Home / ಕವನ / ಕವಿತೆ / ಭೂತ – ಪ್ರೇತಗಳಿಗೊಂದು ಸವಾಲು

ಭೂತ – ಪ್ರೇತಗಳಿಗೊಂದು ಸವಾಲು

ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ
ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ
ಯಾರರ ಸತ್ತರ ನೆನಪಾಗತ್ತಿತ್ತು
ಬಹುಷಃ ಆಗಿನ ವಯಸ್ಸೂ
ಹಾಂಗಽಇತ್ತು
ಆದರ ಈಗ –

ಈ ವರ್ತಮಾನದ ದೆವ್ವಗೋಳು
ಜನರ ರಕ್ತಾ ಹೀರಿ ಕುಡಿದು
ಕುಕ್ಕರಿಸಿ ಇಟ್ಟು
ಎದಿ ನಡಗೋ ಹಾಂಗ ಮಾಡೋಕ್ಹತ್ತಾವ

ಹಾಡೇ ಹಗಲಽ ಖಜಾನೆ ಒಡೆಯೋದು
ಮೋಸ ಅತ್ಯಾಚಾರ ಮಾಡೋದು
ಬೂದಿ ಮುಚ್ಚಿದ ಕೆಂಡ ಅಲ್ದಽ ಇನ್ನೇನು,

ಭೂತಕಾಲದ ಭೂತಕ್ಕ ಕಾದ ಕಬ್ಬಿಣದ ಬಾರು (ಸಳಿ)
ತೋರಿಸಬಹುದು, ಆದರಽ
ಈ ವರ್ತಮಾನದ ಭವಿಷ್ಯದ ಭೂತಗಳಿಗೆ
ಸರ್ಕಸ್ಸದ ರಿಂಗ್ ಮಾಸ್ಟರನ ಬೇಽಕ ಬೇಕು

ಪಾಪ! ಅನ್ನೋ ಹಾಂಗ ಸೋಗ ಹಾಕಿ-
ತಿರುಗಬೇಡ, ಇನ್ನ ಹುಟ್ಟತ್ತಾಽರ
ಹಾದಿ ಹಾದಿಗೆ ರಿಂಗ್ ಮಾಸ್ಟರಗೋಳ
ನಿನ್ನ ಆಡಿಸ್ತಾರ, ನಿನ್ನೆದಿ ಸೀಳತಾಽರ
ತಂಪ ನೀರು ಸಿಡಿಸಿ ನಗತಾರ
ನಿನ್ನ ಜಗತ್ತಾರ

ನಿನ್ನ ಚಪ್ಪಲಿಯಿಂದ ನಿನಗಽಹೊಡೆದ
ಮಿಂಚೋ ಝರಿಯೊಳಗ ಮುಚ್ಚಿ
ಸಿಹಿ ತಿಂತಾರ

ಕಂಟೆಯೊಳಗಿಂದ ಎದ್ದ
ರಾತ್ರಿ ನೀನು ಕುಣಿದರೂ
ಗ್ಯಾಸ್‌ಲೈಟ್‌ಗೆ ಅಂಜತೀಯಪಾ
ಕೊನೆಗೆ ನಿನ್ನ ಕತ್ತಲನಽ
ಎಳಕೊಂಡು ಜಿರಿ ಜಿರಿ ಹುಳಾ ಹುಪ್ಪಡಿಗೋಳ
ಸಂಗೀತ ನಿರ್ದೇಶನದಾಗ ನೀ ಕ್ಯಾಬರೆ ಮಾಡಲೆ

ಕಪ್ಪು ಬಿಳುಪಿನ ಬೆಳಕಿಗೆ ಹೊಂದಿಕೊಳ್ಳಾಕ
ತಯಾರಾಗಕ್ಹಂತ್ತಾಂಗಽ
ಬೆಳಗಿನ ಸೂರ್ಯ ಹುಟ್ಟೇಽಬಿಡ್ತಾನ
ಆಗ ನೀನು ಕುಕ್ಕರಿಸಿ ಬೀಳತಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...