ಸ್ತ್ರೀ ರೋಧನೆ

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ
ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ?

ಜನನದೊಂದಿಗೆ ಸಂಕಷ್ಟ
ಚಿಕ್ಕಂದಿನಿಂದಲೇ ಬಡತನ
ಜ್ಞಾನಾರ್ಜನೆಗೆ ಕೊರತೆ
ಕುಟುಂಬದಲ್ಲಿ ಪ್ರೀತಿ ನಾ ಕಾಣೆ
ಸರ್ವರ ಕಾಟಕ್ಕೆ ನಾ ಬಲಿಪಶು
ಹೆಣ್ಣಿಗೆ ಇಂಥ ಜೀವನ ಬೇಕೇ?

ಸ್ತ್ರೀಯು ಪ್ರತಿಯೊಬ್ಬರ
ಮನಗೆಲ್ಲಲು ಹಗಲಿರುಳು ಪ್ರಯತ್ನ
ನಂಬಿಗಸ್ಥ ಪುರುಷನೊಂದಿಗೆ
ಸಹವಾಸ ಜೀವನ ನರಕ
ಹುಟ್ಟಿ ಬಂದೆ ನಾ ಈ ಭವದೊಳಗ
ಕೆಟ್ಟು ಹೋದೆ ನಾ ಪುರುಷ ಸಹವಾಸಕ್ಕೆ
ಕಲಿಯುಗದಲ್ಲಿ ಇಲ್ಲ ಸುಖಿ ಜೀವನ
ಬಾಳ್ವೆ ಮಾಡು ನೀ ದುಖಿ ಜೀವನ.

ನಾವೆಲ್ಲಿ ನೋಡಿದಲ್ಲಿ
ಸ್ತ್ರೀ ಬದುಕು ಸಂಕಷ್ಟದಲ್ಲಿ
ಎಲ್ಲಿ ಯಾವಾಗ ಬರಲಿ ಮಾತು
ಬರಲಿ ಸ್ತ್ರೀಗೆ ದುಖಿ ಜೀವನ
ಬಿಳಿಯ ಹಾಳೆಯೇ ಮಹಿಳೆ ಬದುಕು
ಅಳಿದರೆ ಉಳಿವು ಅಸಾಧ್ಯ
ಸಂಕಷ್ಟ ಶೃಂಖಲೆ ಬದುಕು

ಭುವಿಯ ಮೇಲೆ ಮಡುಗಟ್ಟಿ
ನಿಂತಿದೇ ಅಮಾನವೀಯ ಹೆಣ್ಣಿನ ರೋಧನೆ
ಆಲಿಸೋ ಮಹಿಳೆ ಭವಣೆ
ರಕ್ಷಿಸೋ ಹೆಣ್ಣ ಜಾತಿಯ
ಬೆಳೆಸಿ ಉಳಿಸೋ ಧರೆಯಲ್ಲಿ
ಕೊರೆದು ಕೊರೆದು ಸಾವನ್ನಪ್ಪುತಿದೆ
ಜಗದೆಲ್ಲೆಡೆಯೂ ಮಹಿಳೆಯ ಜೀವ
ಜನ್ಮ ನೀಡಿದರೆ ಸಿರಿವಂತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸ್ಸಿನಿಂದ ಇಳಿದವಳಿಗೆ
Next post ಹೂಜಿ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…