Home / ಕವನ / ಕವಿತೆ / ಹಾಲೆಂಡಿನ ನಿಸರ್ಗ

ಹಾಲೆಂಡಿನ ನಿಸರ್ಗ

ಉತ್ತರ ಧೃವಕ್ಕೆ ಹೊಂದಿಕೊಂಡಿರುವ
ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ
ಹೊಕ್ಕಾಗ –
ಮನಸ್ಸು – ದೇಹ ಎಲ್ಲ ನನಗರಿಯದೇ
slow motion pictureದಂತಾಗಿ
ಹಗುರಾಗಿ ಹಕ್ಕಿಯಾಗಿ ಹಾರಾಡಿತು.
ಧರಗಿಳಿದು ಬಂದ ಸ್ವರ್ಗದೊಳಗೆ
ಅದೇ ಮಳೆಯಾಗಿ ಸಿಂಪಡಿಸಿದ
ನೀರುಗಳಿಂದೆದ್ದು ಒಂದ ಗಿಡಬಳ್ಳಿ ಹೂವುಗಳು
ನನ್ನನ್ನು ಸ್ವಾಗತಿಸಿದವು.
“ಹೊಲಗದ್ದೆಗಳಲ್ಲಿ ಹರೆಯುವ ತಿಳಿನೀರಿನ
ಕಾಲುವೆಗಳ ‘ಝುಳು – ಜುಳು ಸಂಗೀತ’
ಅಮಸ್ಟರ್ಡ್ಯಾಂದ ಕ್ಯಾಬರೆ show  ಆಗಲೇ
ಅದೇ ಹಿಂದಿನ ದಿನ ನೋಡಿದ Rock & Rollದ
ಕಿರುಚಾಟವಾಗಲೀ ನನ್ನ ಮನಸ್ಸಿನಿಂದ ಕಿತ್ತೊಗೆದು
ಮೌನವಾಗಿ ಮೃದುವಾಗಿ ಆಕರ್ಶಿಸಿತ್ತು”
ಹಳದಿ ಕೆಂಪು ‘ಟ್ಟೂಲಿಪ್’ ಹೂಗಳ (Combination or contrast)
ಸಾಲಿನಲ್ಲಿ ನಡೆದಾಡುವಾಗ
ನಾ ತೊಟ್ಟ Paris T Shirtಕೂಡಾ
ತುಂಬಾ ಸಪ್ಪೆಯಾಗಿ ಕಂಡಿತು.
“Wind Mill” (ಗಾಳಿಚಕ್ರ)ದ ಚಕ್ರಗಳು
ವಿಶಾಲ ವಿಹಂಗಮ ನಿಸರ್ಗ ಸ್ವರ್ಗದೊಳಗೆ
ಕಿರೀಟ (crown) ಇಟ್ಟಂತಿದ್ದರೆ
“North Seaಗೆ” (ಉತ್ತರ ಸಮುದ್ರ) ರಾಣಿಯ
ಪೋಷಾಕಿನಂತ ಸುಂದರವಾಗಿ
ಗರಿಗರಿಯಾಗಿ – ಬಿಂಕದಂತೆ ಅಲೆ‌ಅಲೆಯಾಗಿ
ಬಂದು ನನ್ನ ತಬ್ಬಿಬ್ಬದಾಗ
ನಾನು ಈ ನಿಸರ್ಗ ಮಡಿಲಲ್ಲಿ
ತಬ್ಬಿಬ್ಬಾದೆ.
(ನೆದರ್‌ಲ್ಯಾಂಡ್‌ (ಹಾಲೆಂಡ್)ದ ಸುಂದರ ಪ್ರಶಾಂತ ಹಳ್ಳಿಗಳಾದ ಮುರ್ಕನ್‌, ಓಲೆಡ್ಯಾಂ ಸೈನ್ಸೆಗಳ ವಿಹಂಗಮ ಅನುಭವ)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...