ಪೂರ್ಣ ಜೀವಿ

ಹೊನ್ನ ವಿಷದ ಹಲ್ಲು ಧರಿಸಿ
ಇನ್ನು ಹೆಡೆಯನೆತ್ತಿ ಮೆರೆದ
ಘನ್ನ ಧನಿಕನಾಗಗಳನು ಹಿಡಿದು ಮಂತ್ರಿಸಿ |

ತನ್ನ ಕಾರ್ಯಕೊಲಿದು ಬಂದು
ಬನ್ನ ಬವಣಿಗಿಳಿಸಿ ಅವರ
ಧನ್ಯರಾಗಿ ಮಾಡಿದಂಥ ಕುಶಲಗಾರುಡೀ || ೧ ||

ಕಲಿತ ವಿದ್ಯೆಯಿಂದ ಮದಿಸಿ,
ಕಲಿತುಕೊಳದೆ ಉಳಿದ ಜನರ
ಕುಲವೆ ಬೇರೆ ತಮ್ಮದೆಂದು ತಿಳಿದ ಜನರನು |

ಒಲಿಸಿ ತನ್ನ ದೀಕ್ಷೆಯಿತ್ತು
ಬಿಳಿಯ ವೇಷದುಡಿಗೆ ಕೊಟ್ಟು
ಕೊಳೆಯ ಕಳೆವ ಬಿರುದುತೊಟ್ಟ ದೀನಬಂಧುವು || ೨ ||

ಉಚ್ಚ ಧರ್ಮದವರ ಹೆಮ್ಮೆ
ಬಚ್ಚಗೊಳಿಸಿ ಅವರ ಮನಸು
ಅಚ್ಚ ಸೇವೆಗೆಳಸಿ ಪೂರ್ವಕರ್ಮ ಕೆಡಿಸಲು |

ಸ್ವಚ್ಛ ಮಾರ್ಗವನ್ನು ತೋರಿ
ನಿಚ್ಚ ಬಾಳು ಬೆಳಗುವಂತೆ
ಕೃಚ್ಛವ್ರತವ ಹಳಿವ ಹೊಲೆಯ ಕಳೆವತವಸಿಯೆ || ೩ ||

“ರಾಜಕಾರ್ಯ ಮತ್ತೆ ಆ ಸ-
ಮಾಜ ಧರ್ಮಗಳಲ್ಲಿ ತಮಗೆ
ಮೂಜಗದೊಳು ಯಾರುಸರಿಯು” ಎನುವ ಬಿಳಿಯರ |

ತೇಜವಡಗುವಂತೆ ದಿವ್ಯ-
ರಾಜಧರ್ಮ ಮೆರೆಸಿ ವರ ಸ-
ಮಾಜ ಮಾರ್ಗ ತೊಳಗಿಸಿರುವ ಪೂರ್ಣಜೀವಿಯು || ೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಹರೆ
Next post ವರ್ತಕರು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…