ಶ್ರೀರಾಮನ ಜನನ

ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ
ಧರ್ಮಾಭಿಮಾನದಲಿ ಬಾಳಿದನು ನೋಡಾ.
ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ
ಪಾಲಿಸುತ ದೇಶವನು ಆಳಿದನು ಕೇಳಾ.

ರಾಜಾಧಿರಾಜನೂ ಭುವನೈಕ ವಂದ್ಯನೂ
ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು;
ಎಂದೆನಿಸಿ ತ್ರಿಪತ್ನಿಯಿಂದೆಸೆದ ರಾಜನಿಗೆ
ಪುತ್ರಸುಖ ಸಲಿಸದಿಹ ಕೊರತೆಯಿದು ನಿಜವು!

ಪ್ರಾರ್ಥಿಸುತ ಧೀರಸುತ ಮೊರೆಯಿಡುತಲತಿಶಯದಿ
ಪೊಂದಿದನೆ?  ತೊಡಗಿದನು ಪುತ್ರಕಾಮೇಷ್ಠಿ;
ಆಚರಣೆಗೆಂದೆಂದು ಋಷಿವರರ ಕರೆಯಿಸುತ
ದಶರಥನು ಸುರಿಸಿದನು ಬೇಡಿಕೆಯ ವೃಷ್ಠಿ!

ಆನಂದ ಸಂಸಾರ, ಸತ್ಪುತ್ರ ಶುಭಹಾರ-
ದಿಂದೆಸೆವ ಭಾಗ್ಯವದು ಇಲ್ಲದಿರೆ ಏಕೆ,
ರಾಜ್ಯಸಿರಿ ಜನಗಣವು ಲೋಕಾಧಿಕಾರಗಳು?
ಈ ಜಗಕೆ ವ್ಯರ್ಥವದು ಸಂದೇಹವೇಕೆ!

ಪುತ್ರಕಾಮೇಷ್ಠಿಯಿಂ ಪ್ರಸನ್ನನಾದನದೊ
ಸಂತುಷ್ಟನಾದ ಆ ದೇವತೆಯು ಅಗ್ನಿ-
ನಗುಮುಖದೆ ಒಲಿದೊಲಿದು ಹೋಮಾಗ್ನಿಯಿಂ ಹಾಡು
ಹರಿಸಿದನು ರಾಜನನು ತಲೆಯನ್ನು ಮುಟ್ಟಿ!

ಕೊಟ್ಟನದೊ ಪಾಯಸವ ಪ್ರಸಾದ ರೂಪದಲಿ
ಕೊಟ್ಟು ಮರೆಯಾದನಾ ಮಿಂಚಿನಂತಲ್ಲಿಂ;
ಇತ್ತ ನೃಪ ಸತಿಯರಿಗೆ ತ್ರಿಭಾಗವನ್ನೆಸಗಿ
ಮೂವರೊಳು ಹಂಚಿದನು ಬಹುಪ್ರೇಮ ಮುದದಿಂ.

ಹಿರಿರಾಣಿ ಕೌಸಲ್ಯೆ ಹಿರಿದಾಗಿ ಗರ್ಭವನು
ತಳೆದಳಾ ದಿನದಿನಕೆ ಹಿಗ್ಗಿಗ್ಗಿ-ಅಂತೆ!
ಹರಿವಂಶೋದ್ದಾರಕನ ಹಡೆಯುವಾ ಲಕ್ಷಣವ
ಮುದವಾಂತು ಪೊಂದಿದಳು ಶ್ರೀದೇವಿಯಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೮
Next post ಮಾಸ್ತಿಯವರ ಕವಿತೆ

ಸಣ್ಣ ಕತೆ

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…