Home / ಲೇಖನ / ಇತರೆ / ಹೊಸ ಹಾಡು

ಹೊಸ ಹಾಡು

ಪ್ರಿಯ ಸಖಿ,Sangeeta
ಗಳಿಗೆ ಗಳಿಗೆಗೂ ಹೊಸ ಹೊಸರೀತಿಗೆ
ಈ ಜಗವೋಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಓ ಜಗವೋಡುತಿದೆ
ಕವಿ ಪುತಿನ ಅವರ ‘ಹೊಸಹಾಡು’ ಕವನದ ಈ ಸಾಲುಗಳನ್ನು ಕೇಳಿದ್ದೀಯಲ್ಲವೇ? ಬದುಕು ನಿಂತ ನೀರಲ್ಲ ಅದು ನಿರಂತರ ಹೊಸತರ ಅನ್ವೇಷಕ.  ರೀತಿನೀತಿಗಳಿಗೆ ಜಗತ್ತು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಜೊತೆಗೇ ಹಳತೆಲ್ಲವನ್ನೂ ಗೇಲಿಮಾಡಿ ನಗುತ್ತಲೂ ಇರುತ್ತದೆ. ಕವಿ ಇಲ್ಲಿ ಹಾಗಿದ್ದರೆ ಹಳತೆಲ್ಲವೂ ವ್ಯರ್ಥವೇ? ಹೊಸತು ಯಾವುದೇ ಆದರೂ ಸರಿಯೇ? ಅದರ ಪೂರ್ವಪರ ವಿವೇಚಿಸದೇ ಅದನ್ನು ಅಪ್ಪಿಕೊಳ್ಳುವುದು ಸರಿಯೇ? ಎಂದು ಚಿಂತಿಸುತ್ತಾರೆ.

ಹೊಸತರಲ್ಲಿ ಗುಣಾವಗುಣಗಳಿರುವಂತೆ ಹಳತರಲ್ಲಿ ಕೂಡ ಗುಣಾವಗುಣಗಳಿವೆ. ಹೊಸತು-ಹಳತು ಎರಡರ ಧನಾತ್ಮಕ ಗುಣಗಳನ್ನೂ ಹೀರಿಕೊಂಡು ನಡೆದಾಗ ಮಾತ್ರ ಜಗತ್ತು ಪ್ರಗತಿಯನ್ನು ಸಾಧಿಸುತ್ತದೆ. ಷೋಪೆನ್ ಹಾರ್ ಎಂಬ ಚಿಂತಕ ‘ಹೊಸದು ಬರುವುದು. ಯಾವಾಗಲೂ ಹಳೆಯದರ ಆಧಾರದ ಮೇಲೆಯೇ’ ಎನ್ನುತ್ತಾರೆ. ವಿವೇಚನೆಯಿಲ್ಲದೇ, ಹೂಸತೆನ್ನುತ್ತಾ ವಿಜ್ಞಾನ, ತಂತ್ರಜ್ಞಾನದ ಹೆಸರಿನಲ್ಲಿ ಪ್ರಗತಿಯನ್ನು ಸಾಧಿಸಿದ್ದೇನೆಂದುಕೊಳ್ಳುತ್ತಾ ತನ್ನ ವಿನಾಶವನ್ನು ತಾನೇ ತೋಡಿಕೊಂಡರೆ ಅದು ಮೂರ್ಖತನವಲ್ಲವೇ? ಕವನದ ಕೊನೆಯಲಿ ಕವಿ
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಪ್ರಗತಿಯ ಹಂತಕೊ?
ಪ್ರಣಯ ದುರಂತಕೋ?
ಎಂದು ಪ್ರಶ್ನಿಸುತ್ತಾರೆ. ಹೊಸತೆಲ್ಲವನ್ನೂ ವಿವೇಚನೆಯಿಲ್ಲದೇ ಒಪ್ಪಿಕೊಂಡು ನಡೆದಾಗ ಅದು ನಮ್ಮನ್ನು ಪ್ರಳಯದ ಅಂಚಿಗೂ ತಂದು ನಿಲ್ಲಿಸಬಹುದಲ್ಲವೇ?

ಪ್ರಿಯ ಸಖಿ, ಹೊಸತೇ ಆಗಲಿ, ಹಳತೇ ಆಗಲಿ ಎಲ್ಲವನ್ನೂ ವಿವೇಚನೆಯ ಮೂಸೆಯಲ್ಲಿ ಬೇಯಿಸಿ ಉತ್ತಮವಾದುದನ್ನು ತೆಗೆದುಕೊಂಡು ಕೆಟ್ಟದನ್ನು ಬಿಟ್ಟಾಗ ಮಾತ್ರ ಪ್ರಗತಿ ಸಾಧ್ಯ. ಕಣ್ಣುಮುಚ್ಚಿ ಎಲ್ಲವನ್ನೂ ಸ್ವೀಕರಿಸಿದಲ್ಲಿ ಖಂಡಿತಾ ಪ್ರಳಯವೇ! ನಮ್ಮ ಕವಿವಾಣಿಯೇ ಹೇಳಿಲ್ಲವೆ? ‘ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು’ ಎಂದು ಬರಿಯ ಹಳತಿನಿಂದ ಅಥವಾ ಬರಿಯ ಹೊಸತಿನಿಂದ ವಿನಾಶ ಖಿಂಡಿತಾ ಎರಡರ ಸಮನ್ವಯವೇ ನಿಜವಾದ ಪ್ರಗತಿ ನೀನೇನೆನ್ನುತ್ತಿ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...