ದೂರದೊಂದು ತೀರದಿಂದ

ಎಲ್ಲಿಂದಲೋ ತೇಲಿ ಮೆಲ್ಲನೆ
ಹರಿದು ಬಂದ ರಾಗ, ಹೂವಿನ
ಗಿಡಗಳ ಮೇಲೆ ಹಾರುವ ಚಿಟ್ಟೆ!
ಎದೆ ತುಂಬ ಪರಿವೆ ಇಲ್ಲದ ನೆನಪು,
ಅಂಗಳದಲಿ ಕುಪ್ಪಳಿಸುವ ನೀಲಿಹಕ್ಕಿ,
ಸಾವರ ಸಂತಸದ ಮೋಡಗಳ
ಸಂಚಲನ ಭಾನು!
ಒಮ್ಮೆ ಹೀಗೆ ಸಂತೃಪ್ತದಲಿ
ಹೊಳೆವ ಮನದ ಮಿಂಚು
ಮಾಯವಾಗಿವೆ ಜಗದ
ತಲ್ಲಣಗಳ ಮರೆತ ಮಾತು
ನೀ ಬರುವ ದಾರಿ ಸ್ವಚ್ಛವಾಗಿ ತಿಳಿಯಲಾಗಿದೆ.

ಎಲ್ಲಿಂದಲೋ ಸೂಸಿ ಬಂದ ಸುಹಾಸನೆ
ಕಾಮನ ಬಿಲ್ಲಿನ ರಂಗು
ಚಿಗುರು ಚಿಗುರಲಿ ಹಸಿರು ಕಂಪನ
ರಾಗ ತಾಳಕೆ ಭಾವಗೀತೆ ಹಾಡಿದ ಕೋಗಿಲೆ
ಘಮ್ಮೆಂದು ಸೂಸಿ ತಳಿರು ಹಗುರ
ಗಂಧಗಾಳಿ ಒಡಲ ತುಂಬ ಸೂಸಿ
ಬೆಳದಿಂಗಳ ಸಾಧಕ ಕವಿಗಳು
ಕೆರೆಯ ದಂಡೆಯ ಅಲೆಯಗುಂಟ
ಗಾಳ ಹಾಕಿದ ಹುಡುಗ ತುಂಟ
ಎಲ್ಲ ಪ್ರಶ್ನೆಗಳಿಗೆ ಉತ್ತರ ಕೇಳುವ
ತುಂಟ ಮಗಳು ಕವಿತಾ
ನೀ ನಡೆದು ಬರುವ ದಾರಿಯಲಿ ಯುಗಾದಿ ಸಂಭ್ರಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೭
Next post ಶ್ರೀ ಗುರುವಿಗೆ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys