Home / ಕವನ / ಕವಿತೆ / ಶಾಂತಿಧಾಮ

ಶಾಂತಿಧಾಮ

ಹೋಗೋಣ ಬನ್ನಿರಣ್ಣಾ ಸೂಕ್ಷೇತ್ರ ಹಾರಕೂಡಕೆ
ಗುರು ಚನ್ನವೀರರ ಶಾಂತಿಧಾಮಕ್ಕೆ ||ಪ||

ಮೊದಲಿಗೆ ಕಾಣುವುದು ಗುಡಿಶಿಖರವು
ನಂತರವ ಆಗುವುದು ಗುರುದರ್ಶನವು
ಜಾತಿ ಮತ ಪಂಥಗಳ ಭೇದವ ಅಳಿಸಿದಿ
ಒಂದೇ ತಾಯಿ ಮಕ್ಕಳೆಂದು ಸಾರಿ ನೀ ಹೇಳಿದಿ.

ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿ ಬೆಳದಿದಿ
ಮುಂದೇ ತನ್ನ ವಿದ್ಯಾರ್ಜನೆಗೆಂದು ಹೋದಿ.
ಹುಬ್ಬಳಿ ಮೂರು ಸಾವಿರ ಮಠದಲ್ಲಿ ಕಲಿತಿದಿ.
ಮಲೆನಾಡಿನಲ್ಲಿಯೇ ವಿದ್ಯಾಸಂಪೂರ್ಣ ಪಡದಿ.

ಮಹಾತ್ಮಗಾಂಧಿ ಆದರ್ಶ ಮಾರ್ಗವೇ ಅರಿತಿದಿ
ಧರ್ಮದ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿದಿ.
ಅಂಧಕಾರದ ವಿರುದ್ಧ ಭಂಡೆಳಂದಿ.
ಪ್ರಮಾಣಿಕತೆಗಾಗಿ ಪ್ರಾಣ ಅರ್ಪಿಸಂದಿ.

ತನ್ನ ಪ್ರಾಣವನೇ ಮಾನವಕುಲಕ್ಕಾಗಿ ಅರ್ಪಿಸಿದಿ.
ಹಾಳ ಹರಕೂಡವನೇ ಕೈಲಾಸ ಏನಿಸುತ್ತಿದಿ.
ಕಾಯಕದಿಂದಲೇ ಸ್ವರ್ಗವೆಂದು ಸಾರುತ್ತಿದಿ.
ಶಾಂತಿಯಿಂದಲೇ ಜನರಿಗೆ ತಿಳಿಸಿ ನೀ ಹೇಳಿದಿ.

ಸುವಿಚಾರ ಕಲಿಸಿ ಸುಹೃದಯ ಮಾಡಿದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ವೀರಶೂರ ಧೀರನೆಂಬ ಕೀರ್ತಿಗೆ ಕಾರಣನಾದಿ.
ಗುರುದೇವೋಭವ ಎಂಬ ಕೀರ್ತಿಗೆ ಕಾರಣನಾದಿ.

ಓ ಪುಣ್ಯದ ಪುತ್ಥಳಿಯೇ ಬಾಳ ಬೆಳಕಿನ ಬೆಳ್ಳಿಚುಕ್ಕಿಯೆ
ನಿನ್ನ ಪುಣ್ಯದಿಂದ ಆ ಗುರುವನ್ನು ಕಂಡೆ.
ಮುಕ್ತಿಯ ಮಹಾ ಮಾರ್ಗವನ್ನು ಕಂಡೆ ನಿಜ
ಆ ಗುರುವೇ ಶ್ರೀ ಚನ್ನವೀರ ಶಿವಯೋಗಿ.
*****
೦೭/೦೫/೧೯೯೬

Tagged:

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...