Home / ಕವನ / ಕವಿತೆ / ….ಎಂದಿರಬೇಕಾಗಿತ್ತು

….ಎಂದಿರಬೇಕಾಗಿತ್ತು

ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ
ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು
ಬ್ರೇಕು ಗೇರುಗಳ ಕಿರಿಕಿರಿ ಶಬ್ದ
ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ
ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು
ಹೊರಗೆ ಗಾಲಿ ಬದಲಿಸುವ
ಡ್ರೈವರ್, ಕ್ಲಿನರ್ಸ್ ಜೊತೆಗೊಂದಿಷ್ಟು ಜಗಳದ ಪ್ಯಾಸೆಂಜರ್ಸ್….
ಕೊನೆಯ ಸೀಟಿಗೆ ಅರ್ಜೆಂಟ್ದಲ್ಲಿ ಬಂದ
ಗಾಗಲ್ವಾಲಾನ ಬೂಟ ಸಪ್ಪಳ,
ಬೆಚ್ಚಗೆ ಮಲಗಿದ ಮಗು ತನ್ನಿರುವಿಕೆಯ ಅಳು
ಪಕ್ಕಲ್ಲೇ ಲೋಡೆಡ್ ಟ್ರಕ್ ಧಡಾರನೇ ದಾಟಿ ಹೋದದ್ದು
ಬಸ್ ಅಲುಗಾಟ
ಮತ್ತೆ ಡ್ರೈವರ್ ಸೀಟಿಗೆ ಹಾಜರ್
ಗೇರು ಬ್ರೇಕು ಚೆಕ್ ಮಾಡಬೇಕಾದ ಕೈ
ಟಿ.ವಿ. ಸ್ಟೀರಿಯೋ ಬಟನ್ಗಳ ಮೇಲೆ
ಸರಿಗಮ- ಉಲ್ಟಾ ಸನಿದಪ
ಹಾಡುವುದಕ್ಕೆ ರಾಗ ಕೂಡಿಸುವದೊ
ನೋಡುವುದಕ್ಕೆ ಕಣ್ಣು ಬಿಡುವುದೊ
ಗಡಿಯಾರ ನೋಡಿದ್ದೇ ನೋಡಿದ್ದು
ಊರು ತಲುಪುವುದೆಂದೊ! ಒಂದೇ ಸವನೆ ಚಡಪಡಿಕೆ…
ಅರೇರೆ! ಇದೇನಿದು ಕುಡಿದ ನೀರು ಅಲುಗಾಡದೆ
ಕೂದಲು ಕೊಂಕದೆ, ಸಾವಿರಾರು ಮೈಲು
ಆಕಾಶಹಾದಿ ದಾಟಿ ಬಿ.ಪಿ ಏರಿ ತಲೆಬಿಸಿಯಾಗದೆ
ಸಮಯಕ್ಕೆ ಸರಿಯಾಗಿ ಇಳಿದದ್ದು…..
ಛೇ! ಯಾಕೋ ಒಮ್ಮೊಮ್ಮೆ ಬೇಸರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...