Home / ಕವನ / ಕವಿತೆ / ಹಾಲೆಂಡಿನ ನಿಸರ್ಗ

ಹಾಲೆಂಡಿನ ನಿಸರ್ಗ

ಉತ್ತರ ಧೃವಕ್ಕೆ ಹೊಂದಿಕೊಂಡಿರುವ
ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ
ಹೊಕ್ಕಾಗ –
ಮನಸ್ಸು – ದೇಹ ಎಲ್ಲ ನನಗರಿಯದೇ
slow motion pictureದಂತಾಗಿ
ಹಗುರಾಗಿ ಹಕ್ಕಿಯಾಗಿ ಹಾರಾಡಿತು.
ಧರಗಿಳಿದು ಬಂದ ಸ್ವರ್ಗದೊಳಗೆ
ಅದೇ ಮಳೆಯಾಗಿ ಸಿಂಪಡಿಸಿದ
ನೀರುಗಳಿಂದೆದ್ದು ಒಂದ ಗಿಡಬಳ್ಳಿ ಹೂವುಗಳು
ನನ್ನನ್ನು ಸ್ವಾಗತಿಸಿದವು.
“ಹೊಲಗದ್ದೆಗಳಲ್ಲಿ ಹರೆಯುವ ತಿಳಿನೀರಿನ
ಕಾಲುವೆಗಳ ‘ಝುಳು – ಜುಳು ಸಂಗೀತ’
ಅಮಸ್ಟರ್ಡ್ಯಾಂದ ಕ್ಯಾಬರೆ show  ಆಗಲೇ
ಅದೇ ಹಿಂದಿನ ದಿನ ನೋಡಿದ Rock & Rollದ
ಕಿರುಚಾಟವಾಗಲೀ ನನ್ನ ಮನಸ್ಸಿನಿಂದ ಕಿತ್ತೊಗೆದು
ಮೌನವಾಗಿ ಮೃದುವಾಗಿ ಆಕರ್ಶಿಸಿತ್ತು”
ಹಳದಿ ಕೆಂಪು ‘ಟ್ಟೂಲಿಪ್’ ಹೂಗಳ (Combination or contrast)
ಸಾಲಿನಲ್ಲಿ ನಡೆದಾಡುವಾಗ
ನಾ ತೊಟ್ಟ Paris T Shirtಕೂಡಾ
ತುಂಬಾ ಸಪ್ಪೆಯಾಗಿ ಕಂಡಿತು.
“Wind Mill” (ಗಾಳಿಚಕ್ರ)ದ ಚಕ್ರಗಳು
ವಿಶಾಲ ವಿಹಂಗಮ ನಿಸರ್ಗ ಸ್ವರ್ಗದೊಳಗೆ
ಕಿರೀಟ (crown) ಇಟ್ಟಂತಿದ್ದರೆ
“North Seaಗೆ” (ಉತ್ತರ ಸಮುದ್ರ) ರಾಣಿಯ
ಪೋಷಾಕಿನಂತ ಸುಂದರವಾಗಿ
ಗರಿಗರಿಯಾಗಿ – ಬಿಂಕದಂತೆ ಅಲೆ‌ಅಲೆಯಾಗಿ
ಬಂದು ನನ್ನ ತಬ್ಬಿಬ್ಬದಾಗ
ನಾನು ಈ ನಿಸರ್ಗ ಮಡಿಲಲ್ಲಿ
ತಬ್ಬಿಬ್ಬಾದೆ.
(ನೆದರ್‌ಲ್ಯಾಂಡ್‌ (ಹಾಲೆಂಡ್)ದ ಸುಂದರ ಪ್ರಶಾಂತ ಹಳ್ಳಿಗಳಾದ ಮುರ್ಕನ್‌, ಓಲೆಡ್ಯಾಂ ಸೈನ್ಸೆಗಳ ವಿಹಂಗಮ ಅನುಭವ)
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...