ಜೀವನ ಸಮಸ್ಯೆ

ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು
ನೋಡಲಾರೆ,
ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ
ಎಣಿಸಲಾರೆ!
ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ
ದೇಹಸರ್ವ
ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು
ಪೇಳ್ವುದಲ್ಲ!!
ಮಂಜುಗಟ್ಟಿ ನೇತೃದ್ವಯವು ಬೆಂದಮನವ
ಸೂಚಿಸುವುದು,
ಶ್ರಮದ ಸಾರ ಸಾಮ್ಯಗಳನು ಮೂಲೆಗಟ್ಟಿ
ತಿಳಿಯದಿಹರು!
ಕಾಣೆ ನಿಂತ ಎಣೀಸಿದಾಶೆ, ಕಾಣೆ ನಾವೆ
ವಿದಿತಕಾಂಕ್ಷೆ
ನಾವೆ ನಮಗೆ ಮೇಲೆಂದೆನಿಸಿ ಬೇಳುತಿಹೆವು
ದಾಸ್ಯ ಬಲೆಗೆ!
ಅಹೋ ನೊಂದ ಲೋಕಯೆಲ್ಲ ಎಂತೊ ಎಲ್ಲೊ
ಸಾಗುತಿಹುದು
ಆಹಾ ನಾನು ಹನಿಯ ತೆರದಿ ವಿಧಿಯ ತೆರೆಯ-
ಲುಕ್ಕುತಿಹೆನು.
ಬೆಳೆದು ಬಂದೆ ಜನವನರಿತೆ ಕೆಂಪು ಕಪ್ಪಿ
ನಷ್ಟು ಭೇದ
ಒಂದರಂತೆ ಒಂದು ಇಲ್ಲ, ವೃಕದ ಬಳಿಯ
ಕುರಿಯ ತೆರವೆ!
ಬದುಕಿನೆಣಿಕೆಯಿಂದ ಕ್ರಿಮಿಯು ಸಾಗುತಿಹುದು
ದೇಹಪೊತ್ತು
ಜ್ಞಾನಜ್ಯೋತಿ ಹೊತ್ತುತ್ತಿರುವ ನರನ ರೀತಿ
ಭೀತಿ ಎಂತು?
ಕಂಡುದೆಲ್ಲ ಕಲ್ಲಿನಷ್ಟು ಗಟ್ಟಿಯೆಂದು
ತೋರ್ಪುದಹುದು,
ಎನ್ನ ಇರದ ತೆರವು ಮಾತ್ರ ಹಿಮದ ತೆರದಿ
ಗೋಚರಿಪುದು;
ಭಾವನೆಗಳಾ ಕೂಪದಲ್ಲಿ ಹೊರಳಿ ಹೊರಳೀ
ಎದ್ದುನೋಡೆ,
ನೊಂದ ಮನ, ನಿರಾಶೆ ಜಾಲಮಯವ ನೊಂದೆ
ತೋರುತಿಹುದು.
ಹಣದ ಬರವು ತಣಿಸದೆಮ್ಮ; ಸುಖದ ಸೋಗು
ನಶಿಸದೆಮ್ಮ;
ಆದರೂ ಆನಂದಕ್ಕೊಂದು ದಿವ್ಯ ರತ್ನ
ತೃಪ್ತಿಬೇಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೭
Next post ಅನ್ನದ್ ತಪ್ಲೆ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…