Home / ಕವನ / ಕವಿತೆ / ಭೂತ – ಪ್ರೇತಗಳಿಗೊಂದು ಸವಾಲು

ಭೂತ – ಪ್ರೇತಗಳಿಗೊಂದು ಸವಾಲು

ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ
ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ
ಯಾರರ ಸತ್ತರ ನೆನಪಾಗತ್ತಿತ್ತು
ಬಹುಷಃ ಆಗಿನ ವಯಸ್ಸೂ
ಹಾಂಗಽಇತ್ತು
ಆದರ ಈಗ –

ಈ ವರ್ತಮಾನದ ದೆವ್ವಗೋಳು
ಜನರ ರಕ್ತಾ ಹೀರಿ ಕುಡಿದು
ಕುಕ್ಕರಿಸಿ ಇಟ್ಟು
ಎದಿ ನಡಗೋ ಹಾಂಗ ಮಾಡೋಕ್ಹತ್ತಾವ

ಹಾಡೇ ಹಗಲಽ ಖಜಾನೆ ಒಡೆಯೋದು
ಮೋಸ ಅತ್ಯಾಚಾರ ಮಾಡೋದು
ಬೂದಿ ಮುಚ್ಚಿದ ಕೆಂಡ ಅಲ್ದಽ ಇನ್ನೇನು,

ಭೂತಕಾಲದ ಭೂತಕ್ಕ ಕಾದ ಕಬ್ಬಿಣದ ಬಾರು (ಸಳಿ)
ತೋರಿಸಬಹುದು, ಆದರಽ
ಈ ವರ್ತಮಾನದ ಭವಿಷ್ಯದ ಭೂತಗಳಿಗೆ
ಸರ್ಕಸ್ಸದ ರಿಂಗ್ ಮಾಸ್ಟರನ ಬೇಽಕ ಬೇಕು

ಪಾಪ! ಅನ್ನೋ ಹಾಂಗ ಸೋಗ ಹಾಕಿ-
ತಿರುಗಬೇಡ, ಇನ್ನ ಹುಟ್ಟತ್ತಾಽರ
ಹಾದಿ ಹಾದಿಗೆ ರಿಂಗ್ ಮಾಸ್ಟರಗೋಳ
ನಿನ್ನ ಆಡಿಸ್ತಾರ, ನಿನ್ನೆದಿ ಸೀಳತಾಽರ
ತಂಪ ನೀರು ಸಿಡಿಸಿ ನಗತಾರ
ನಿನ್ನ ಜಗತ್ತಾರ

ನಿನ್ನ ಚಪ್ಪಲಿಯಿಂದ ನಿನಗಽಹೊಡೆದ
ಮಿಂಚೋ ಝರಿಯೊಳಗ ಮುಚ್ಚಿ
ಸಿಹಿ ತಿಂತಾರ

ಕಂಟೆಯೊಳಗಿಂದ ಎದ್ದ
ರಾತ್ರಿ ನೀನು ಕುಣಿದರೂ
ಗ್ಯಾಸ್‌ಲೈಟ್‌ಗೆ ಅಂಜತೀಯಪಾ
ಕೊನೆಗೆ ನಿನ್ನ ಕತ್ತಲನಽ
ಎಳಕೊಂಡು ಜಿರಿ ಜಿರಿ ಹುಳಾ ಹುಪ್ಪಡಿಗೋಳ
ಸಂಗೀತ ನಿರ್ದೇಶನದಾಗ ನೀ ಕ್ಯಾಬರೆ ಮಾಡಲೆ

ಕಪ್ಪು ಬಿಳುಪಿನ ಬೆಳಕಿಗೆ ಹೊಂದಿಕೊಳ್ಳಾಕ
ತಯಾರಾಗಕ್ಹಂತ್ತಾಂಗಽ
ಬೆಳಗಿನ ಸೂರ್ಯ ಹುಟ್ಟೇಽಬಿಡ್ತಾನ
ಆಗ ನೀನು ಕುಕ್ಕರಿಸಿ ಬೀಳತಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...