ಸ್ತ್ರೀ ರೋಧನೆ

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ
ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ?

ಜನನದೊಂದಿಗೆ ಸಂಕಷ್ಟ
ಚಿಕ್ಕಂದಿನಿಂದಲೇ ಬಡತನ
ಜ್ಞಾನಾರ್ಜನೆಗೆ ಕೊರತೆ
ಕುಟುಂಬದಲ್ಲಿ ಪ್ರೀತಿ ನಾ ಕಾಣೆ
ಸರ್ವರ ಕಾಟಕ್ಕೆ ನಾ ಬಲಿಪಶು
ಹೆಣ್ಣಿಗೆ ಇಂಥ ಜೀವನ ಬೇಕೇ?

ಸ್ತ್ರೀಯು ಪ್ರತಿಯೊಬ್ಬರ
ಮನಗೆಲ್ಲಲು ಹಗಲಿರುಳು ಪ್ರಯತ್ನ
ನಂಬಿಗಸ್ಥ ಪುರುಷನೊಂದಿಗೆ
ಸಹವಾಸ ಜೀವನ ನರಕ
ಹುಟ್ಟಿ ಬಂದೆ ನಾ ಈ ಭವದೊಳಗ
ಕೆಟ್ಟು ಹೋದೆ ನಾ ಪುರುಷ ಸಹವಾಸಕ್ಕೆ
ಕಲಿಯುಗದಲ್ಲಿ ಇಲ್ಲ ಸುಖಿ ಜೀವನ
ಬಾಳ್ವೆ ಮಾಡು ನೀ ದುಖಿ ಜೀವನ.

ನಾವೆಲ್ಲಿ ನೋಡಿದಲ್ಲಿ
ಸ್ತ್ರೀ ಬದುಕು ಸಂಕಷ್ಟದಲ್ಲಿ
ಎಲ್ಲಿ ಯಾವಾಗ ಬರಲಿ ಮಾತು
ಬರಲಿ ಸ್ತ್ರೀಗೆ ದುಖಿ ಜೀವನ
ಬಿಳಿಯ ಹಾಳೆಯೇ ಮಹಿಳೆ ಬದುಕು
ಅಳಿದರೆ ಉಳಿವು ಅಸಾಧ್ಯ
ಸಂಕಷ್ಟ ಶೃಂಖಲೆ ಬದುಕು

ಭುವಿಯ ಮೇಲೆ ಮಡುಗಟ್ಟಿ
ನಿಂತಿದೇ ಅಮಾನವೀಯ ಹೆಣ್ಣಿನ ರೋಧನೆ
ಆಲಿಸೋ ಮಹಿಳೆ ಭವಣೆ
ರಕ್ಷಿಸೋ ಹೆಣ್ಣ ಜಾತಿಯ
ಬೆಳೆಸಿ ಉಳಿಸೋ ಧರೆಯಲ್ಲಿ
ಕೊರೆದು ಕೊರೆದು ಸಾವನ್ನಪ್ಪುತಿದೆ
ಜಗದೆಲ್ಲೆಡೆಯೂ ಮಹಿಳೆಯ ಜೀವ
ಜನ್ಮ ನೀಡಿದರೆ ಸಿರಿವಂತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸ್ಸಿನಿಂದ ಇಳಿದವಳಿಗೆ
Next post ಹೂಜಿ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…