Home / ಕವನ / ಕವಿತೆ / ಮಂಡೂಕ ಪುರಾಣ

ಮಂಡೂಕ ಪುರಾಣ

ಅಷ್ಟಾವಕ್ರ ರೂಪ
ಯಾರೋ ಇತ್ತ ಶಾಪ
ತನ್ನಿರುವಿಕೆಗೆ ಮಳೆರಾಯನ
ಸಾಕ್ಷಿಗೆ ಕರೆಕರೆದು
ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ
ಗಂಟಲೇ ಬರಿದು!
ಎದೆಯಾಳದ ಮಾತು
ಹೇಗೆ ಹೇಳುವುದು?

ಆದರೂ ಯಾರಿಗೇನು ಕಡಿಮೆ?
ಅಲ್ಪವೇ? ಉಭಯಚರವೆಂಬ ಹಿರಿಮೆ?

ಭೂಮಿಯಲೇ ಇದ್ದರೂ
ನೀರಿಗೇ ಬಿದ್ದರೂ
ಬದುಕಬಲ್ಲವು
ಎಲ್ಲೋ ಹೇಗೋ ಬದುಕುವುದಬಲ್ಲವು!
ಬದುಕುವುದಷ್ಟೇ ಅಲ್ಲ
ಸೃಷ್ಟಿಸಿಲ್ಲವೇ ಅಸಂಖ್ಯಾತ
ಗೊದಮೊಟ್ಟೆಗಳ ಜಾಲ?
ಇದ್ದರೇನಾಯ್ತೀಗ ಅವಕ್ಕೆ ಬಾಲ?

ತೆಪ್ಪಗೆ ಕೂತರಲ್ಲವೇ
ತೂಗುವುದು ತಕ್ಕಡಿ?
ಅಂಗಿಯೊಳಗೆ ಹುಳಬಿಟ್ಟವರಂತೆ
ಅತ್ತಿತ್ತ ಕುಪ್ಪಳಿಸಿಯಾಡುವುದೇ
ಬೆಪ್ಪುತಕ್ಕಡಿ!
ಡಿಸೆಕ್ಷನ್ ಟೇಬಲಿನ ಮೇಲೆ
ಬಲಿಪಶುವಿನಂತೆ
ಚರ್ಮ ಸುಲಿದು

ಉದರ ಸೀಳಿ
ನಡೆದಿದೆ ಅಮಾನುಷ ಕೊಲೆ
ಯಾವಾಗಲೋ ಎಗರಿ ಬಿದ್ದಿದೆ ತಲೆ!
ಆಮೇಲೆ?
ತಲೆಯೇ ಇಲ್ಲದವರು
ತಲೆಗಳ ಸಾಮ್ರಾಜ್ಯದಲ್ಲಿ
ಹೇಗೆ ಬದುಕುವರು?

ಸೋಡ ಕನ್ನಡಕದ
ಪಡ್ಡೆ ವಿಜ್ಞಾನಿಗೆ
ಅದರ ತಲೆ ಬೇಕಿಲ್ಲವಂತೆ
ಸದಾ ದೇಹದ್ದೆ ಚಿಂತೆ!
(ನಿಜ ಬದುಕಲು ತಲೆ ಬೇಕೆ?)
ಬೆಲೆಯಿಲ್ಲದಿದ್ದರೆ ಹೋಯ್ತು
ತಲೆ ಇಲ್ಲದಿದ್ದರೆ ಹೋಯ್ತು
ಜೀವಿಯಲ್ಲವೇ?
ಜೀವವಿದ್ದರೆ ಸಾಲದೆ?
ಲೆಕ್ಕಕ್ಕಲ್ಲಾ.
ಆಟಕ್ಕಾದರೂ….!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...