ಶ್ರೀರಾಮನ ಜನನ

ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ
ಧರ್ಮಾಭಿಮಾನದಲಿ ಬಾಳಿದನು ನೋಡಾ.
ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ
ಪಾಲಿಸುತ ದೇಶವನು ಆಳಿದನು ಕೇಳಾ.

ರಾಜಾಧಿರಾಜನೂ ಭುವನೈಕ ವಂದ್ಯನೂ
ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು;
ಎಂದೆನಿಸಿ ತ್ರಿಪತ್ನಿಯಿಂದೆಸೆದ ರಾಜನಿಗೆ
ಪುತ್ರಸುಖ ಸಲಿಸದಿಹ ಕೊರತೆಯಿದು ನಿಜವು!

ಪ್ರಾರ್ಥಿಸುತ ಧೀರಸುತ ಮೊರೆಯಿಡುತಲತಿಶಯದಿ
ಪೊಂದಿದನೆ?  ತೊಡಗಿದನು ಪುತ್ರಕಾಮೇಷ್ಠಿ;
ಆಚರಣೆಗೆಂದೆಂದು ಋಷಿವರರ ಕರೆಯಿಸುತ
ದಶರಥನು ಸುರಿಸಿದನು ಬೇಡಿಕೆಯ ವೃಷ್ಠಿ!

ಆನಂದ ಸಂಸಾರ, ಸತ್ಪುತ್ರ ಶುಭಹಾರ-
ದಿಂದೆಸೆವ ಭಾಗ್ಯವದು ಇಲ್ಲದಿರೆ ಏಕೆ,
ರಾಜ್ಯಸಿರಿ ಜನಗಣವು ಲೋಕಾಧಿಕಾರಗಳು?
ಈ ಜಗಕೆ ವ್ಯರ್ಥವದು ಸಂದೇಹವೇಕೆ!

ಪುತ್ರಕಾಮೇಷ್ಠಿಯಿಂ ಪ್ರಸನ್ನನಾದನದೊ
ಸಂತುಷ್ಟನಾದ ಆ ದೇವತೆಯು ಅಗ್ನಿ-
ನಗುಮುಖದೆ ಒಲಿದೊಲಿದು ಹೋಮಾಗ್ನಿಯಿಂ ಹಾಡು
ಹರಿಸಿದನು ರಾಜನನು ತಲೆಯನ್ನು ಮುಟ್ಟಿ!

ಕೊಟ್ಟನದೊ ಪಾಯಸವ ಪ್ರಸಾದ ರೂಪದಲಿ
ಕೊಟ್ಟು ಮರೆಯಾದನಾ ಮಿಂಚಿನಂತಲ್ಲಿಂ;
ಇತ್ತ ನೃಪ ಸತಿಯರಿಗೆ ತ್ರಿಭಾಗವನ್ನೆಸಗಿ
ಮೂವರೊಳು ಹಂಚಿದನು ಬಹುಪ್ರೇಮ ಮುದದಿಂ.

ಹಿರಿರಾಣಿ ಕೌಸಲ್ಯೆ ಹಿರಿದಾಗಿ ಗರ್ಭವನು
ತಳೆದಳಾ ದಿನದಿನಕೆ ಹಿಗ್ಗಿಗ್ಗಿ-ಅಂತೆ!
ಹರಿವಂಶೋದ್ದಾರಕನ ಹಡೆಯುವಾ ಲಕ್ಷಣವ
ಮುದವಾಂತು ಪೊಂದಿದಳು ಶ್ರೀದೇವಿಯಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೮
Next post ಮಾಸ್ತಿಯವರ ಕವಿತೆ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys