ಮಾತಾಡಿ ಬಿಡಬಾರದೇ ?

ಮಾತಾಡಿ ಬಿಡಬಾರದೇ ?

ಚಿತ್ರ: ತುಮಿಸು
ಚಿತ್ರ: ತುಮಿಸು

ಪ್ರಿಯ ಸಖಿ,

ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬಾಯಿಂದ ಜಾರಿ ಅನಾಹುತವನ್ನೋ ವಿಷಮ ಸ್ಥಿತಿಯನ್ನೋ ತಂದೊಡ್ಡುವ ಮಾತಿಗಳಿರುವಂತೆಯೇ ವ್ಯಕ್ತಿಗೆ ತಕ್ಕಂತೆ ಕೆಲವೊಮ್ಮೆ ಆಡಬೇಕಾಗಿದ್ದ ಮಾತುಗಳು ಹೊರಬರದೇ ಸಂಬಂಧಗಳು ಹರಿದು ಹೋಗಿ ಮತ್ತೆಂದೂ ಮನಸ್ಸುಗಳು ಒಂದಾಗದ ಹಂತವನ್ನು ತಲುಪಿಬಿಡುವ ಸಾಧ್ಯತೆಯೂ ಉಂಟು.

ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ನೋಡಿದಾಗಲೆಲ್ಲಾ ಅವರ ಬಗೆಗೆ ಮೂಡುತ್ತಿದ್ದ ಭಾವನೆಗಳನ್ನು ಅವರಿಗೆ ಹೇಳಲಾಗದೇ ಅವರು ಸತ್ತ ನಂತರ ಪರಿತಪಿಸುವಂತಾಗುವುದು. ಕಿತ್ತುಹೋಗುತ್ತಿರುವ ಸಂಬಂಧದ – ಕೊಂಡಿಯೊಂದು ಸಣ್ಣದೊಂದು ಸಂತೈಸುವಿಕೆ, ಕ್ಷಮಿಸುವಿಕೆಯಿಂದ, ಮಾತಿನಿಂದ ಗಟ್ಟಿಗೊಳ್ಳುವುದಾದಲ್ಲಿ ಆ ಮಾತನಾಡದೇ ಸಂಬಂಧ ಕಿತ್ತು ಹೋದ ನಂತರ ವ್ಯಥೆಪಡುವುದು. ಅವರು ಹೊರಟು ಹೋದರೆ ಮತ್ತೆ ಎಂದೆಂದಿಗೂ ಬರುವುದೇ ಇಲ್ಲ. ಹೋಗಬೇಡಿ ಎಂದು ಬಾಯಿ ತುದಿವರೆಗೆ ಬಂದ ಮಾತನ್ನು ಆಡಲಾರದಂತೆ ತಡೆಯುವುದು ಯಾವುದು ಎಂದು ಯೋಚಿಸಿದರೆ, ಹೆಚ್ಚಿನ ಬಾರಿ ಅಹಂಕಾರವೇ ಕಾರಣವಾಗಿರುತ್ತದೆ. ತನ್ನ ನೈಜ ಭಾವನೆಗಳನ್ನು ಅವರ ಮುಂದೆ ಅರುಹಿ ಬಿಟ್ಟರೆ ತಾನು ಚಿಕ್ಕವನಾಗಿಬಿಡುತ್ತೇನೆ. ಹೀಗಾಗಿ ಏನೂ ಹೇಳುವುದೇ ಬೇಡ ಎಂದು ತೀರ್ಮಾನಿಸಿ ತಾನೇ ದೊಡ್ಡವನು, ಮಹಾನ್ ಎಂಬ ಅಹಮ್ಮಿನ ಮುಖವಾಡವನ್ನು ತೊಟ್ಟುಕೊಂಡು ತನಗೆ ತಾನೇ ದೊಡ್ಡವನಾಗಿ ಬಿಟ್ಟೆ ಎಂದು ಭ್ರಮಿಸಿಕೊಳ್ಳುತ್ತಾನೆ ವ್ಯಕ್ತಿ.

ಸಖಿ, ಆದರೆ ಒಳಿತನ್ನು ಒಳಿತೆಂದು, ಹಿರಿಯದನ್ನು ಹಿರಿದೆಂದು ಸಂಬಂಧಗಳ ಕೊಂಡಿಯನ್ನು ಭದ್ರಪಡಿಸಲು ಕೆಲವೊಮ್ಮೆ ಆಡಲೇಬೇಕಿರುವ ಮಾತನ್ನು ಕಾಲ ಮೀರಿ ಹೋಗುವ ಮೊದಲು ಆಡಿಬಿಟ್ಟರೆ ನಾವು ಕಳೆದುಕೊಳ್ಳುವುದೇನು? ನಂತರ ಮತ್ತೆಂದೂ ಅಂತಹ ಅವಕಾಶ ಸಿಕ್ಕದೇ ಹೋಗಿಬಿಡಬಹುದು. ಆಗ ಪಶ್ಚಾತ್ತಾಪವೂ ಬೆಲೆಯಿಲ್ಲದ್ದಾಗಿ ಬಿಡುತ್ತದೆ. ಸಖಿ, ಆಡಬೇಕೆಂದಿರುವ ಮಾತುಗಳನ್ನು, ಅದರಿಂದ ಮತ್ತಷ್ಟು ಒಳಿತೇ ಆಗುವುದಾದರೆ, ಸಮಯ ಮೀರುವ ಮುನ್ನ ಆಡಿಬಿಡೋಣ ಅಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಏಲಕ್ಕಿ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…