ಭೂತ – ಪ್ರೇತಗಳಿಗೊಂದು ಸವಾಲು

ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ
ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ
ಯಾರರ ಸತ್ತರ ನೆನಪಾಗತ್ತಿತ್ತು
ಬಹುಷಃ ಆಗಿನ ವಯಸ್ಸೂ
ಹಾಂಗಽಇತ್ತು
ಆದರ ಈಗ –

ಈ ವರ್ತಮಾನದ ದೆವ್ವಗೋಳು
ಜನರ ರಕ್ತಾ ಹೀರಿ ಕುಡಿದು
ಕುಕ್ಕರಿಸಿ ಇಟ್ಟು
ಎದಿ ನಡಗೋ ಹಾಂಗ ಮಾಡೋಕ್ಹತ್ತಾವ

ಹಾಡೇ ಹಗಲಽ ಖಜಾನೆ ಒಡೆಯೋದು
ಮೋಸ ಅತ್ಯಾಚಾರ ಮಾಡೋದು
ಬೂದಿ ಮುಚ್ಚಿದ ಕೆಂಡ ಅಲ್ದಽ ಇನ್ನೇನು,

ಭೂತಕಾಲದ ಭೂತಕ್ಕ ಕಾದ ಕಬ್ಬಿಣದ ಬಾರು (ಸಳಿ)
ತೋರಿಸಬಹುದು, ಆದರಽ
ಈ ವರ್ತಮಾನದ ಭವಿಷ್ಯದ ಭೂತಗಳಿಗೆ
ಸರ್ಕಸ್ಸದ ರಿಂಗ್ ಮಾಸ್ಟರನ ಬೇಽಕ ಬೇಕು

ಪಾಪ! ಅನ್ನೋ ಹಾಂಗ ಸೋಗ ಹಾಕಿ-
ತಿರುಗಬೇಡ, ಇನ್ನ ಹುಟ್ಟತ್ತಾಽರ
ಹಾದಿ ಹಾದಿಗೆ ರಿಂಗ್ ಮಾಸ್ಟರಗೋಳ
ನಿನ್ನ ಆಡಿಸ್ತಾರ, ನಿನ್ನೆದಿ ಸೀಳತಾಽರ
ತಂಪ ನೀರು ಸಿಡಿಸಿ ನಗತಾರ
ನಿನ್ನ ಜಗತ್ತಾರ

ನಿನ್ನ ಚಪ್ಪಲಿಯಿಂದ ನಿನಗಽಹೊಡೆದ
ಮಿಂಚೋ ಝರಿಯೊಳಗ ಮುಚ್ಚಿ
ಸಿಹಿ ತಿಂತಾರ

ಕಂಟೆಯೊಳಗಿಂದ ಎದ್ದ
ರಾತ್ರಿ ನೀನು ಕುಣಿದರೂ
ಗ್ಯಾಸ್‌ಲೈಟ್‌ಗೆ ಅಂಜತೀಯಪಾ
ಕೊನೆಗೆ ನಿನ್ನ ಕತ್ತಲನಽ
ಎಳಕೊಂಡು ಜಿರಿ ಜಿರಿ ಹುಳಾ ಹುಪ್ಪಡಿಗೋಳ
ಸಂಗೀತ ನಿರ್ದೇಶನದಾಗ ನೀ ಕ್ಯಾಬರೆ ಮಾಡಲೆ

ಕಪ್ಪು ಬಿಳುಪಿನ ಬೆಳಕಿಗೆ ಹೊಂದಿಕೊಳ್ಳಾಕ
ತಯಾರಾಗಕ್ಹಂತ್ತಾಂಗಽ
ಬೆಳಗಿನ ಸೂರ್ಯ ಹುಟ್ಟೇಽಬಿಡ್ತಾನ
ಆಗ ನೀನು ಕುಕ್ಕರಿಸಿ ಬೀಳತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಟ್ಟೆ
Next post ಲಿಂಗಮ್ಮನ ವಚನಗಳು – ೪೦

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys