Home / ಕವನ / ಕವಿತೆ / ಪಹರೆ

ಪಹರೆ

ನಿರಂತರ ಹಸಿವಿನ ಕೂಗು
ಧಾನ್ಯಗಳ ಸಂಗ್ರಹ ಜ್ಞಾನ ಕಣಜ
ಹೊಸ ಮಳೆ ಹೊಸ ಬೆಳೆ
ಹೊಸ ಹುಟ್ಟು ಪಡೆವ ಜನ್ಮ.

ಕಣ್ಣಿಗೆ ಕಾಣುವ ಆಕಾರ ವಿಕಾರ
ಜೀವ ಜಲ ಹರಿದು ಹರಿದು
ತಂಪಾದ ಪರಿವರ್ತನೆಯ ಹಾದಿ
ದೊಡ್ಡವರಾದವರೆಲ್ಲ ಗುರುಗಳು.

ಅರೆದುಕೊಂಡ ಬದುಕು ತೆರೆದ ಕಣ್ಣು
ಒಳಗೊಳಗೆ ಬರಿದಾಗಿ ತುಂಬುವ ಜಲ
ಎತ್ತರಕೆ ಹಾರಿದ ಹಕ್ಕಿಯ ತುಡಿತ
ಸೆಳೆದು ಅಪ್ಪುವ ಮೋಹ ಗುರುತ್ವ.

ಒಂದು ದಾಟು ದಾಟಲು ಬೇಕು
ಬದುಕ ನದಿಯಲಿ ತೇಲಿ ದೋಣಿ
ಆಚೆದಡ ತಲುಪಿ ನಡೆವ ಛಾತಿ
ಪಹರೆದಾಟಿ ಬಂದವರು ಅಲ್ಲಮರು.

ಮೋಹವಿಲ್ಲದ ಉಸಿರು ದಾಹವಿಲ್ಲದ ಅರಿವು
ಕಳೆದ ಬಯಲು ತುಂಬ ತಿಳಿಗಾಳಿ
ಎಲ್ಲಿಯೂ ನಿಲ್ಲದ ನಡುಗೆ ದಾರಿ
ಕಾಲದಲ್ಲಿ ಮಾತ್ರ ಹೊರಡುವ ವಿದಾಯ.

ಇದ್ದದ್ದು ಇದ್ಹಾಂಗ ಇಲ್ಲದ್ದು ಇಲ್ಲದ್ಹಾಂಗ
ಕಾರ್ಯ ಕಾರಣ ಪ್ರೀತಿ ಪರಿಚಾರಕ
ಎಷ್ಟೊಂದು ಹೂವುಗಳು ಅರಳಿದವು
ಅವನ ಪಹರೆ ಕಾಳಜಿಯ ತೋಟದಲಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...