ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ
ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು
ಬ್ರೇಕು ಗೇರುಗಳ ಕಿರಿಕಿರಿ ಶಬ್ದ
ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ
ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು
ಹೊರಗೆ ಗಾಲಿ ಬದಲಿಸುವ
ಡ್ರೈವರ್, ಕ್ಲಿನರ್ಸ್ ಜೊತೆಗೊಂದಿಷ್ಟು ಜಗಳದ ಪ್ಯಾಸೆಂಜರ್ಸ್….
ಕೊನೆಯ ಸೀಟಿಗೆ ಅರ್ಜೆಂಟ್ದಲ್ಲಿ ಬಂದ
ಗಾಗಲ್ವಾಲಾನ ಬೂಟ ಸಪ್ಪಳ,
ಬೆಚ್ಚಗೆ ಮಲಗಿದ ಮಗು ತನ್ನಿರುವಿಕೆಯ ಅಳು
ಪಕ್ಕಲ್ಲೇ ಲೋಡೆಡ್ ಟ್ರಕ್ ಧಡಾರನೇ ದಾಟಿ ಹೋದದ್ದು
ಬಸ್ ಅಲುಗಾಟ
ಮತ್ತೆ ಡ್ರೈವರ್ ಸೀಟಿಗೆ ಹಾಜರ್
ಗೇರು ಬ್ರೇಕು ಚೆಕ್ ಮಾಡಬೇಕಾದ ಕೈ
ಟಿ.ವಿ. ಸ್ಟೀರಿಯೋ ಬಟನ್ಗಳ ಮೇಲೆ
ಸರಿಗಮ- ಉಲ್ಟಾ ಸನಿದಪ
ಹಾಡುವುದಕ್ಕೆ ರಾಗ ಕೂಡಿಸುವದೊ
ನೋಡುವುದಕ್ಕೆ ಕಣ್ಣು ಬಿಡುವುದೊ
ಗಡಿಯಾರ ನೋಡಿದ್ದೇ ನೋಡಿದ್ದು
ಊರು ತಲುಪುವುದೆಂದೊ! ಒಂದೇ ಸವನೆ ಚಡಪಡಿಕೆ…
ಅರೇರೆ! ಇದೇನಿದು ಕುಡಿದ ನೀರು ಅಲುಗಾಡದೆ
ಕೂದಲು ಕೊಂಕದೆ, ಸಾವಿರಾರು ಮೈಲು
ಆಕಾಶಹಾದಿ ದಾಟಿ ಬಿ.ಪಿ ಏರಿ ತಲೆಬಿಸಿಯಾಗದೆ
ಸಮಯಕ್ಕೆ ಸರಿಯಾಗಿ ಇಳಿದದ್ದು…..
ಛೇ! ಯಾಕೋ ಒಮ್ಮೊಮ್ಮೆ ಬೇಸರ.
*****
Related Post
ಸಣ್ಣ ಕತೆ
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ನಂಬಿಕೆ
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…