ಪೂರ್ಣ ಜೀವಿ

ಹೊನ್ನ ವಿಷದ ಹಲ್ಲು ಧರಿಸಿ
ಇನ್ನು ಹೆಡೆಯನೆತ್ತಿ ಮೆರೆದ
ಘನ್ನ ಧನಿಕನಾಗಗಳನು ಹಿಡಿದು ಮಂತ್ರಿಸಿ |

ತನ್ನ ಕಾರ್ಯಕೊಲಿದು ಬಂದು
ಬನ್ನ ಬವಣಿಗಿಳಿಸಿ ಅವರ
ಧನ್ಯರಾಗಿ ಮಾಡಿದಂಥ ಕುಶಲಗಾರುಡೀ || ೧ ||

ಕಲಿತ ವಿದ್ಯೆಯಿಂದ ಮದಿಸಿ,
ಕಲಿತುಕೊಳದೆ ಉಳಿದ ಜನರ
ಕುಲವೆ ಬೇರೆ ತಮ್ಮದೆಂದು ತಿಳಿದ ಜನರನು |

ಒಲಿಸಿ ತನ್ನ ದೀಕ್ಷೆಯಿತ್ತು
ಬಿಳಿಯ ವೇಷದುಡಿಗೆ ಕೊಟ್ಟು
ಕೊಳೆಯ ಕಳೆವ ಬಿರುದುತೊಟ್ಟ ದೀನಬಂಧುವು || ೨ ||

ಉಚ್ಚ ಧರ್ಮದವರ ಹೆಮ್ಮೆ
ಬಚ್ಚಗೊಳಿಸಿ ಅವರ ಮನಸು
ಅಚ್ಚ ಸೇವೆಗೆಳಸಿ ಪೂರ್ವಕರ್ಮ ಕೆಡಿಸಲು |

ಸ್ವಚ್ಛ ಮಾರ್ಗವನ್ನು ತೋರಿ
ನಿಚ್ಚ ಬಾಳು ಬೆಳಗುವಂತೆ
ಕೃಚ್ಛವ್ರತವ ಹಳಿವ ಹೊಲೆಯ ಕಳೆವತವಸಿಯೆ || ೩ ||

“ರಾಜಕಾರ್ಯ ಮತ್ತೆ ಆ ಸ-
ಮಾಜ ಧರ್ಮಗಳಲ್ಲಿ ತಮಗೆ
ಮೂಜಗದೊಳು ಯಾರುಸರಿಯು” ಎನುವ ಬಿಳಿಯರ |

ತೇಜವಡಗುವಂತೆ ದಿವ್ಯ-
ರಾಜಧರ್ಮ ಮೆರೆಸಿ ವರ ಸ-
ಮಾಜ ಮಾರ್ಗ ತೊಳಗಿಸಿರುವ ಪೂರ್ಣಜೀವಿಯು || ೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಹರೆ
Next post ವರ್ತಕರು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys