Home / ಲೇಖನ / ಇತರೆ / ಬಲಿಕತೆ

ಬಲಿಕತೆ

ಭವ್ಯ ಭಾರತ ಇನ್ನು ಓಬಿರಾಯನ ಕಾಲದಲ್ಲಿದೆಯೆನಿಸುವುದು. ಇನ್ನೂ ಹಳ್ಳಿಗಳಲ್ಲಿ ಕುಗ್ರಾಮಗಳಲ್ಲಿ ಜಾತಿ, ಮತ, ಕುಲ, ಭೇದಗಳ ಜೊತೆಗೆ ಕಂದಾಚಾರ ಮೂಢನಂಬಿಕೆಗಳ ಆಚರಣೆಗಳನ್ನು ಗಮನಿಸಿದರೆ ಇನ್ನೂ ತೀರಾ ಹಿಂದುಳಿದ ದೇಶವೆಂದು ಅನಿಸುವುದು.

ದಿನಾಂಕ ೨೭-೭-೨೦೧೫ರಲ್ಲಿ ಕಲಬುರ್ಗಿ ತಾಲ್ಲೂಕಿನ ಸೋಮನಾಥ ಹಳ್ಳಿಯಲ್ಲಿ ನಿಧಿಯ ದುರಾಸೆಗಾಗಿ ಐದು ವರ್ಷದ ಜ್ಯೋತಿ ಎಂಬ ಬಾಲಕಿಯನ್ನು ಬಲಿಕೊಡಲು ಯತ್ನಿಸಿದ ಆತಂಕಕಾರಿ ಭಯಂಕರ ಘಟನೆಯೊಂದು ಜರುಗಿದೆ. ಇಡೀ ಜಿಲ್ಲೆಯೇನು ಕನ್ನಡ ನಾಡೇ ತಲ್ಲಣಗೊಂಡಿದೆ.

ಸೋಮನಾಥ ಹಳ್ಳಿಯಲ್ಲಿ ಮಹಾ ಮಾಟಗಾರ ಬಸಣ್ಣ ಸಾಯಿಬಣ್ಣ ಡೆಂಬ್ರಿಯು ವಯಸ್ಸು ೭೨ ಆಗಿದ್ದು ಈತ ಈ ಹಿಂದೆ ದಿನಾಂಕ ೨೬-೧೧-೨೦೧೪ರಂದು ಫರಹತಾಬಾದ್ ಠಾಣೆಯ ವ್ಯಾಪ್ತಿಯಲ್ಲಿ ಈಗಾಗಲೇ ರೇಣುಕಾ ಎಂಬ ಪುಟ್ಟ ಬಾಲಕಿಯನ್ನು ಇದೇ ಬಸಣ್ಣ ಸಾಯಿಬಣ್ಣ ಡೆಂಗ್ರಿಯು ನಿಧಿಯ ದುರಾಸೆಗಾಗಿ ಬಲಿ ಕೊಟ್ಟಿದ್ದರಿಂದ ಈತನ ವಿರುದ್ಧ ಕೇವಲ ಕೊಲೆಯ ಕೇಸು ದಾಖಲಾಗಿತ್ತು ! ಈಗ ಕೊಲೆಯ ಯತ್ನದ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿದವನ್ನು ಬಿಟ್ಟಿದ್ದರಿಂದಲ್ಲವೇ ಇನ್ನೊಂದು ಮತ್ತೊಂದು ಮಗದೊಂದು ಕೊಲೆಗೆ ಯತ್ನ ನಡೆಸಿರುವುದೆಂದು ಇಡೀ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವರು.

ದಿನಾಂಕ ೨೭-೦೭-೨೦೧೫ರಂದು ಮಂಗಳವಾರದ ದಿನದಂದು ಜ್ಯೋತಿ ಎಂಬ ಬಾಲಕಿಗೆ “ನನ್ನ ಮನೆಯ ಬಳಿ ನಿಧಿ ಇದೆ. ನಿನ್ನನ್ನು ಬಲಿ ಕೊಟ್ಟರೆ ನನಗೆ ನಿಧಿಯು ಸಿಗುವುದು. ನಿನಗೆ ಸ್ವರ್ಗ ಲಭಿಸುವುದು” ಎಂದು ಏನೇನೋ ಆಮಿಷವೊಡ್ಡಿ ಬಾಲಕಿಯನ್ನು ಉಪಾಯವಾಗಿ ತನ್ನ ಮನೆಗೆ ಈ ಮಾಟಗಾರ ಕರೆದುಕೊಂಡು ಹೋಗಿದ್ದ! ಅಂದು ಮಾಟದ ವಿಧಿ ವಿಧಾನ ಯಂತ್ರ, ಮಂತ್ರ, ತಂತ್ರ ಎಲ್ಲಾ ವಿದ್ಯೆ ಪೂರೈಸಿ ಇನ್ನೇನು ಬಲಿ ನೀಡಬೇಕು.

ಅಷ್ಟರಲ್ಲಿ- ಈ ಸುದ್ದಿ ಮಹಿಳೆಯೊಬ್ಬರಿಗೆ ಈ ವಿಷಯ ತಿಳಿದಿದೆ ಆಕೆ ಜನರಿಗೆ ತಿಳಿಸಿದ್ದಾಳೆ ಅವರೆಲ್ಲಾ ಆತನ ಮನೆಗೆ ನುಗ್ಗಿ ದಾಂಧಲೆ ನಡೆಸಿದಾಗ ಬಾಲಕಿ ಅವನಿಂದ ತಪ್ಪಿಸಿಕೊಂಡಳು. ಜನರು ಕುಪಿತಗೊಂಡು ಅವನನ್ನು ಹಿಗ್ಗಾಮುಗ್ಗಾ ಬಡಿದಿದ್ದಾರೆ! ಪೊಲೀಸ್‌ನವರಿಗೆ ಬಾಲಕಿಯ ತಂದೆ ದೇವೇಂದ್ರ ಅವರು ದೂರು ಸಲ್ಲಿಸಿರುವರು ಮಾಟಗಾರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈಗ ಈ ಹಳ್ಳಿಯಲ್ಲಿ ಏನು? ಸುತ್ತ ೧೮ ಹಳ್ಳಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ! ಚಿಕ್ಕಚಿಕ್ಕ ಹೆಣ್ಣು ಮಕ್ಕಳನ್ನು ಬಲಿಕೊಡುವರೆಂದು… ಇದರ ನಿವಾರಣೆ ಹೆಣ್ಣುಮಕ್ಕಳ ರಕ್ಷಣೆ ಎಲ್ಲರ ಕೆಲಸವಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...