Home / ಕವನ / ಕವಿತೆ / ಜೀವನ ಸಮಸ್ಯೆ

ಜೀವನ ಸಮಸ್ಯೆ

ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು
ನೋಡಲಾರೆ,
ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ
ಎಣಿಸಲಾರೆ!
ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ
ದೇಹಸರ್ವ
ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು
ಪೇಳ್ವುದಲ್ಲ!!
ಮಂಜುಗಟ್ಟಿ ನೇತೃದ್ವಯವು ಬೆಂದಮನವ
ಸೂಚಿಸುವುದು,
ಶ್ರಮದ ಸಾರ ಸಾಮ್ಯಗಳನು ಮೂಲೆಗಟ್ಟಿ
ತಿಳಿಯದಿಹರು!
ಕಾಣೆ ನಿಂತ ಎಣೀಸಿದಾಶೆ, ಕಾಣೆ ನಾವೆ
ವಿದಿತಕಾಂಕ್ಷೆ
ನಾವೆ ನಮಗೆ ಮೇಲೆಂದೆನಿಸಿ ಬೇಳುತಿಹೆವು
ದಾಸ್ಯ ಬಲೆಗೆ!
ಅಹೋ ನೊಂದ ಲೋಕಯೆಲ್ಲ ಎಂತೊ ಎಲ್ಲೊ
ಸಾಗುತಿಹುದು
ಆಹಾ ನಾನು ಹನಿಯ ತೆರದಿ ವಿಧಿಯ ತೆರೆಯ-
ಲುಕ್ಕುತಿಹೆನು.
ಬೆಳೆದು ಬಂದೆ ಜನವನರಿತೆ ಕೆಂಪು ಕಪ್ಪಿ
ನಷ್ಟು ಭೇದ
ಒಂದರಂತೆ ಒಂದು ಇಲ್ಲ, ವೃಕದ ಬಳಿಯ
ಕುರಿಯ ತೆರವೆ!
ಬದುಕಿನೆಣಿಕೆಯಿಂದ ಕ್ರಿಮಿಯು ಸಾಗುತಿಹುದು
ದೇಹಪೊತ್ತು
ಜ್ಞಾನಜ್ಯೋತಿ ಹೊತ್ತುತ್ತಿರುವ ನರನ ರೀತಿ
ಭೀತಿ ಎಂತು?
ಕಂಡುದೆಲ್ಲ ಕಲ್ಲಿನಷ್ಟು ಗಟ್ಟಿಯೆಂದು
ತೋರ್ಪುದಹುದು,
ಎನ್ನ ಇರದ ತೆರವು ಮಾತ್ರ ಹಿಮದ ತೆರದಿ
ಗೋಚರಿಪುದು;
ಭಾವನೆಗಳಾ ಕೂಪದಲ್ಲಿ ಹೊರಳಿ ಹೊರಳೀ
ಎದ್ದುನೋಡೆ,
ನೊಂದ ಮನ, ನಿರಾಶೆ ಜಾಲಮಯವ ನೊಂದೆ
ತೋರುತಿಹುದು.
ಹಣದ ಬರವು ತಣಿಸದೆಮ್ಮ; ಸುಖದ ಸೋಗು
ನಶಿಸದೆಮ್ಮ;
ಆದರೂ ಆನಂದಕ್ಕೊಂದು ದಿವ್ಯ ರತ್ನ
ತೃಪ್ತಿಬೇಕು!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...