Home / ಕವನ / ಕವಿತೆ / ಅವಸಾನ

ಅವಸಾನ

ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ
ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ
ಹೊರಟೆ ಹೋಯಿತು ಎನಿಸುತ್ತದೆ
ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ
ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ ಬಂಧಗಳ
ಹೇಗಿದ್ದೀತು ಅದು? ದಾಹವೆ ಸೆಖೆಯೆ ಚಳಿಯೆ
ಭಯವೆ ಮರೆವೆಯೆ ನಿದ್ರೆಯೆ?
ಪ್ರಳಯದ ಕಲ್ಪನೆ ಮಾಡುತ್ತೇನೆ
ಗೋರಿಗಳು ಬಿರಿದರೆ ಕಂಕಾಳಗಳು ಕುಣಿದರೆ
ಕತ್ತಲೆ ಹಗಲ ನುಂಗಿದರೆ
ಹೇಗಿದ್ದೀತು ಅದು? ಜೋನನ ಭೀಕರ ಪ್ರವಾದಗಳ ಚಿತ್ರಗಳು
ಕಣ್ಣಿಗೆ ಕಟ್ಟುತ್ತವೆ ಬೆಂಕಿಯ ಕುದುರೆಗಳು ಕೆನೆಯುತ್ತವೆ
ಹೆದರಿಸುವ ಶಬ್ದಗಳಿವೆ
ಈಚೆ ಪರಂಪರೆಯ ವಿಶ್ವಾಸಗಳಿವೆ
ಸಮುದ್ರ ಏಳುವ ಎಲ್ಲವೂ ಮುಳುಗುವ
ಕ್ರೂರ ಪರ್ಯಾವಸಾನದ ದೀರ್ಘ ಮೌನದಲ್ಲಿ
ಅದು ಇದ್ದೀತೆ ಹೀಗೆ ಆಕಾಶ ದೊಪ್ಪನೆ ಬಿದ್ದು ವಸ್ತುಸ್ಥಿತಿ
ಸ್ಥಿತ್ಯಂತರದ ಅರೆಕ್ಷಣದಲ್ಲಿ ಕ್ಷಯಿಸಿ ಇನ್ನೊಂದೇ ಸ್ಥಿತಿಯೂ ಇರದೆ
ಆಕಾಶ ಬಿರಿದಂತೆ ಆಕಾಶ
ಇದ್ದೀತೆ ಅಂಥ ಆಕಾಶವೂ ಇಲ್ಲದೇ ಯಾವುದೂ
ಇಲ್ಲದ ಅಂಥ ಋಣಸ್ಥಿತಿಯ ವಿರೋಧಾಬಾಸ
ಈ ಸೃಷ್ಟಿಯ ಆರಂಭದಲ್ಲೂ ಇದ್ದರೆ ಇದೆಲ್ಲದರ
ಅವಸಾನದಲ್ಲೂ ಇದ್ದರೆ ಈ ಮಧ್ಯೆ
ನಿಶ್ಚಿತ ಪ್ರತೀಕ್ಷೆಯಲ್ಲಿ ಕಟ್ಟಿಗೆಯೊಟ್ಟಿ ತಯಾರಾದ ವ್ಯಕ್ತಿಗಳ
ಆ ಜನಾಂಗದ ಹುಟ್ಟಿನ ಸಾವಿನ ನಡುವೆ ಕರ್ಮದ
ಮರೆವಿನಲ್ಲಿ ಬುದಕಿದ ಹುಸಿ ಬದುಕಿನ ಹಾಗೂ
ಸ್ವರ್ಗ ಮೋಕ್ಷಗಳ ಸ್ವಯಂಕೃತ ಭ್ರಮೆಯ ಬ್ರಹ್ಮ ಪರಬ್ರಹ್ಮದ
ಸ್ವಸಮಾಧಾನ ಸ್ವಸ್ಥತೆಯ ಕಲ್ಪನೆಯನ್ನೂ ಛಿದ್ರಿಸಿ
ಅಲೆಹೊಡೆವ ಪ್ರಜ್ಞೆ
ವ್ಯಕ್ತಿಯ ನಾಡಿಯಲ್ಲೂ ಜನಾಂಗದ ಪ್ರವಾಹದಲ್ಲೂ
ಹರಿಯುತ್ತಲೇ ಇರುವಾಗ ಇದರ ಕ್ರೌರ್ಯದ ಕೆಳಗೆ
ಅವಸಾನಿಸುವ ಆರಂಭಗಳು ಹುಟ್ಟುವ ಮೊದಲೇ
ಸಾಯುವ ಸೃಷ್ಟಿಗಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...