ಉದ್ದದಾಡಿಯ ಕೆಂಗಣ್ಣಿನ
ಮಂತ್ರವಾದಿ ಇದ್ದಾನೆ
ಹಾಗೆಯೇ, ಅದೆಷ್ಟೊ ವರ್ಷಗಳಿಂದ
ಮುಪ್ಪಿಲ್ಲ ಸಾವಿಲ್ಲ
ಕುಡಿದು ಬಿಟ್ಟಿದ್ದಾನೆ
ದೇವಲೋಕದ ಅಮೃತ
ಏಳು ಸಾಗರದಾಚೆ ಅದೆಲ್ಲಿಯೋ
ಉಸಿರಾಡುತ್ತಿದೆಯಂತೆ ಪ್ರಾಣಪದಕ
ಹುಡುಕಿ ಕೊಲ್ಲಲಾರದೆ, ನರಳಿವೆ
ನರಳುತ್ತಲೇ ಇವೆ ಮೈ ಮನಸ್ಸು
ಹುಡುಕ ಹೊರಟ ಧೀರರ
ಹಾದಿ ಸಾಗುವುದೇ ಇಲ್ಲಾ
ಮಂತ್ರವಾದಿಯ ಪ್ರಾಣ ಪದಕ
ದಕ್ಕುವುದೇ ಇಲ್ಲ
ಹಿಡಿಯೊಳಗೆ ಪ್ರಾಣ
ಉಡಿಯೊಳಗೆ ತ್ರಾಣ
ಕ್ರೂರತೆಯ ಅಟ್ಟಹಾಸ
ಸಾವಿಲ್ಲದ ವಿಕಟಟ್ಟಾಹಾಸ
ಬೆಟ್ಟಗುಡ್ಡ ನೆಲದಲ್ಲೆಲ್ಲ
ಹುಡುಕಾಟವೇ ಹುಡುಕಾಟ
ಸಿಕ್ಕಿದವರಿಗೆಲ್ಲ ವಶೀಕರಣದ ಕಾಟ
ದಕ್ಕುವ ತನಕ ಗಿಳಿ ಮಾಡುವ
ಕಾಯಕ
ಕೆಂಪು ಕೊಕ್ಕಿನ ಮುದ್ದುಗಿಳಿಗೆ
ಪಂಜರವೇ ನಿತ್ಯ
ಕೊನೆಗೆ ಎಲ್ಲವೂ ಅಪಥ್ಯ
ರೆಕ್ಕೆ ಪುಕ್ಕ ಕತ್ತಿರಿಸಿದ ಗಿಳಿ
ಈಗ ಮಂತ್ರವಾದಿಯ ಬಳಿ
ಸಾವಿಲ್ಲದ ಮನೆಯ ಸಾಸುವೆ
ಉಂಟು ಇಲ್ಲಿ
ಸತ್ತರೂ ಸಾಯಲಾರದ
ಜೀವವಿದ್ದರೂ, ಜೀವಂತಿಕೆ ಇಲ್ಲದ
ಸಾವಿರಾರು ಗಿಳಿಗಳ ಹಿಂಡು,
ನರಳುತ್ತಲೇ ಇವೆ ಅಲ್ಲಿ
*****
Related Post
ಸಣ್ಣ ಕತೆ
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಪತ್ರ ಪ್ರೇಮ
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…