Home / ಕವನ / ಕವಿತೆ / ಶ್ರೀರಾಮನ ಜನನ

ಶ್ರೀರಾಮನ ಜನನ

ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ
ಧರ್ಮಾಭಿಮಾನದಲಿ ಬಾಳಿದನು ನೋಡಾ.
ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ
ಪಾಲಿಸುತ ದೇಶವನು ಆಳಿದನು ಕೇಳಾ.

ರಾಜಾಧಿರಾಜನೂ ಭುವನೈಕ ವಂದ್ಯನೂ
ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು;
ಎಂದೆನಿಸಿ ತ್ರಿಪತ್ನಿಯಿಂದೆಸೆದ ರಾಜನಿಗೆ
ಪುತ್ರಸುಖ ಸಲಿಸದಿಹ ಕೊರತೆಯಿದು ನಿಜವು!

ಪ್ರಾರ್ಥಿಸುತ ಧೀರಸುತ ಮೊರೆಯಿಡುತಲತಿಶಯದಿ
ಪೊಂದಿದನೆ?  ತೊಡಗಿದನು ಪುತ್ರಕಾಮೇಷ್ಠಿ;
ಆಚರಣೆಗೆಂದೆಂದು ಋಷಿವರರ ಕರೆಯಿಸುತ
ದಶರಥನು ಸುರಿಸಿದನು ಬೇಡಿಕೆಯ ವೃಷ್ಠಿ!

ಆನಂದ ಸಂಸಾರ, ಸತ್ಪುತ್ರ ಶುಭಹಾರ-
ದಿಂದೆಸೆವ ಭಾಗ್ಯವದು ಇಲ್ಲದಿರೆ ಏಕೆ,
ರಾಜ್ಯಸಿರಿ ಜನಗಣವು ಲೋಕಾಧಿಕಾರಗಳು?
ಈ ಜಗಕೆ ವ್ಯರ್ಥವದು ಸಂದೇಹವೇಕೆ!

ಪುತ್ರಕಾಮೇಷ್ಠಿಯಿಂ ಪ್ರಸನ್ನನಾದನದೊ
ಸಂತುಷ್ಟನಾದ ಆ ದೇವತೆಯು ಅಗ್ನಿ-
ನಗುಮುಖದೆ ಒಲಿದೊಲಿದು ಹೋಮಾಗ್ನಿಯಿಂ ಹಾಡು
ಹರಿಸಿದನು ರಾಜನನು ತಲೆಯನ್ನು ಮುಟ್ಟಿ!

ಕೊಟ್ಟನದೊ ಪಾಯಸವ ಪ್ರಸಾದ ರೂಪದಲಿ
ಕೊಟ್ಟು ಮರೆಯಾದನಾ ಮಿಂಚಿನಂತಲ್ಲಿಂ;
ಇತ್ತ ನೃಪ ಸತಿಯರಿಗೆ ತ್ರಿಭಾಗವನ್ನೆಸಗಿ
ಮೂವರೊಳು ಹಂಚಿದನು ಬಹುಪ್ರೇಮ ಮುದದಿಂ.

ಹಿರಿರಾಣಿ ಕೌಸಲ್ಯೆ ಹಿರಿದಾಗಿ ಗರ್ಭವನು
ತಳೆದಳಾ ದಿನದಿನಕೆ ಹಿಗ್ಗಿಗ್ಗಿ-ಅಂತೆ!
ಹರಿವಂಶೋದ್ದಾರಕನ ಹಡೆಯುವಾ ಲಕ್ಷಣವ
ಮುದವಾಂತು ಪೊಂದಿದಳು ಶ್ರೀದೇವಿಯಂತೆ!
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...