Home / ಲೇಖನ / ವಿಜ್ಞಾನ / ಶುದ್ಧ ರಕ್ತಕ್ಕೂ ಬರ ಬರಬಹುದೆ?

ಶುದ್ಧ ರಕ್ತಕ್ಕೂ ಬರ ಬರಬಹುದೆ?

ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ ಆಗುವ ಅಪಾಯವನ್ನು ಮನಗಂಡಿದೆ. ಬಂಡವಾಳಶಾಹಿ ನಾಡುಗಳು ಕೀಟನಾಶಕ ನಂಜನ್ನು ಅಭಿವೃದ್ಧಿ ಶೀಲನಾಡುಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಕಳಿಸುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ವಿಶ್ವಸಂಸ್ಥೆಯ ಆರೋಗ್ಯ ಘಟಕ ತಡೆಯುವಲ್ಲಿ ವಿಫಲವಾಗಿದೆ.

ಅಮೇರಿಕಾ ದೇಶದಲ್ಲಿ D.D.T ಯ ಮೇಲೆ ನಿರ್ಬಂಧ ಇರುವುದರಿಂದ ಇಲ್ಲಿಯ ಜನ ನಂಜಿನ ಅಂಶದಿಂದ ಸ್ವಲ್ಪ ಮುಕ್ತರೆನ್ನಬಹುದು. ಭಾರತದ ಮುಂಬೈ ನಗರ ವಾಸಿಗಳ ರಕ್ತದಲಿ ಅತಿಹೆಚ್ಚು ಕೀಟನಾಶಕ ನಂಜು ಪತ್ತೆಯಾಗಿದೆ, ರಕ್ತವನ್ನು ಸೇರುವ P.E.B.ಕೀಟನಾಶಕ ನಂಜು, ಹುಟ್ಟುವ ಸಂತಾನದ ಮೇಲೂ ಪರಿಣಾಮ ಬೀರುತ್ತದೆಂಬುವುದು ಕಳವಳಕಾರಿ ಅಂಶವಾಗಿದೆ. ಈ ಬಗೆಗೆ ಸಾವಿರಾರು ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗಂಡಸರು ತಮ್ಮ ವಿರ್ಯಾಣು ಶಕ್ತಿಯನ್ನು ಕುಂದಿಸಿಕೊಂಡಿರುವುದೂ ಹೆಂಗಸರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಿರುವುದೂ ಪತ್ತೆಯಾಗಿದೆ. ರಕ್ತಸೇರಿದ ಈ ಕೀಟನಾಶಕದ ಈ ನಂಜು ದೈಹಿಕ ಬೆಳವಣಿಗೆಗೆ, ಉಸಿರಾಟಕ್ಕೆ ದುಷ್ಪರಿಣಾಮ ಬೀರುತ್ತದೆ. ಕೀಟನಾಶಕ ಬಳಕೆಯ ನಾಡುಗಳ ಜನರನ್ನು ಪರೀಕ್ಷಿಸಿದಾಗ ಶೇ.೮೦ ರಷ್ಟು ನೇರವಾಗಿ ಈ ನಂಜಿನಿಂದ ಆರೋಗ್ಯವಂಚಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ D.D.T ಯ ನಂಜು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆಯಾದರೂ ಫ್ಲೋಲಿಕ್ಲೋರಿನೆಟೆಡ್ ಬೈಡೆನೆಲ್ಸ್‌ ನಂಜಿನ ಪ್ರಮಾಣ ಕಡಿಮೆಯಾಗಿಲ್ಲ. ಅಮೇರಿಕಾದಲ್ಲಿಯ ಸಂಶೋಧನೆಯಂತೆ ೧೯೮೫ ರ ಸಂದರ್ಭದಲ್ಲಿ ೨.೦ ಯಿಂದ ೧೯.೩ ಮಿಲಿ ಲೀಟರ್ D.D.T. ಅಂಶ ಜನರ ನೆತ್ತರು ಸೇರಿ ವಿವಿಧ ತೊಂದರೆಗಳಿಗೆ ಕಾರಣವಾಗಿದೆ. ಭಾರತದ ದೆಹಲಿ, ಅಹಮದಾಬಾದ್ ವಾಸಿಗಳಲ್ಲಿ ೩೭.೩ ಮಿ.ಲೀಟರ್ ಹಳ್ಳಿಗಾಡು ಜನರಲ್ಲಿ ೮.೬ ಮಿಲಿ ಲೀಟರ್ D.D.T. ಅಂಶ ರಕ್ತದಲ್ಲಿಸೇರಿಕೊಂಡಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿಯೂ ಸಹ ಮೇಲಿನ ಸ್ಥಿತಿಯೇ ಇದೆ. ಉಷ್ಣಪ್ರದೇಶದಲ್ಲಿನ ಕೀಟನಾಶಕ ನಂಜು ಬಿಸಿಗಾಳಿ ಈ ಪ್ರದೇಶಕ್ಕೆ ಸಹಜವಾಗಿ ದಾಳಿ ಮಾಡುತ್ತಿರುವುದೇ ಇಂದಿನ ಎತ್ತರ ಧೃವ ಪ್ರದೇಶದ ಆತಂಕಕ್ಕೆ ಕಾರಣವಾಗಿದೆ. ಉತ್ತರ ದೃವದ ನೀರಿನಲ್ಲಿ ಈಗಾಗಲೇ ೮,೪೦೦ ಟನ್‌ಗಳಷ್ಟು, B.H.E. ಕೀಟನಾಶಕ ನಂಜು ಸೇರಿದೆ. ಭಾರತ ಉತ್ತರ ಗಡಿಪ್ರದೇಶದಲ್ಲಿರುವ ಹಿಮಾಲಯವು ತಂಪು ಪ್ರದೇಶವಾದುದರಿಂದ ಹಿಮಾಲಯದ ತಪ್ಪಲು ಇಂದು ಕೀಟನಾಶಕ ರೋಗ ನಿರೋಧಕದ ನಂಜಿನಿಂದ ಬಸವಳಿದೆ. ಹೀಗೆ ಈ ಕೀಟನಾಶಕಗಳ ಹಾವಳಿಯಿಂದ ಮುಂದೊಂದು ದಿನ ಮನುಷ್ಯನ ರಕ್ತ ಮಲಿನಗೊಂಡು ಶುದ್ದವಾದ ರಕ್ತ ದೊರೆಯುವ ಸಂಭವವೇ ಇಲ್ಲದಾಗುತ್ತದೇನೋ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...