ಮಂಡೂಕ ಪುರಾಣ

ಅಷ್ಟಾವಕ್ರ ರೂಪ
ಯಾರೋ ಇತ್ತ ಶಾಪ
ತನ್ನಿರುವಿಕೆಗೆ ಮಳೆರಾಯನ
ಸಾಕ್ಷಿಗೆ ಕರೆಕರೆದು
ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ
ಗಂಟಲೇ ಬರಿದು!
ಎದೆಯಾಳದ ಮಾತು
ಹೇಗೆ ಹೇಳುವುದು?

ಆದರೂ ಯಾರಿಗೇನು ಕಡಿಮೆ?
ಅಲ್ಪವೇ? ಉಭಯಚರವೆಂಬ ಹಿರಿಮೆ?

ಭೂಮಿಯಲೇ ಇದ್ದರೂ
ನೀರಿಗೇ ಬಿದ್ದರೂ
ಬದುಕಬಲ್ಲವು
ಎಲ್ಲೋ ಹೇಗೋ ಬದುಕುವುದಬಲ್ಲವು!
ಬದುಕುವುದಷ್ಟೇ ಅಲ್ಲ
ಸೃಷ್ಟಿಸಿಲ್ಲವೇ ಅಸಂಖ್ಯಾತ
ಗೊದಮೊಟ್ಟೆಗಳ ಜಾಲ?
ಇದ್ದರೇನಾಯ್ತೀಗ ಅವಕ್ಕೆ ಬಾಲ?

ತೆಪ್ಪಗೆ ಕೂತರಲ್ಲವೇ
ತೂಗುವುದು ತಕ್ಕಡಿ?
ಅಂಗಿಯೊಳಗೆ ಹುಳಬಿಟ್ಟವರಂತೆ
ಅತ್ತಿತ್ತ ಕುಪ್ಪಳಿಸಿಯಾಡುವುದೇ
ಬೆಪ್ಪುತಕ್ಕಡಿ!
ಡಿಸೆಕ್ಷನ್ ಟೇಬಲಿನ ಮೇಲೆ
ಬಲಿಪಶುವಿನಂತೆ
ಚರ್ಮ ಸುಲಿದು

ಉದರ ಸೀಳಿ
ನಡೆದಿದೆ ಅಮಾನುಷ ಕೊಲೆ
ಯಾವಾಗಲೋ ಎಗರಿ ಬಿದ್ದಿದೆ ತಲೆ!
ಆಮೇಲೆ?
ತಲೆಯೇ ಇಲ್ಲದವರು
ತಲೆಗಳ ಸಾಮ್ರಾಜ್ಯದಲ್ಲಿ
ಹೇಗೆ ಬದುಕುವರು?

ಸೋಡ ಕನ್ನಡಕದ
ಪಡ್ಡೆ ವಿಜ್ಞಾನಿಗೆ
ಅದರ ತಲೆ ಬೇಕಿಲ್ಲವಂತೆ
ಸದಾ ದೇಹದ್ದೆ ಚಿಂತೆ!
(ನಿಜ ಬದುಕಲು ತಲೆ ಬೇಕೆ?)
ಬೆಲೆಯಿಲ್ಲದಿದ್ದರೆ ಹೋಯ್ತು
ತಲೆ ಇಲ್ಲದಿದ್ದರೆ ಹೋಯ್ತು
ಜೀವಿಯಲ್ಲವೇ?
ಜೀವವಿದ್ದರೆ ಸಾಲದೆ?
ಲೆಕ್ಕಕ್ಕಲ್ಲಾ.
ಆಟಕ್ಕಾದರೂ….!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೆರಡು ಕಿವಿ
Next post ಮಾತು

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…