Home / ಕವನ / ಕವಿತೆ / ಇಲಿ ಬೇಟೆ

ಇಲಿ ಬೇಟೆ

ತಿಮ್ಮ ಬೋರ ನಂಜ ಕೂಡಿ
ರಾಗಿ ಹಿಟ್ಟು ಕಲಸುವಾಗ
ಬಾಯ್ಗೆ ಬಾಯಿ ಮಾತು ಎದ್ದು
ಅವರನ್ನವರು ಮರೆತು ಕುಡಿದು
ನಂಜ ಕುಪ್ಪಿ ಎತ್ತಿದ-
ಬೋರ ಪಾಲು ಕೇಳಿದ!

ಹಿಂದಿನಿರುಳು ಬೇಟೆಯಲ್ಲಿ
ಕೊಚ್ಚೆ ಹಾರ್ದ ಮೊಲದ ಕಾಲ
ಹಿಡಿದು ತಿಮ್ಮ ಅಂತೆ ತಂದು
ಮಾಂಸ ತುಂಡು ಮಾಡಿ ಕಡೆಗೆ
ಸುಟ್ಟು ಕೂತ ಮಾಂಸವ;
ಸೇಂದಿ ಜತೆಗೆ ರಸವಲ!

ನಂಜ ಒದರಿ ಪಾಲು ಕೇಳೆ
ಹರಕು ಜೇಬು ಮೂಲೆಯಿಂದ,
ಇಲಿಯು ಒಂದು ಬೆನ್ನುಹತ್ತಿ
ಹಾಗೆ ಕೂತು ಹೆಗಲ ಮೇಲೆ
ನೋಡಿ ಆಚೆ ಈಚೆಗೆ;
ಬಿತ್ತು ಹಿಟ್ಟು ಪಾತ್ರಕೆ!

ರಾಗಿ ಮುದ್ದೆ ಇಲಿಯ ಗಾತ್ರ,
ಹಿಟ್ಟೊ ಇಲಿಯೊ ಎಂದು ಬೋರ
ಬೆಪ್ಪು ಹಿಡಿದು ನೋಡುತಿರಲು,
ಹಿಟ್ಟು ಓಡುತ್ತದೆಯೆ-ಎಂದು
ಸಿಡಿದು ಹಾರ್ದ ಇಲಿಯನು
ಓಡಿ ಕಾಡಿ ಕೊಲ್ಲಲು!

ಇಲಿಯು ಹೆಕ್ಕಿ ಮುದ್ದೆಯೊಂದ
ನಂಜನ್ ಕಾಲ ಮಧ್ಯಕ್ಕಾಗಿ
ಓಡೆ-ಅವನು ಬೋರನೆಗಲ
ಹತ್ತಿ ಕೂತು ಗಾಬ್ರಿಯಿಂದ,
ಅಯ್ಯೊ ಇಲಿಯು ಅಂದನು.
ಹಿಟ್ಟು ಹೋಯ್ತೆಂದತ್ತನು!

ತಿಮ್ಮ ಓಡಿ ಓಡಿ ಇಲಿಯ
ಬೆರಸಲಿತ್ತ ಬೋರ ಬಂದು
ಅಲ್ಲೆ ಇದ್ದ ಗುಂಡುಕಲ್ಲ
ಎತ್ತಿ ಓಡ್ದ ಇಲಿಯನಟ್ಟಿ
ಕೊಲ್ವೆನಿಲಿಯನೆನ್ನುತ
ಬಡಿವೆ ತಲೆಗೆಂದೇಳುತ!

ಇತ್ತ ಅತ್ತ ಇಲಿಯ ಸುತ್ತ
ಓಡಿ ದಣಿಯೆ ಬೋರ ತಿಮ್ಮ
ನಂಜ ಅತ್ತ ಕಾಡು ಸುತ್ತಿ
ಆಯ್ದು ತಂದು ದೊಣ್ಣೆ ಒಂದು-
ಇಲಿಯ ತಲೆಗೆ ಬಡಿಯಲು
ಮುದ್ದೆ ಸೇಡು ತೀರ್‍ಸಲು!

ಇಲಿಗೆ ಎಂದು ಬಡಿದ ಪೆಟ್ಟು
ಪಾತ್ರೆ ತಾಗೆ ಹಿಟ್ಟು ಚದರಿ-
ಕುಪ್ಪಿ ಚೂರು ಸಿಡಿದು ಹಾರಿ-
ಹೋಯ್ತೊ ಕಣ್ಣು-ಎಂದು ತಿಮ್ಮ
ಬೊಬ್ಬೆಹಾಕೆ ಇಲಿಯದೊ
ಬಿಲವ ಸರ್‍ರನ್ಹೊಕ್ಕಿತ್ತೊ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...