ಲಿಂಗಮ್ಮನ ವಚನಗಳು – ೪೦

ಅಯ್ಯ ನಾ ಹುಟ್ಟುವಾಗ
ಬಟ್ಟಬಯಲೆ ಗಟ್ಟಿಯಾಯಿತ್ತು.
ಆ ಬಟ್ಟಬಯಲು ಗಟ್ಟಿಯಾದ
ಬಳಿಯಲ್ಲಿ ನಾ ಜನನವಾದೆ.
ಜನನವಾದವರಿಗೆ ಮರಣ ತಪ್ಪದು.
ಅದೇನು ಕಾರಣವೆಂದರೆ,
ಮರವೆಗೆ ಮುಂದು ಮಾಡಿತ್ತು.
ಕರ್ಮಕ್ಕೆ ಗುರಿ ಮಾಡಿತ್ತು.
ಕತ್ತಲೆಯಲ್ಲಿ ಮುಳುಗಿಸಿತ್ತು.
ಕಣ್ಣುಗಾಣದ ಅಂಧಕರಂತೆ,
ತಿರುಗುವದ ನೋಡಿ ನಾ ಹೆದರಿಕೊಂಡು,
ಎಚ್ಚತ್ತು ಚಿತ್ತವ ಸುಯಿಧಾನವ ಮಾಡಿ,
ನಿಶ್ಚಿಂತವಾಗಿ ನಿಜವ ನೆಮ್ಮಿ, ಅರುಹ ಕಂಡೆ.
ಅರುಹಿಂದ ಆಚಾರವ ಕಂಡೆ.
ಆಚಾರವಿಡಿದು ಗುರುವ ಕಂಡೆ.
ಗುರುವಿಡಿದು ಲಿಂಗವ ಕಂಡೆ.
ಲಿಂಗವಿಡಿದು ಜಂಗಮವ ಕಂಡೆ.
ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ.
ಆ ಪಾದೋದಕ ಪ್ರಸಾದವಿಡಿದು ಮಹಾಶರಣ ಕಂಡೆ.
ಆ ಮಹಾ ಶರಣ ಪಾದವಿಡಿದು ಎನ್ನ ಕಾರಗುಣವಳಿಯಿತ್ತು.
ಕರಣ ಗುಣ ಸುಟ್ಟವು.
ಲಿಂಗಗುಣ ನಿಂದಿತ್ತು.
ಭಾವಬಯಲಾಯಿತ್ತು.  ಬಯಕೆ ಸವೆಯಿತ್ತು.
ಮಹಾದೇವನಾದ ಶರಣನ ಪಾದವಿಡಿದು ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂತ – ಪ್ರೇತಗಳಿಗೊಂದು ಸವಾಲು
Next post ಕುಲಾಯಿಯವರು

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…