Home / ಕವನ / ಕವಿತೆ / ವಾರ್ತಾಧಿಕಾರಿ

ವಾರ್ತಾಧಿಕಾರಿ

ತಲೆಯಲ್ಲಿ ಬುದ್ಧಿಶಕ್ತಿಯಿಲ್ಲದಿದ್ದರು
ತಾ ಹೆಸರುವಾಸಿಯಾಗುವ ಬಯಕೆ
ಪತ್ರಿಕಾ ಪ್ರತಿನಿಧಿಗೆ ನಿರ್ಲಕ್ಷಿಸಿ
ತಾನೇ ಶ್ರೇಷ್ಠವೆಂದು ಮೂರ್ಖತನ ಪ್ರದರ್ಶಿಸುವನು.

ಪತ್ರಕರ್ತನ ಮಹತ್ವ ಅರಿಯದೆ
ನಾನೇ ವಾರ್ತಾ ಅಧಿಕಾರಿ ಎನ್ನುವನು
ಪತ್ರಿಕಾ ವರದಿಗಳು ವಿಮರ್ಶೆ ಮಾಡಿ
ಪತ್ರಿಕೆಯು ಟೀಕೆಗೆ ಗುರಿಪಡಿಸುವನು.

ಜಾತಿಮತಭೇದ ಮಾಡುತ್ತ
ಪತ್ರಕರ್ತರಿಗೆ ಕೀಳುದೃಷ್ಟಿಯನ್ನಿಯುವನು
ಗರ್ವ ಅಹಂಕಾರದಿ ನಡೆದುಕೊಂಡು
ಪತ್ರಕರ್ತರ ವಿಶ್ವಾಸ ಕಳೆದುಕೊಳ್ಳುವನು.

ಬೆಳೆಯು ಸಿರಿ ಮೊಳಕೆ ಎಂಬ
ಅರಳುವ ಮೊಗ್ಗು ಕೈದಿ ಚಿವುಟುವಂತೆ
ಬೆಳೆಯುತ್ತಿರುವ ಪತ್ರಕರ್ತರನು
ಕೆಟ್ಟದಾರಿಗೆ ಕೊಂಡೊಯ್ಯುವನು.

ಪತ್ರಕರ್ತರಲ್ಲಿನ ಪ್ರತಿಭೆ ಅರಿಯದೆ
ತಾ ಮೂರ್ಖತನದಿ ವರ್ತಿಸುವನು
ತಾ ಅಧಿಕಾರದಲ್ಲಿರುವುದನ್ನು ಮರೆತು
ತಾ ಕಾಗೆ ಅಧಿಕಾರ ಚಲಾಯಿಸುವನು.

ಸುಜ್ಞಾನಿಯನ್ನು ಅರಿಯದೇ ತಾ
ಅಜ್ಞಾನಿಗಳ ಸಹವಾಸ ಮಾಡುವನು
ತಾ ಹಾಳಾಗುತ್ತಿದನ್ನು ಅರಿಯದೇ
ತಾ ಪತ್ರಕರ್ತರಿಗೆ ಹಾಳುಬಾವಿಗೆ ತಳ್ಳುವನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...