ಪಹರೆ

ನಿರಂತರ ಹಸಿವಿನ ಕೂಗು
ಧಾನ್ಯಗಳ ಸಂಗ್ರಹ ಜ್ಞಾನ ಕಣಜ
ಹೊಸ ಮಳೆ ಹೊಸ ಬೆಳೆ
ಹೊಸ ಹುಟ್ಟು ಪಡೆವ ಜನ್ಮ.

ಕಣ್ಣಿಗೆ ಕಾಣುವ ಆಕಾರ ವಿಕಾರ
ಜೀವ ಜಲ ಹರಿದು ಹರಿದು
ತಂಪಾದ ಪರಿವರ್ತನೆಯ ಹಾದಿ
ದೊಡ್ಡವರಾದವರೆಲ್ಲ ಗುರುಗಳು.

ಅರೆದುಕೊಂಡ ಬದುಕು ತೆರೆದ ಕಣ್ಣು
ಒಳಗೊಳಗೆ ಬರಿದಾಗಿ ತುಂಬುವ ಜಲ
ಎತ್ತರಕೆ ಹಾರಿದ ಹಕ್ಕಿಯ ತುಡಿತ
ಸೆಳೆದು ಅಪ್ಪುವ ಮೋಹ ಗುರುತ್ವ.

ಒಂದು ದಾಟು ದಾಟಲು ಬೇಕು
ಬದುಕ ನದಿಯಲಿ ತೇಲಿ ದೋಣಿ
ಆಚೆದಡ ತಲುಪಿ ನಡೆವ ಛಾತಿ
ಪಹರೆದಾಟಿ ಬಂದವರು ಅಲ್ಲಮರು.

ಮೋಹವಿಲ್ಲದ ಉಸಿರು ದಾಹವಿಲ್ಲದ ಅರಿವು
ಕಳೆದ ಬಯಲು ತುಂಬ ತಿಳಿಗಾಳಿ
ಎಲ್ಲಿಯೂ ನಿಲ್ಲದ ನಡುಗೆ ದಾರಿ
ಕಾಲದಲ್ಲಿ ಮಾತ್ರ ಹೊರಡುವ ವಿದಾಯ.

ಇದ್ದದ್ದು ಇದ್ಹಾಂಗ ಇಲ್ಲದ್ದು ಇಲ್ಲದ್ಹಾಂಗ
ಕಾರ್ಯ ಕಾರಣ ಪ್ರೀತಿ ಪರಿಚಾರಕ
ಎಷ್ಟೊಂದು ಹೂವುಗಳು ಅರಳಿದವು
ಅವನ ಪಹರೆ ಕಾಳಜಿಯ ತೋಟದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವರ್ಗದಲಿ ದೇವ ನಗುತಿಹನೇನು?
Next post ಪೂರ್ಣ ಜೀವಿ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…