ಅವಸಾನ

ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ
ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ
ಹೊರಟೆ ಹೋಯಿತು ಎನಿಸುತ್ತದೆ
ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ
ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ ಬಂಧಗಳ
ಹೇಗಿದ್ದೀತು ಅದು? ದಾಹವೆ ಸೆಖೆಯೆ ಚಳಿಯೆ
ಭಯವೆ ಮರೆವೆಯೆ ನಿದ್ರೆಯೆ?
ಪ್ರಳಯದ ಕಲ್ಪನೆ ಮಾಡುತ್ತೇನೆ
ಗೋರಿಗಳು ಬಿರಿದರೆ ಕಂಕಾಳಗಳು ಕುಣಿದರೆ
ಕತ್ತಲೆ ಹಗಲ ನುಂಗಿದರೆ
ಹೇಗಿದ್ದೀತು ಅದು? ಜೋನನ ಭೀಕರ ಪ್ರವಾದಗಳ ಚಿತ್ರಗಳು
ಕಣ್ಣಿಗೆ ಕಟ್ಟುತ್ತವೆ ಬೆಂಕಿಯ ಕುದುರೆಗಳು ಕೆನೆಯುತ್ತವೆ
ಹೆದರಿಸುವ ಶಬ್ದಗಳಿವೆ
ಈಚೆ ಪರಂಪರೆಯ ವಿಶ್ವಾಸಗಳಿವೆ
ಸಮುದ್ರ ಏಳುವ ಎಲ್ಲವೂ ಮುಳುಗುವ
ಕ್ರೂರ ಪರ್ಯಾವಸಾನದ ದೀರ್ಘ ಮೌನದಲ್ಲಿ
ಅದು ಇದ್ದೀತೆ ಹೀಗೆ ಆಕಾಶ ದೊಪ್ಪನೆ ಬಿದ್ದು ವಸ್ತುಸ್ಥಿತಿ
ಸ್ಥಿತ್ಯಂತರದ ಅರೆಕ್ಷಣದಲ್ಲಿ ಕ್ಷಯಿಸಿ ಇನ್ನೊಂದೇ ಸ್ಥಿತಿಯೂ ಇರದೆ
ಆಕಾಶ ಬಿರಿದಂತೆ ಆಕಾಶ
ಇದ್ದೀತೆ ಅಂಥ ಆಕಾಶವೂ ಇಲ್ಲದೇ ಯಾವುದೂ
ಇಲ್ಲದ ಅಂಥ ಋಣಸ್ಥಿತಿಯ ವಿರೋಧಾಬಾಸ
ಈ ಸೃಷ್ಟಿಯ ಆರಂಭದಲ್ಲೂ ಇದ್ದರೆ ಇದೆಲ್ಲದರ
ಅವಸಾನದಲ್ಲೂ ಇದ್ದರೆ ಈ ಮಧ್ಯೆ
ನಿಶ್ಚಿತ ಪ್ರತೀಕ್ಷೆಯಲ್ಲಿ ಕಟ್ಟಿಗೆಯೊಟ್ಟಿ ತಯಾರಾದ ವ್ಯಕ್ತಿಗಳ
ಆ ಜನಾಂಗದ ಹುಟ್ಟಿನ ಸಾವಿನ ನಡುವೆ ಕರ್ಮದ
ಮರೆವಿನಲ್ಲಿ ಬುದಕಿದ ಹುಸಿ ಬದುಕಿನ ಹಾಗೂ
ಸ್ವರ್ಗ ಮೋಕ್ಷಗಳ ಸ್ವಯಂಕೃತ ಭ್ರಮೆಯ ಬ್ರಹ್ಮ ಪರಬ್ರಹ್ಮದ
ಸ್ವಸಮಾಧಾನ ಸ್ವಸ್ಥತೆಯ ಕಲ್ಪನೆಯನ್ನೂ ಛಿದ್ರಿಸಿ
ಅಲೆಹೊಡೆವ ಪ್ರಜ್ಞೆ
ವ್ಯಕ್ತಿಯ ನಾಡಿಯಲ್ಲೂ ಜನಾಂಗದ ಪ್ರವಾಹದಲ್ಲೂ
ಹರಿಯುತ್ತಲೇ ಇರುವಾಗ ಇದರ ಕ್ರೌರ್ಯದ ಕೆಳಗೆ
ಅವಸಾನಿಸುವ ಆರಂಭಗಳು ಹುಟ್ಟುವ ಮೊದಲೇ
ಸಾಯುವ ಸೃಷ್ಟಿಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಟ್ಟೆಗಳು
Next post ವಾರ್ತಾಧಿಕಾರಿ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…