ಆ ದೇವರಿತ್ತ ಈ ವರವ

ಆ ದೇವರಿತ್ತ ಈ ವರವ
ನೀನೆಂದು ಭಾವಿಸಿ ನಿನ್ನ ಪ್ರೀತಿಸುವೆ|
ನಿನ್ನ ಒಳಿತಿಗಾಗೆನ್ನ
ಜೀವನವ ಮೀಸಲಿಡುವೆ|
ಓ ನನ್ನ ಮಗುವೇ||

ಎಷ್ಟೇ ಕಷ್ಟವು ಬಂದರೆ ನನಗೆ
ನೆರಳಾಗಿ ನಾನಿರುವೆ ನಿನ್ನ ಜೊತೆಗೆ|
ಕಣ್ಣರೆಪ್ಪೆಯಂದದಿ ಕಾಯುವೆಹೊರಗೆ
ತಾಯಿಯ ಪ್ರೀತಿಯನೆಲ್ಲವಾ
ಧಾರೆಯೆರೆಯುವೆ ನಿನಗೆ|
ಉಳಿದಿರುವೆ ನೀನೊಬ್ಬಳೆ
ನನ್ನಯ ಪಾಲಿಗೆ|
ನಾಳಿನ ಭರವಸೆ ನೀನೆನಗೆ||

ಚಿಂತಿಸದಿರು ನೀ
ಅಪ್ಪನಾ ನೆನೆ ನೆನೆದು
ಅದೃಷ್ಟವದು ಕೈ ಬಿಟ್ಟಿತು ನಮಗೆ|
ಅಮ್ಮ ಅಪ್ಪನು ನಾನಾಗಿ
ಬೆಳೆಸುವೆ ಈ ನಿನ್ನನು|
ನನ್ನ ಬದುಕು ನಿನಗಾಗೆ
ನಿನ್ನ ಒಂದೊಂದು ನಗೆ
ಕೋಲ್ಮಿಂಚ ಬೆಳಕು ನನ್ನ
ಈ ಕಾಳಿರುಳ ಬಾಳಿಗೆ|
ನಿನ್ನ ತುಂಟತನವೇ ಚೇತನ
ನನ್ನ ಜಡತ್ವದ ಜೀವನ ಹಾದಿಗೆ||

ನಾಳಿನ ಭರವಸೆಯಲಿ ಬದುಕೋಣ
ಆ ದೇವರ ನಂಬುತಲಿ ಸಾಗೋಣ||
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುದ್ಧ ರಕ್ತಕ್ಕೂ ಬರ ಬರಬಹುದೆ?
Next post ಬೆವರಿನ ಹಾಡು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…