಯ ಹೊಸತಿನಿಂದ ವಿನಾಶ ಖಿಂಡಿತಾ ಎರಡರ ಸಮನ್ವಯವೇ ನಿಜವಾದ ಪ್ರಗತಿ ನೀನೇನೆನ್ನುತ್ತಿ ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್