ಪಹರೆ

ನಿರಂತರ ಹಸಿವಿನ ಕೂಗು
ಧಾನ್ಯಗಳ ಸಂಗ್ರಹ ಜ್ಞಾನ ಕಣಜ
ಹೊಸ ಮಳೆ ಹೊಸ ಬೆಳೆ
ಹೊಸ ಹುಟ್ಟು ಪಡೆವ ಜನ್ಮ.

ಕಣ್ಣಿಗೆ ಕಾಣುವ ಆಕಾರ ವಿಕಾರ
ಜೀವ ಜಲ ಹರಿದು ಹರಿದು
ತಂಪಾದ ಪರಿವರ್ತನೆಯ ಹಾದಿ
ದೊಡ್ಡವರಾದವರೆಲ್ಲ ಗುರುಗಳು.

ಅರೆದುಕೊಂಡ ಬದುಕು ತೆರೆದ ಕಣ್ಣು
ಒಳಗೊಳಗೆ ಬರಿದಾಗಿ ತುಂಬುವ ಜಲ
ಎತ್ತರಕೆ ಹಾರಿದ ಹಕ್ಕಿಯ ತುಡಿತ
ಸೆಳೆದು ಅಪ್ಪುವ ಮೋಹ ಗುರುತ್ವ.

ಒಂದು ದಾಟು ದಾಟಲು ಬೇಕು
ಬದುಕ ನದಿಯಲಿ ತೇಲಿ ದೋಣಿ
ಆಚೆದಡ ತಲುಪಿ ನಡೆವ ಛಾತಿ
ಪಹರೆದಾಟಿ ಬಂದವರು ಅಲ್ಲಮರು.

ಮೋಹವಿಲ್ಲದ ಉಸಿರು ದಾಹವಿಲ್ಲದ ಅರಿವು
ಕಳೆದ ಬಯಲು ತುಂಬ ತಿಳಿಗಾಳಿ
ಎಲ್ಲಿಯೂ ನಿಲ್ಲದ ನಡುಗೆ ದಾರಿ
ಕಾಲದಲ್ಲಿ ಮಾತ್ರ ಹೊರಡುವ ವಿದಾಯ.

ಇದ್ದದ್ದು ಇದ್ಹಾಂಗ ಇಲ್ಲದ್ದು ಇಲ್ಲದ್ಹಾಂಗ
ಕಾರ್ಯ ಕಾರಣ ಪ್ರೀತಿ ಪರಿಚಾರಕ
ಎಷ್ಟೊಂದು ಹೂವುಗಳು ಅರಳಿದವು
ಅವನ ಪಹರೆ ಕಾಳಜಿಯ ತೋಟದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವರ್ಗದಲಿ ದೇವ ನಗುತಿಹನೇನು?
Next post ಪೂರ್ಣ ಜೀವಿ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys