ಲಿಂಗಮ್ಮನ ವಚನಗಳು – ೪೦

ಅಯ್ಯ ನಾ ಹುಟ್ಟುವಾಗ
ಬಟ್ಟಬಯಲೆ ಗಟ್ಟಿಯಾಯಿತ್ತು.
ಆ ಬಟ್ಟಬಯಲು ಗಟ್ಟಿಯಾದ
ಬಳಿಯಲ್ಲಿ ನಾ ಜನನವಾದೆ.
ಜನನವಾದವರಿಗೆ ಮರಣ ತಪ್ಪದು.
ಅದೇನು ಕಾರಣವೆಂದರೆ,
ಮರವೆಗೆ ಮುಂದು ಮಾಡಿತ್ತು.
ಕರ್ಮಕ್ಕೆ ಗುರಿ ಮಾಡಿತ್ತು.
ಕತ್ತಲೆಯಲ್ಲಿ ಮುಳುಗಿಸಿತ್ತು.
ಕಣ್ಣುಗಾಣದ ಅಂಧಕರಂತೆ,
ತಿರುಗುವದ ನೋಡಿ ನಾ ಹೆದರಿಕೊಂಡು,
ಎಚ್ಚತ್ತು ಚಿತ್ತವ ಸುಯಿಧಾನವ ಮಾಡಿ,
ನಿಶ್ಚಿಂತವಾಗಿ ನಿಜವ ನೆಮ್ಮಿ, ಅರುಹ ಕಂಡೆ.
ಅರುಹಿಂದ ಆಚಾರವ ಕಂಡೆ.
ಆಚಾರವಿಡಿದು ಗುರುವ ಕಂಡೆ.
ಗುರುವಿಡಿದು ಲಿಂಗವ ಕಂಡೆ.
ಲಿಂಗವಿಡಿದು ಜಂಗಮವ ಕಂಡೆ.
ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ.
ಆ ಪಾದೋದಕ ಪ್ರಸಾದವಿಡಿದು ಮಹಾಶರಣ ಕಂಡೆ.
ಆ ಮಹಾ ಶರಣ ಪಾದವಿಡಿದು ಎನ್ನ ಕಾರಗುಣವಳಿಯಿತ್ತು.
ಕರಣ ಗುಣ ಸುಟ್ಟವು.
ಲಿಂಗಗುಣ ನಿಂದಿತ್ತು.
ಭಾವಬಯಲಾಯಿತ್ತು.  ಬಯಕೆ ಸವೆಯಿತ್ತು.
ಮಹಾದೇವನಾದ ಶರಣನ ಪಾದವಿಡಿದು ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂತ – ಪ್ರೇತಗಳಿಗೊಂದು ಸವಾಲು
Next post ಕುಲಾಯಿಯವರು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…