Home / ಕವನ / ಕವಿತೆ / ಇಲಿ ಬೇಟೆ

ಇಲಿ ಬೇಟೆ

ತಿಮ್ಮ ಬೋರ ನಂಜ ಕೂಡಿ
ರಾಗಿ ಹಿಟ್ಟು ಕಲಸುವಾಗ
ಬಾಯ್ಗೆ ಬಾಯಿ ಮಾತು ಎದ್ದು
ಅವರನ್ನವರು ಮರೆತು ಕುಡಿದು
ನಂಜ ಕುಪ್ಪಿ ಎತ್ತಿದ-
ಬೋರ ಪಾಲು ಕೇಳಿದ!

ಹಿಂದಿನಿರುಳು ಬೇಟೆಯಲ್ಲಿ
ಕೊಚ್ಚೆ ಹಾರ್ದ ಮೊಲದ ಕಾಲ
ಹಿಡಿದು ತಿಮ್ಮ ಅಂತೆ ತಂದು
ಮಾಂಸ ತುಂಡು ಮಾಡಿ ಕಡೆಗೆ
ಸುಟ್ಟು ಕೂತ ಮಾಂಸವ;
ಸೇಂದಿ ಜತೆಗೆ ರಸವಲ!

ನಂಜ ಒದರಿ ಪಾಲು ಕೇಳೆ
ಹರಕು ಜೇಬು ಮೂಲೆಯಿಂದ,
ಇಲಿಯು ಒಂದು ಬೆನ್ನುಹತ್ತಿ
ಹಾಗೆ ಕೂತು ಹೆಗಲ ಮೇಲೆ
ನೋಡಿ ಆಚೆ ಈಚೆಗೆ;
ಬಿತ್ತು ಹಿಟ್ಟು ಪಾತ್ರಕೆ!

ರಾಗಿ ಮುದ್ದೆ ಇಲಿಯ ಗಾತ್ರ,
ಹಿಟ್ಟೊ ಇಲಿಯೊ ಎಂದು ಬೋರ
ಬೆಪ್ಪು ಹಿಡಿದು ನೋಡುತಿರಲು,
ಹಿಟ್ಟು ಓಡುತ್ತದೆಯೆ-ಎಂದು
ಸಿಡಿದು ಹಾರ್ದ ಇಲಿಯನು
ಓಡಿ ಕಾಡಿ ಕೊಲ್ಲಲು!

ಇಲಿಯು ಹೆಕ್ಕಿ ಮುದ್ದೆಯೊಂದ
ನಂಜನ್ ಕಾಲ ಮಧ್ಯಕ್ಕಾಗಿ
ಓಡೆ-ಅವನು ಬೋರನೆಗಲ
ಹತ್ತಿ ಕೂತು ಗಾಬ್ರಿಯಿಂದ,
ಅಯ್ಯೊ ಇಲಿಯು ಅಂದನು.
ಹಿಟ್ಟು ಹೋಯ್ತೆಂದತ್ತನು!

ತಿಮ್ಮ ಓಡಿ ಓಡಿ ಇಲಿಯ
ಬೆರಸಲಿತ್ತ ಬೋರ ಬಂದು
ಅಲ್ಲೆ ಇದ್ದ ಗುಂಡುಕಲ್ಲ
ಎತ್ತಿ ಓಡ್ದ ಇಲಿಯನಟ್ಟಿ
ಕೊಲ್ವೆನಿಲಿಯನೆನ್ನುತ
ಬಡಿವೆ ತಲೆಗೆಂದೇಳುತ!

ಇತ್ತ ಅತ್ತ ಇಲಿಯ ಸುತ್ತ
ಓಡಿ ದಣಿಯೆ ಬೋರ ತಿಮ್ಮ
ನಂಜ ಅತ್ತ ಕಾಡು ಸುತ್ತಿ
ಆಯ್ದು ತಂದು ದೊಣ್ಣೆ ಒಂದು-
ಇಲಿಯ ತಲೆಗೆ ಬಡಿಯಲು
ಮುದ್ದೆ ಸೇಡು ತೀರ್‍ಸಲು!

ಇಲಿಗೆ ಎಂದು ಬಡಿದ ಪೆಟ್ಟು
ಪಾತ್ರೆ ತಾಗೆ ಹಿಟ್ಟು ಚದರಿ-
ಕುಪ್ಪಿ ಚೂರು ಸಿಡಿದು ಹಾರಿ-
ಹೋಯ್ತೊ ಕಣ್ಣು-ಎಂದು ತಿಮ್ಮ
ಬೊಬ್ಬೆಹಾಕೆ ಇಲಿಯದೊ
ಬಿಲವ ಸರ್‍ರನ್ಹೊಕ್ಕಿತ್ತೊ!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...