Home / ಲೇಖನ / ಇತರೆ / ಮಾತಾಡಿ ಬಿಡಬಾರದೇ ?

ಮಾತಾಡಿ ಬಿಡಬಾರದೇ ?

ಚಿತ್ರ: ತುಮಿಸು
ಚಿತ್ರ: ತುಮಿಸು

ಪ್ರಿಯ ಸಖಿ,

ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬಾಯಿಂದ ಜಾರಿ ಅನಾಹುತವನ್ನೋ ವಿಷಮ ಸ್ಥಿತಿಯನ್ನೋ ತಂದೊಡ್ಡುವ ಮಾತಿಗಳಿರುವಂತೆಯೇ ವ್ಯಕ್ತಿಗೆ ತಕ್ಕಂತೆ ಕೆಲವೊಮ್ಮೆ ಆಡಬೇಕಾಗಿದ್ದ ಮಾತುಗಳು ಹೊರಬರದೇ ಸಂಬಂಧಗಳು ಹರಿದು ಹೋಗಿ ಮತ್ತೆಂದೂ ಮನಸ್ಸುಗಳು ಒಂದಾಗದ ಹಂತವನ್ನು ತಲುಪಿಬಿಡುವ ಸಾಧ್ಯತೆಯೂ ಉಂಟು.

ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ನೋಡಿದಾಗಲೆಲ್ಲಾ ಅವರ ಬಗೆಗೆ ಮೂಡುತ್ತಿದ್ದ ಭಾವನೆಗಳನ್ನು ಅವರಿಗೆ ಹೇಳಲಾಗದೇ ಅವರು ಸತ್ತ ನಂತರ ಪರಿತಪಿಸುವಂತಾಗುವುದು. ಕಿತ್ತುಹೋಗುತ್ತಿರುವ ಸಂಬಂಧದ – ಕೊಂಡಿಯೊಂದು ಸಣ್ಣದೊಂದು ಸಂತೈಸುವಿಕೆ, ಕ್ಷಮಿಸುವಿಕೆಯಿಂದ, ಮಾತಿನಿಂದ ಗಟ್ಟಿಗೊಳ್ಳುವುದಾದಲ್ಲಿ ಆ ಮಾತನಾಡದೇ ಸಂಬಂಧ ಕಿತ್ತು ಹೋದ ನಂತರ ವ್ಯಥೆಪಡುವುದು. ಅವರು ಹೊರಟು ಹೋದರೆ ಮತ್ತೆ ಎಂದೆಂದಿಗೂ ಬರುವುದೇ ಇಲ್ಲ. ಹೋಗಬೇಡಿ ಎಂದು ಬಾಯಿ ತುದಿವರೆಗೆ ಬಂದ ಮಾತನ್ನು ಆಡಲಾರದಂತೆ ತಡೆಯುವುದು ಯಾವುದು ಎಂದು ಯೋಚಿಸಿದರೆ, ಹೆಚ್ಚಿನ ಬಾರಿ ಅಹಂಕಾರವೇ ಕಾರಣವಾಗಿರುತ್ತದೆ. ತನ್ನ ನೈಜ ಭಾವನೆಗಳನ್ನು ಅವರ ಮುಂದೆ ಅರುಹಿ ಬಿಟ್ಟರೆ ತಾನು ಚಿಕ್ಕವನಾಗಿಬಿಡುತ್ತೇನೆ. ಹೀಗಾಗಿ ಏನೂ ಹೇಳುವುದೇ ಬೇಡ ಎಂದು ತೀರ್ಮಾನಿಸಿ ತಾನೇ ದೊಡ್ಡವನು, ಮಹಾನ್ ಎಂಬ ಅಹಮ್ಮಿನ ಮುಖವಾಡವನ್ನು ತೊಟ್ಟುಕೊಂಡು ತನಗೆ ತಾನೇ ದೊಡ್ಡವನಾಗಿ ಬಿಟ್ಟೆ ಎಂದು ಭ್ರಮಿಸಿಕೊಳ್ಳುತ್ತಾನೆ ವ್ಯಕ್ತಿ.

ಸಖಿ, ಆದರೆ ಒಳಿತನ್ನು ಒಳಿತೆಂದು, ಹಿರಿಯದನ್ನು ಹಿರಿದೆಂದು ಸಂಬಂಧಗಳ ಕೊಂಡಿಯನ್ನು ಭದ್ರಪಡಿಸಲು ಕೆಲವೊಮ್ಮೆ ಆಡಲೇಬೇಕಿರುವ ಮಾತನ್ನು ಕಾಲ ಮೀರಿ ಹೋಗುವ ಮೊದಲು ಆಡಿಬಿಟ್ಟರೆ ನಾವು ಕಳೆದುಕೊಳ್ಳುವುದೇನು? ನಂತರ ಮತ್ತೆಂದೂ ಅಂತಹ ಅವಕಾಶ ಸಿಕ್ಕದೇ ಹೋಗಿಬಿಡಬಹುದು. ಆಗ ಪಶ್ಚಾತ್ತಾಪವೂ ಬೆಲೆಯಿಲ್ಲದ್ದಾಗಿ ಬಿಡುತ್ತದೆ. ಸಖಿ, ಆಡಬೇಕೆಂದಿರುವ ಮಾತುಗಳನ್ನು, ಅದರಿಂದ ಮತ್ತಷ್ಟು ಒಳಿತೇ ಆಗುವುದಾದರೆ, ಸಮಯ ಮೀರುವ ಮುನ್ನ ಆಡಿಬಿಡೋಣ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...