ಮಂಡೂಕ ಪುರಾಣ

ಅಷ್ಟಾವಕ್ರ ರೂಪ
ಯಾರೋ ಇತ್ತ ಶಾಪ
ತನ್ನಿರುವಿಕೆಗೆ ಮಳೆರಾಯನ
ಸಾಕ್ಷಿಗೆ ಕರೆಕರೆದು
ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ
ಗಂಟಲೇ ಬರಿದು!
ಎದೆಯಾಳದ ಮಾತು
ಹೇಗೆ ಹೇಳುವುದು?

ಆದರೂ ಯಾರಿಗೇನು ಕಡಿಮೆ?
ಅಲ್ಪವೇ? ಉಭಯಚರವೆಂಬ ಹಿರಿಮೆ?

ಭೂಮಿಯಲೇ ಇದ್ದರೂ
ನೀರಿಗೇ ಬಿದ್ದರೂ
ಬದುಕಬಲ್ಲವು
ಎಲ್ಲೋ ಹೇಗೋ ಬದುಕುವುದಬಲ್ಲವು!
ಬದುಕುವುದಷ್ಟೇ ಅಲ್ಲ
ಸೃಷ್ಟಿಸಿಲ್ಲವೇ ಅಸಂಖ್ಯಾತ
ಗೊದಮೊಟ್ಟೆಗಳ ಜಾಲ?
ಇದ್ದರೇನಾಯ್ತೀಗ ಅವಕ್ಕೆ ಬಾಲ?

ತೆಪ್ಪಗೆ ಕೂತರಲ್ಲವೇ
ತೂಗುವುದು ತಕ್ಕಡಿ?
ಅಂಗಿಯೊಳಗೆ ಹುಳಬಿಟ್ಟವರಂತೆ
ಅತ್ತಿತ್ತ ಕುಪ್ಪಳಿಸಿಯಾಡುವುದೇ
ಬೆಪ್ಪುತಕ್ಕಡಿ!
ಡಿಸೆಕ್ಷನ್ ಟೇಬಲಿನ ಮೇಲೆ
ಬಲಿಪಶುವಿನಂತೆ
ಚರ್ಮ ಸುಲಿದು

ಉದರ ಸೀಳಿ
ನಡೆದಿದೆ ಅಮಾನುಷ ಕೊಲೆ
ಯಾವಾಗಲೋ ಎಗರಿ ಬಿದ್ದಿದೆ ತಲೆ!
ಆಮೇಲೆ?
ತಲೆಯೇ ಇಲ್ಲದವರು
ತಲೆಗಳ ಸಾಮ್ರಾಜ್ಯದಲ್ಲಿ
ಹೇಗೆ ಬದುಕುವರು?

ಸೋಡ ಕನ್ನಡಕದ
ಪಡ್ಡೆ ವಿಜ್ಞಾನಿಗೆ
ಅದರ ತಲೆ ಬೇಕಿಲ್ಲವಂತೆ
ಸದಾ ದೇಹದ್ದೆ ಚಿಂತೆ!
(ನಿಜ ಬದುಕಲು ತಲೆ ಬೇಕೆ?)
ಬೆಲೆಯಿಲ್ಲದಿದ್ದರೆ ಹೋಯ್ತು
ತಲೆ ಇಲ್ಲದಿದ್ದರೆ ಹೋಯ್ತು
ಜೀವಿಯಲ್ಲವೇ?
ಜೀವವಿದ್ದರೆ ಸಾಲದೆ?
ಲೆಕ್ಕಕ್ಕಲ್ಲಾ.
ಆಟಕ್ಕಾದರೂ….!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೆರಡು ಕಿವಿ
Next post ಮಾತು

ಸಣ್ಣ ಕತೆ

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…