Home / ಕವನ / ಕವಿತೆ / ಸ್ತ್ರೀ ರೋಧನೆ

ಸ್ತ್ರೀ ರೋಧನೆ

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ
ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ?

ಜನನದೊಂದಿಗೆ ಸಂಕಷ್ಟ
ಚಿಕ್ಕಂದಿನಿಂದಲೇ ಬಡತನ
ಜ್ಞಾನಾರ್ಜನೆಗೆ ಕೊರತೆ
ಕುಟುಂಬದಲ್ಲಿ ಪ್ರೀತಿ ನಾ ಕಾಣೆ
ಸರ್ವರ ಕಾಟಕ್ಕೆ ನಾ ಬಲಿಪಶು
ಹೆಣ್ಣಿಗೆ ಇಂಥ ಜೀವನ ಬೇಕೇ?

ಸ್ತ್ರೀಯು ಪ್ರತಿಯೊಬ್ಬರ
ಮನಗೆಲ್ಲಲು ಹಗಲಿರುಳು ಪ್ರಯತ್ನ
ನಂಬಿಗಸ್ಥ ಪುರುಷನೊಂದಿಗೆ
ಸಹವಾಸ ಜೀವನ ನರಕ
ಹುಟ್ಟಿ ಬಂದೆ ನಾ ಈ ಭವದೊಳಗ
ಕೆಟ್ಟು ಹೋದೆ ನಾ ಪುರುಷ ಸಹವಾಸಕ್ಕೆ
ಕಲಿಯುಗದಲ್ಲಿ ಇಲ್ಲ ಸುಖಿ ಜೀವನ
ಬಾಳ್ವೆ ಮಾಡು ನೀ ದುಖಿ ಜೀವನ.

ನಾವೆಲ್ಲಿ ನೋಡಿದಲ್ಲಿ
ಸ್ತ್ರೀ ಬದುಕು ಸಂಕಷ್ಟದಲ್ಲಿ
ಎಲ್ಲಿ ಯಾವಾಗ ಬರಲಿ ಮಾತು
ಬರಲಿ ಸ್ತ್ರೀಗೆ ದುಖಿ ಜೀವನ
ಬಿಳಿಯ ಹಾಳೆಯೇ ಮಹಿಳೆ ಬದುಕು
ಅಳಿದರೆ ಉಳಿವು ಅಸಾಧ್ಯ
ಸಂಕಷ್ಟ ಶೃಂಖಲೆ ಬದುಕು

ಭುವಿಯ ಮೇಲೆ ಮಡುಗಟ್ಟಿ
ನಿಂತಿದೇ ಅಮಾನವೀಯ ಹೆಣ್ಣಿನ ರೋಧನೆ
ಆಲಿಸೋ ಮಹಿಳೆ ಭವಣೆ
ರಕ್ಷಿಸೋ ಹೆಣ್ಣ ಜಾತಿಯ
ಬೆಳೆಸಿ ಉಳಿಸೋ ಧರೆಯಲ್ಲಿ
ಕೊರೆದು ಕೊರೆದು ಸಾವನ್ನಪ್ಪುತಿದೆ
ಜಗದೆಲ್ಲೆಡೆಯೂ ಮಹಿಳೆಯ ಜೀವ
ಜನ್ಮ ನೀಡಿದರೆ ಸಿರಿವಂತ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...