Home / ಕವನ / ಕವಿತೆ / ಭೂತ – ಪ್ರೇತಗಳಿಗೊಂದು ಸವಾಲು

ಭೂತ – ಪ್ರೇತಗಳಿಗೊಂದು ಸವಾಲು

ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ
ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ
ಯಾರರ ಸತ್ತರ ನೆನಪಾಗತ್ತಿತ್ತು
ಬಹುಷಃ ಆಗಿನ ವಯಸ್ಸೂ
ಹಾಂಗಽಇತ್ತು
ಆದರ ಈಗ –

ಈ ವರ್ತಮಾನದ ದೆವ್ವಗೋಳು
ಜನರ ರಕ್ತಾ ಹೀರಿ ಕುಡಿದು
ಕುಕ್ಕರಿಸಿ ಇಟ್ಟು
ಎದಿ ನಡಗೋ ಹಾಂಗ ಮಾಡೋಕ್ಹತ್ತಾವ

ಹಾಡೇ ಹಗಲಽ ಖಜಾನೆ ಒಡೆಯೋದು
ಮೋಸ ಅತ್ಯಾಚಾರ ಮಾಡೋದು
ಬೂದಿ ಮುಚ್ಚಿದ ಕೆಂಡ ಅಲ್ದಽ ಇನ್ನೇನು,

ಭೂತಕಾಲದ ಭೂತಕ್ಕ ಕಾದ ಕಬ್ಬಿಣದ ಬಾರು (ಸಳಿ)
ತೋರಿಸಬಹುದು, ಆದರಽ
ಈ ವರ್ತಮಾನದ ಭವಿಷ್ಯದ ಭೂತಗಳಿಗೆ
ಸರ್ಕಸ್ಸದ ರಿಂಗ್ ಮಾಸ್ಟರನ ಬೇಽಕ ಬೇಕು

ಪಾಪ! ಅನ್ನೋ ಹಾಂಗ ಸೋಗ ಹಾಕಿ-
ತಿರುಗಬೇಡ, ಇನ್ನ ಹುಟ್ಟತ್ತಾಽರ
ಹಾದಿ ಹಾದಿಗೆ ರಿಂಗ್ ಮಾಸ್ಟರಗೋಳ
ನಿನ್ನ ಆಡಿಸ್ತಾರ, ನಿನ್ನೆದಿ ಸೀಳತಾಽರ
ತಂಪ ನೀರು ಸಿಡಿಸಿ ನಗತಾರ
ನಿನ್ನ ಜಗತ್ತಾರ

ನಿನ್ನ ಚಪ್ಪಲಿಯಿಂದ ನಿನಗಽಹೊಡೆದ
ಮಿಂಚೋ ಝರಿಯೊಳಗ ಮುಚ್ಚಿ
ಸಿಹಿ ತಿಂತಾರ

ಕಂಟೆಯೊಳಗಿಂದ ಎದ್ದ
ರಾತ್ರಿ ನೀನು ಕುಣಿದರೂ
ಗ್ಯಾಸ್‌ಲೈಟ್‌ಗೆ ಅಂಜತೀಯಪಾ
ಕೊನೆಗೆ ನಿನ್ನ ಕತ್ತಲನಽ
ಎಳಕೊಂಡು ಜಿರಿ ಜಿರಿ ಹುಳಾ ಹುಪ್ಪಡಿಗೋಳ
ಸಂಗೀತ ನಿರ್ದೇಶನದಾಗ ನೀ ಕ್ಯಾಬರೆ ಮಾಡಲೆ

ಕಪ್ಪು ಬಿಳುಪಿನ ಬೆಳಕಿಗೆ ಹೊಂದಿಕೊಳ್ಳಾಕ
ತಯಾರಾಗಕ್ಹಂತ್ತಾಂಗಽ
ಬೆಳಗಿನ ಸೂರ್ಯ ಹುಟ್ಟೇಽಬಿಡ್ತಾನ
ಆಗ ನೀನು ಕುಕ್ಕರಿಸಿ ಬೀಳತಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...