ಅಷ್ಟಗಲ ಬಾಯಿ ತೆರೆದು
ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ
ನಗಬೇಡ ನನೆದುರು ಕುಳಿತು
ಮರೆತು ಹೋದ್ದಲ್ಲ
ಜನಕ್ಕೆ ಅಗೌರವ ತೋರಿಸುತೇನೆ
ಎಂದಲ್ಲ
ಮುಖ್ಯ ಇದಕ್ಕೆ ಬಟನ್ಸೆ ಇಲ್ಲ.
ನೀ ನಗುತೀಯ!
ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ
ಪ್ಯಾಂಟ್ಸು ಹಾಕುತ್ತೇನೆ
ಬಟನ್ಸ್ ಇರಿಸುತ್ತೇನೆ ಎಂದೆಲ್ಲ?
ತಪ್ಪು ಮುತ್ತಜ್ಜ ಆಡಮನದು
ಅಲ್ಲ ಮುತ್ತಜ್ಜಿಯದೊ?
ಬಾ. ಯಾಕೆ ಈ ಮುಖವಾಡ?
ಒಂದಿಷ್ಟು ಬಂಧನರಹಿತರಾಗಿ ಓಡಾಡೋಣ
ಮನ ಬಯಸಿದಲ್ಲಿ, ಬಯಸಿದ ಹಾಗೆ.
ನೋಡುತ್ತೇನೆ ನಿನ್ನ ಸೌಂದರ್ಯ
ಅಷ್ಟು ಜೋಪಾನಿಸಿದ್ದು ಯಾವ ನಿಧಿ?
ಅಷ್ಟು ಕಾಪಾಡಿದ್ದು ಯಾವ ಕಾಮಲತೆ?
ಇಷ್ಟಕ್ಕೆ ಎಷ್ಟಯ್ಯ ಬೆಲೆ?
ಸ್ವಾಮಿ. ಮೀಟರಿಗೆ ನಲವತ್ತು!
ನನಗೆ ನಾನೇ ಕೇಳಿ ಪಡೆದ ಅಕ್ಷಯವಸನ
ಆವರಣ
ಈ ಕೌಪೀನ
ಇದು ಮನ್ವಂತರಗಳ ಮಾನಸಿಕ ದೌರ್ಬಲ್ಯದ ನಿ –
ಶಾನೆ – ನಾನೆ ಹುಟ್ಟಿಸಿಕೊಂಡ ಕೃತಕ ನಾಗರಿ –
ಕತೆಯ ಹಳೆ ಹೊಸ ಏಳುನೂರು ಬಂ –
ಧನದ ಏಕಾಧಿಪತ್ಯದ ಸಾಕ್ಷಿ. ಹಾವು
ಪರೆ ಕಳಚಿದಂತೆ ಒಂದೊಂದೆ ಜಾಡಿಸಿ
ಮಹಾವೀರನಾಗಲೆ?
ದಿಗಂಬರನಾಗಿ ಪರ್ವತದಿಂದ ಹೇಳಲೆ
ಪರ್ವತ ಗೀತೆ?
ಹೇಳಿದರೆ ವಿಷಕುಡಿಸಿ ನನ್ನ ಕೊಂದೀಯ ನೀನೆ!
*****
Related Post
ಸಣ್ಣ ಕತೆ
-
ಬೆಟ್ಟಿ
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…