ಹೊಸ ದೇವರ ಬರವಿಗಾಗಿ

ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ?
ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ?
ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ
ಸತ್ತ ನೀ ಮರಳಿ ಬರಲಿಲ್ಲ!

ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು
ಬಾಲಕರು ಬಂದು ಹರಸಿದರೂ
ಮಾಡಿಟ್ಟ ನೈವೇದ್ಯ ಹಳಸಿದರೂ
ಕೂಗಿದರೂ ಓಗೊಲಿಲ್ಲ
ಪಾತಾಳದಿಂದ ಬಲೀಂದ್ರ ಬರಲಿಲ್ಲ ಮತ್ತಿಲ್ಲಿಗೆ

ಸತ್ತರೆ ಅಜೀರ್ಣದಿಂದ ಇಂದ್ರಾಗ್ನಿ ವರುಣರು ಮತ್ತೆ ಹುಟ್ಟಲಿಲ್ಲ
ಈ ಬ್ರಹ್ಮವಿಷ್ಣುರುದ್ರರೂ ವಯೋವೃದ್ಧರಾಗಿ ಮನುಷ್ಯ
ಜನಾಂಗ ಸ್ವರ್ಗ‍ದ ಸಂಪರ್ಕ ಕಳೆದಾಗ
ಸ್ವಂತ ಭೂಖಂಡವೂ ಕತ್ತಲೆಯ ಅಭೇದ್ಯ ಖಂಡ
ಅರ್ಥ ಚ್ಯುತಿಗೊಂಡ ಭಾಷೆ ಬರೇ ಗೊಂದಲಗೇರಿ ಸದ್ದುಗದ್ದಲದ
ಸುತ್ತು ಮುಖಗಳ ಮೇಲೆ ಕಿತ್ತರೂ ಬಾರದಂಥ ಅಂಟುಮೌನ
ಅಂತರ್ಮುಖದೊಳಗೆ ಕೂಡ ಅಪರಿಚಿತತ್ವ ಮುಖಾಮುಖಿಯ
ಈ ಹೆಪ್ಪುಗತ್ತಲೆಯಲ್ಲಿ ಹುಡುಕಿದರೆ

ಕ್ಯೂಬ ಬೊಲೀವಿಯಾ ಶೇಗವೇರಾ ಸಹ ದಾಟಿ
ಮತ್ತೆ ಹಿಪ್ಪಿ ಅತಿಮಾನಸಗಳನ್ನೂ ಅತಿಕ್ರಮಿಸಿ
ಅಂತ್ಯಗಳನ್ನೂ ಸೀಮೆಗಳನ್ನೂ ತಿರಸ್ಕರಿಸಿ
ಬೆಳೆದರೆ ಜೀವವಿಕಾಸವಲ್ಲ ಸಾಕ್ಷಾತ್ ಸ್ವಯಂಭೂ
ಸ್ವಂತ ಸನ್ನಿವೇಶಗಳ ತುರ್ತು ಆಶಯಗಳೇ ಮೈತಳೆದು
ನಮ್ಮ ನಾಭಿಕುಹರಗಳಿಂದ ತೊಡೆಗಳಿಂದ ನರಗಳಿಂದ
ಮೈ ಮನಸ್ಸಿನ ಭಾಗವಾಗಿ ನಮ್ಮೆಲ್ಲರ ಸಮಗ್ರ
ಸಂಕೇತವಾಗಿ ಏಳುತ್ತಾರೆ ಎದ್ದು ಸ್ವರ್ಣಗೋಪುರ ಸ್ಥಾಪನೆಗಳ
ಕೆಡವಿ-ಕೆಡವಿದರೆ ಉಸಿರಾಟ-ಉಸಿರಾಡಿದರೆ
ನಮ್ಮ ಬಿಡುಗಡೆ ಬಿಡುಗಡೆಯಲ್ಲಿ ಹೊಸ ಹುಟ್ಟು ಬೆಳವಣಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರ
Next post ಸ್ವರ್ಣ ಕಾಲ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…