ಆ ದೇವರಿತ್ತ ಈ ವರವ

ಆ ದೇವರಿತ್ತ ಈ ವರವ
ನೀನೆಂದು ಭಾವಿಸಿ ನಿನ್ನ ಪ್ರೀತಿಸುವೆ|
ನಿನ್ನ ಒಳಿತಿಗಾಗೆನ್ನ
ಜೀವನವ ಮೀಸಲಿಡುವೆ|
ಓ ನನ್ನ ಮಗುವೇ||

ಎಷ್ಟೇ ಕಷ್ಟವು ಬಂದರೆ ನನಗೆ
ನೆರಳಾಗಿ ನಾನಿರುವೆ ನಿನ್ನ ಜೊತೆಗೆ|
ಕಣ್ಣರೆಪ್ಪೆಯಂದದಿ ಕಾಯುವೆಹೊರಗೆ
ತಾಯಿಯ ಪ್ರೀತಿಯನೆಲ್ಲವಾ
ಧಾರೆಯೆರೆಯುವೆ ನಿನಗೆ|
ಉಳಿದಿರುವೆ ನೀನೊಬ್ಬಳೆ
ನನ್ನಯ ಪಾಲಿಗೆ|
ನಾಳಿನ ಭರವಸೆ ನೀನೆನಗೆ||

ಚಿಂತಿಸದಿರು ನೀ
ಅಪ್ಪನಾ ನೆನೆ ನೆನೆದು
ಅದೃಷ್ಟವದು ಕೈ ಬಿಟ್ಟಿತು ನಮಗೆ|
ಅಮ್ಮ ಅಪ್ಪನು ನಾನಾಗಿ
ಬೆಳೆಸುವೆ ಈ ನಿನ್ನನು|
ನನ್ನ ಬದುಕು ನಿನಗಾಗೆ
ನಿನ್ನ ಒಂದೊಂದು ನಗೆ
ಕೋಲ್ಮಿಂಚ ಬೆಳಕು ನನ್ನ
ಈ ಕಾಳಿರುಳ ಬಾಳಿಗೆ|
ನಿನ್ನ ತುಂಟತನವೇ ಚೇತನ
ನನ್ನ ಜಡತ್ವದ ಜೀವನ ಹಾದಿಗೆ||

ನಾಳಿನ ಭರವಸೆಯಲಿ ಬದುಕೋಣ
ಆ ದೇವರ ನಂಬುತಲಿ ಸಾಗೋಣ||
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುದ್ಧ ರಕ್ತಕ್ಕೂ ಬರ ಬರಬಹುದೆ?
Next post ಬೆವರಿನ ಹಾಡು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…