Home / ಲೇಖನ / ವಿಜ್ಞಾನ / ಶುದ್ಧ ರಕ್ತಕ್ಕೂ ಬರ ಬರಬಹುದೆ?

ಶುದ್ಧ ರಕ್ತಕ್ಕೂ ಬರ ಬರಬಹುದೆ?

ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ ಆಗುವ ಅಪಾಯವನ್ನು ಮನಗಂಡಿದೆ. ಬಂಡವಾಳಶಾಹಿ ನಾಡುಗಳು ಕೀಟನಾಶಕ ನಂಜನ್ನು ಅಭಿವೃದ್ಧಿ ಶೀಲನಾಡುಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಕಳಿಸುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ವಿಶ್ವಸಂಸ್ಥೆಯ ಆರೋಗ್ಯ ಘಟಕ ತಡೆಯುವಲ್ಲಿ ವಿಫಲವಾಗಿದೆ.

ಅಮೇರಿಕಾ ದೇಶದಲ್ಲಿ D.D.T ಯ ಮೇಲೆ ನಿರ್ಬಂಧ ಇರುವುದರಿಂದ ಇಲ್ಲಿಯ ಜನ ನಂಜಿನ ಅಂಶದಿಂದ ಸ್ವಲ್ಪ ಮುಕ್ತರೆನ್ನಬಹುದು. ಭಾರತದ ಮುಂಬೈ ನಗರ ವಾಸಿಗಳ ರಕ್ತದಲಿ ಅತಿಹೆಚ್ಚು ಕೀಟನಾಶಕ ನಂಜು ಪತ್ತೆಯಾಗಿದೆ, ರಕ್ತವನ್ನು ಸೇರುವ P.E.B.ಕೀಟನಾಶಕ ನಂಜು, ಹುಟ್ಟುವ ಸಂತಾನದ ಮೇಲೂ ಪರಿಣಾಮ ಬೀರುತ್ತದೆಂಬುವುದು ಕಳವಳಕಾರಿ ಅಂಶವಾಗಿದೆ. ಈ ಬಗೆಗೆ ಸಾವಿರಾರು ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗಂಡಸರು ತಮ್ಮ ವಿರ್ಯಾಣು ಶಕ್ತಿಯನ್ನು ಕುಂದಿಸಿಕೊಂಡಿರುವುದೂ ಹೆಂಗಸರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಿರುವುದೂ ಪತ್ತೆಯಾಗಿದೆ. ರಕ್ತಸೇರಿದ ಈ ಕೀಟನಾಶಕದ ಈ ನಂಜು ದೈಹಿಕ ಬೆಳವಣಿಗೆಗೆ, ಉಸಿರಾಟಕ್ಕೆ ದುಷ್ಪರಿಣಾಮ ಬೀರುತ್ತದೆ. ಕೀಟನಾಶಕ ಬಳಕೆಯ ನಾಡುಗಳ ಜನರನ್ನು ಪರೀಕ್ಷಿಸಿದಾಗ ಶೇ.೮೦ ರಷ್ಟು ನೇರವಾಗಿ ಈ ನಂಜಿನಿಂದ ಆರೋಗ್ಯವಂಚಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ D.D.T ಯ ನಂಜು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆಯಾದರೂ ಫ್ಲೋಲಿಕ್ಲೋರಿನೆಟೆಡ್ ಬೈಡೆನೆಲ್ಸ್‌ ನಂಜಿನ ಪ್ರಮಾಣ ಕಡಿಮೆಯಾಗಿಲ್ಲ. ಅಮೇರಿಕಾದಲ್ಲಿಯ ಸಂಶೋಧನೆಯಂತೆ ೧೯೮೫ ರ ಸಂದರ್ಭದಲ್ಲಿ ೨.೦ ಯಿಂದ ೧೯.೩ ಮಿಲಿ ಲೀಟರ್ D.D.T. ಅಂಶ ಜನರ ನೆತ್ತರು ಸೇರಿ ವಿವಿಧ ತೊಂದರೆಗಳಿಗೆ ಕಾರಣವಾಗಿದೆ. ಭಾರತದ ದೆಹಲಿ, ಅಹಮದಾಬಾದ್ ವಾಸಿಗಳಲ್ಲಿ ೩೭.೩ ಮಿ.ಲೀಟರ್ ಹಳ್ಳಿಗಾಡು ಜನರಲ್ಲಿ ೮.೬ ಮಿಲಿ ಲೀಟರ್ D.D.T. ಅಂಶ ರಕ್ತದಲ್ಲಿಸೇರಿಕೊಂಡಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿಯೂ ಸಹ ಮೇಲಿನ ಸ್ಥಿತಿಯೇ ಇದೆ. ಉಷ್ಣಪ್ರದೇಶದಲ್ಲಿನ ಕೀಟನಾಶಕ ನಂಜು ಬಿಸಿಗಾಳಿ ಈ ಪ್ರದೇಶಕ್ಕೆ ಸಹಜವಾಗಿ ದಾಳಿ ಮಾಡುತ್ತಿರುವುದೇ ಇಂದಿನ ಎತ್ತರ ಧೃವ ಪ್ರದೇಶದ ಆತಂಕಕ್ಕೆ ಕಾರಣವಾಗಿದೆ. ಉತ್ತರ ದೃವದ ನೀರಿನಲ್ಲಿ ಈಗಾಗಲೇ ೮,೪೦೦ ಟನ್‌ಗಳಷ್ಟು, B.H.E. ಕೀಟನಾಶಕ ನಂಜು ಸೇರಿದೆ. ಭಾರತ ಉತ್ತರ ಗಡಿಪ್ರದೇಶದಲ್ಲಿರುವ ಹಿಮಾಲಯವು ತಂಪು ಪ್ರದೇಶವಾದುದರಿಂದ ಹಿಮಾಲಯದ ತಪ್ಪಲು ಇಂದು ಕೀಟನಾಶಕ ರೋಗ ನಿರೋಧಕದ ನಂಜಿನಿಂದ ಬಸವಳಿದೆ. ಹೀಗೆ ಈ ಕೀಟನಾಶಕಗಳ ಹಾವಳಿಯಿಂದ ಮುಂದೊಂದು ದಿನ ಮನುಷ್ಯನ ರಕ್ತ ಮಲಿನಗೊಂಡು ಶುದ್ದವಾದ ರಕ್ತ ದೊರೆಯುವ ಸಂಭವವೇ ಇಲ್ಲದಾಗುತ್ತದೇನೋ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...