Home / ಕವನ / ಕವಿತೆ / ಜೀವನ ಸಮಸ್ಯೆ

ಜೀವನ ಸಮಸ್ಯೆ

ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು
ನೋಡಲಾರೆ,
ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ
ಎಣಿಸಲಾರೆ!
ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ
ದೇಹಸರ್ವ
ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು
ಪೇಳ್ವುದಲ್ಲ!!
ಮಂಜುಗಟ್ಟಿ ನೇತೃದ್ವಯವು ಬೆಂದಮನವ
ಸೂಚಿಸುವುದು,
ಶ್ರಮದ ಸಾರ ಸಾಮ್ಯಗಳನು ಮೂಲೆಗಟ್ಟಿ
ತಿಳಿಯದಿಹರು!
ಕಾಣೆ ನಿಂತ ಎಣೀಸಿದಾಶೆ, ಕಾಣೆ ನಾವೆ
ವಿದಿತಕಾಂಕ್ಷೆ
ನಾವೆ ನಮಗೆ ಮೇಲೆಂದೆನಿಸಿ ಬೇಳುತಿಹೆವು
ದಾಸ್ಯ ಬಲೆಗೆ!
ಅಹೋ ನೊಂದ ಲೋಕಯೆಲ್ಲ ಎಂತೊ ಎಲ್ಲೊ
ಸಾಗುತಿಹುದು
ಆಹಾ ನಾನು ಹನಿಯ ತೆರದಿ ವಿಧಿಯ ತೆರೆಯ-
ಲುಕ್ಕುತಿಹೆನು.
ಬೆಳೆದು ಬಂದೆ ಜನವನರಿತೆ ಕೆಂಪು ಕಪ್ಪಿ
ನಷ್ಟು ಭೇದ
ಒಂದರಂತೆ ಒಂದು ಇಲ್ಲ, ವೃಕದ ಬಳಿಯ
ಕುರಿಯ ತೆರವೆ!
ಬದುಕಿನೆಣಿಕೆಯಿಂದ ಕ್ರಿಮಿಯು ಸಾಗುತಿಹುದು
ದೇಹಪೊತ್ತು
ಜ್ಞಾನಜ್ಯೋತಿ ಹೊತ್ತುತ್ತಿರುವ ನರನ ರೀತಿ
ಭೀತಿ ಎಂತು?
ಕಂಡುದೆಲ್ಲ ಕಲ್ಲಿನಷ್ಟು ಗಟ್ಟಿಯೆಂದು
ತೋರ್ಪುದಹುದು,
ಎನ್ನ ಇರದ ತೆರವು ಮಾತ್ರ ಹಿಮದ ತೆರದಿ
ಗೋಚರಿಪುದು;
ಭಾವನೆಗಳಾ ಕೂಪದಲ್ಲಿ ಹೊರಳಿ ಹೊರಳೀ
ಎದ್ದುನೋಡೆ,
ನೊಂದ ಮನ, ನಿರಾಶೆ ಜಾಲಮಯವ ನೊಂದೆ
ತೋರುತಿಹುದು.
ಹಣದ ಬರವು ತಣಿಸದೆಮ್ಮ; ಸುಖದ ಸೋಗು
ನಶಿಸದೆಮ್ಮ;
ಆದರೂ ಆನಂದಕ್ಕೊಂದು ದಿವ್ಯ ರತ್ನ
ತೃಪ್ತಿಬೇಕು!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ