ಮಂಡೂಕ ಪುರಾಣ

ಅಷ್ಟಾವಕ್ರ ರೂಪ
ಯಾರೋ ಇತ್ತ ಶಾಪ
ತನ್ನಿರುವಿಕೆಗೆ ಮಳೆರಾಯನ
ಸಾಕ್ಷಿಗೆ ಕರೆಕರೆದು
ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ
ಗಂಟಲೇ ಬರಿದು!
ಎದೆಯಾಳದ ಮಾತು
ಹೇಗೆ ಹೇಳುವುದು?

ಆದರೂ ಯಾರಿಗೇನು ಕಡಿಮೆ?
ಅಲ್ಪವೇ? ಉಭಯಚರವೆಂಬ ಹಿರಿಮೆ?

ಭೂಮಿಯಲೇ ಇದ್ದರೂ
ನೀರಿಗೇ ಬಿದ್ದರೂ
ಬದುಕಬಲ್ಲವು
ಎಲ್ಲೋ ಹೇಗೋ ಬದುಕುವುದಬಲ್ಲವು!
ಬದುಕುವುದಷ್ಟೇ ಅಲ್ಲ
ಸೃಷ್ಟಿಸಿಲ್ಲವೇ ಅಸಂಖ್ಯಾತ
ಗೊದಮೊಟ್ಟೆಗಳ ಜಾಲ?
ಇದ್ದರೇನಾಯ್ತೀಗ ಅವಕ್ಕೆ ಬಾಲ?

ತೆಪ್ಪಗೆ ಕೂತರಲ್ಲವೇ
ತೂಗುವುದು ತಕ್ಕಡಿ?
ಅಂಗಿಯೊಳಗೆ ಹುಳಬಿಟ್ಟವರಂತೆ
ಅತ್ತಿತ್ತ ಕುಪ್ಪಳಿಸಿಯಾಡುವುದೇ
ಬೆಪ್ಪುತಕ್ಕಡಿ!
ಡಿಸೆಕ್ಷನ್ ಟೇಬಲಿನ ಮೇಲೆ
ಬಲಿಪಶುವಿನಂತೆ
ಚರ್ಮ ಸುಲಿದು

ಉದರ ಸೀಳಿ
ನಡೆದಿದೆ ಅಮಾನುಷ ಕೊಲೆ
ಯಾವಾಗಲೋ ಎಗರಿ ಬಿದ್ದಿದೆ ತಲೆ!
ಆಮೇಲೆ?
ತಲೆಯೇ ಇಲ್ಲದವರು
ತಲೆಗಳ ಸಾಮ್ರಾಜ್ಯದಲ್ಲಿ
ಹೇಗೆ ಬದುಕುವರು?

ಸೋಡ ಕನ್ನಡಕದ
ಪಡ್ಡೆ ವಿಜ್ಞಾನಿಗೆ
ಅದರ ತಲೆ ಬೇಕಿಲ್ಲವಂತೆ
ಸದಾ ದೇಹದ್ದೆ ಚಿಂತೆ!
(ನಿಜ ಬದುಕಲು ತಲೆ ಬೇಕೆ?)
ಬೆಲೆಯಿಲ್ಲದಿದ್ದರೆ ಹೋಯ್ತು
ತಲೆ ಇಲ್ಲದಿದ್ದರೆ ಹೋಯ್ತು
ಜೀವಿಯಲ್ಲವೇ?
ಜೀವವಿದ್ದರೆ ಸಾಲದೆ?
ಲೆಕ್ಕಕ್ಕಲ್ಲಾ.
ಆಟಕ್ಕಾದರೂ….!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೆರಡು ಕಿವಿ
Next post ಮಾತು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…