Home / ಕವನ / ಕವಿತೆ / ಸ್ವರ್ಣ ಕಾಲ

ಸ್ವರ್ಣ ಕಾಲ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ
ಅಟ್ಟೂರ ಗ್ರಾಮ ಪಾಟೀಲ ಕುಟುಂಬದ
ಸಿರಿವಂತ ಮನೆತನದಲ್ಲಿ ಜನಿಸಿದಿ
ಜನರ ಸೇವೆಗೈಯುತಾ ನೀ ನಡದಿ

ಪ್ರಜಾಪ್ರಭುತ್ವ ಅರ್ಥ ತಿಳಕೊಂಡಿದಿ
ಹಗಲಿರುಳು ಎನ್ನದೆ ದುಡಿದು
ಜನತೆಯ ಮನಮನೆಯುದ್ದಕ್ಕೂ ಮನಸೆಳೆದು
ನೆಲೆ ನಿಂತಿದಿ ಉನ್ನತ ಸಚಿವ ಸ್ಥಾನ ಗಿಟ್ಟಿಸಿಕೊಂಡಿದಿ.

ಜಿಲ್ಲೆಯ ಜನಪ್ರಿಯ ಶಾಸಕನಾಗಿದಿ
ಜಿಲ್ಲೆಯ ನಿಷ್ಠಾವಂತ ದಂಡನಾಯಕನಾಗಿದಿ
ಜನತೆಯ ತೊಂದರೆ ನಿವಾರಣೆಯ ನಾಯಕನಾದಿ
ವೀರಾದಿ ವೀರ ರಾಜಕಾರಣಿಯಾದಿ.

ತನುಮನಧನದಿ ಕಾರ್ಯ ಮಾಡಿದಿ
ಪಕ್ಷಭೇದ ಮರೆತು ಸಾರ್ವಜನಿಕವಾದಿ
ಸಭೆ ಸಮಾರಂಭಕ್ಕೆ ಭಾಗಿಯಾಗಿ ಸನ್ಮಾನಿತನಾದಿ
ಜನರ ಪ್ರೀತಿಗೆ ಮಾದರಿಯ ಪಾತ್ರನಾದಿ.

ಹೆಗಡೆ ಮಂತ್ರಿ ಮಂತಿಯಾಗಿ ದುಡಿದಿದಿ
ಒಳ್ಳೆಯ ಸಾಧನೆ ಸಾಧಿಸುವಲ್ಲಿ ಸಫಲನಾದಿ
ಪುನಃ ರಾಜ್ಯದ ಜನತೆಯ ಸೇವೆಗಾಗಿ ನಿಂತಿದಿ
ಧೈರ್ಯ ಸ್ಥೈರ್ಯದಿ ಎದೆತಟ್ಟಿನಿಂತಿದಿ.

ಹಿಂದಿನ ಪಟೇಲ ಮಂತ್ರಿಮಂಡಲದ
ಹಿರಿಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ
ಬೀದರ ಜಿಲ್ಲೆಯುದ್ದಕ್ಕೂ ಹರ್ಷೋದ್ಘಾರ
ಸುವರ್ಣಕಾಲ ಹೊಸ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಅಟ್ಟೂರ
*****
೧೯೯೬

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...