ಸ್ವರ್ಗದಲಿ ದೇವ ನಗುತಿಹನೇನು?

ಯಾರ ನುಡಿಗಳ ಸೋಂಕು ಸುಳಿದೊಡನೆಯೇ ಮನದ
ಮೈದಾನದಲಿ ಬಾಳ ಋತು ವಸಂತದ ಸುಗ್ಗಿ
ಎಳೆಯಾಸೆಗಳ ಚಿಗುರ ತಂದು, ಒಲವಿನ ಹಸದ
ಇದೊ ಎಂದು ಪಿಸುಗುಡಲು, ಜೀವನವು ಹಿರಿ ಹಿಗ್ಗಿ
ನಲಿದಿತೋ, ಆಕೆ ಬರುವಳು ಇಂದು ! ಮತ್ತೊಮ್ಮೆ
ನಕ್ಕು ನಗೆಯಾಡಿಸುವೆ ! ನಾಚುತಲಿ ಕೆಂಪಾಗಿ.
ನಿರ್ಮಲತೆ ಕಂಗಳಲಿ ನಲುಮೆ ಬೀರುತಲೊಮ್ಮೆ
ಅಂದಿನೋಲು, ಕೊಂಕಿನಲಿ, ಒಂದು ಚಣ ತಲೆಬಾಗಿ,
ಮತ್ತೆ ಎದೆಯೆಡೆ ಸುಳಿದು, ನಗುವ ಸೂಸುತ ಬೀಗಿ,
ಕುಣಿಯುವಳು ಎಂದಿದ್ದೆ!

ಮುಂ ಬಂದು ಕಂಡೆನದ!
ಜೀವನದ ವಿಷದೊಡಲ ಸರ್ಪಗಳ ಉರಿ ತಾಗಿ,
ಸಾವಿನೆಡೆ ದಿಬ್ಬಣವ ಬೆಳಸಿರುವ ಎಳತನದ
ಉಷೆಯ ನನ್ನುಷೆಯನ್ನು ! ಒಲವಿಗಿದೆ ಕೊನೆಯೇನು ?
ಆದರೂ ಸ್ವರ್ಗದಲಿ ದೇವ ನಗುತಿಹನೇನು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಪ – ೧೪
Next post ಪಹರೆ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…