ಹೊಸ ದೇವರ ಬರವಿಗಾಗಿ

ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ?
ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ?
ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ
ಸತ್ತ ನೀ ಮರಳಿ ಬರಲಿಲ್ಲ!

ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು
ಬಾಲಕರು ಬಂದು ಹರಸಿದರೂ
ಮಾಡಿಟ್ಟ ನೈವೇದ್ಯ ಹಳಸಿದರೂ
ಕೂಗಿದರೂ ಓಗೊಲಿಲ್ಲ
ಪಾತಾಳದಿಂದ ಬಲೀಂದ್ರ ಬರಲಿಲ್ಲ ಮತ್ತಿಲ್ಲಿಗೆ

ಸತ್ತರೆ ಅಜೀರ್ಣದಿಂದ ಇಂದ್ರಾಗ್ನಿ ವರುಣರು ಮತ್ತೆ ಹುಟ್ಟಲಿಲ್ಲ
ಈ ಬ್ರಹ್ಮವಿಷ್ಣುರುದ್ರರೂ ವಯೋವೃದ್ಧರಾಗಿ ಮನುಷ್ಯ
ಜನಾಂಗ ಸ್ವರ್ಗ‍ದ ಸಂಪರ್ಕ ಕಳೆದಾಗ
ಸ್ವಂತ ಭೂಖಂಡವೂ ಕತ್ತಲೆಯ ಅಭೇದ್ಯ ಖಂಡ
ಅರ್ಥ ಚ್ಯುತಿಗೊಂಡ ಭಾಷೆ ಬರೇ ಗೊಂದಲಗೇರಿ ಸದ್ದುಗದ್ದಲದ
ಸುತ್ತು ಮುಖಗಳ ಮೇಲೆ ಕಿತ್ತರೂ ಬಾರದಂಥ ಅಂಟುಮೌನ
ಅಂತರ್ಮುಖದೊಳಗೆ ಕೂಡ ಅಪರಿಚಿತತ್ವ ಮುಖಾಮುಖಿಯ
ಈ ಹೆಪ್ಪುಗತ್ತಲೆಯಲ್ಲಿ ಹುಡುಕಿದರೆ

ಕ್ಯೂಬ ಬೊಲೀವಿಯಾ ಶೇಗವೇರಾ ಸಹ ದಾಟಿ
ಮತ್ತೆ ಹಿಪ್ಪಿ ಅತಿಮಾನಸಗಳನ್ನೂ ಅತಿಕ್ರಮಿಸಿ
ಅಂತ್ಯಗಳನ್ನೂ ಸೀಮೆಗಳನ್ನೂ ತಿರಸ್ಕರಿಸಿ
ಬೆಳೆದರೆ ಜೀವವಿಕಾಸವಲ್ಲ ಸಾಕ್ಷಾತ್ ಸ್ವಯಂಭೂ
ಸ್ವಂತ ಸನ್ನಿವೇಶಗಳ ತುರ್ತು ಆಶಯಗಳೇ ಮೈತಳೆದು
ನಮ್ಮ ನಾಭಿಕುಹರಗಳಿಂದ ತೊಡೆಗಳಿಂದ ನರಗಳಿಂದ
ಮೈ ಮನಸ್ಸಿನ ಭಾಗವಾಗಿ ನಮ್ಮೆಲ್ಲರ ಸಮಗ್ರ
ಸಂಕೇತವಾಗಿ ಏಳುತ್ತಾರೆ ಎದ್ದು ಸ್ವರ್ಣಗೋಪುರ ಸ್ಥಾಪನೆಗಳ
ಕೆಡವಿ-ಕೆಡವಿದರೆ ಉಸಿರಾಟ-ಉಸಿರಾಡಿದರೆ
ನಮ್ಮ ಬಿಡುಗಡೆ ಬಿಡುಗಡೆಯಲ್ಲಿ ಹೊಸ ಹುಟ್ಟು ಬೆಳವಣಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರ
Next post ಸ್ವರ್ಣ ಕಾಲ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…