ನೀ ಬರಿಯ ನೀರಲ್ಲ!

ಹೇ ತಾಯಿ,
ನೀ ಬರಿಯ ನೀರಲ್ಲ
ನೀರೆಂಬ ಮಾಯೆ!
ಹನಿಹನಿಯ
ಬೊಗಸೆ ಬೊಗಸೆ
ಹೀರಿದರೂ ಹಿಂಗಿತೇ ದಾಹ?
ಮತ್ತೆ ಮತ್ತೆ ಬೇಕೆನಿಸುವ
ತೀರದಾ ಮೋಹ!

ಬರಿಯ ನೀರೆಂದು
ಬೋಗುಣಿಯಲಿ ತುಂಬಿಸಿಡುವಾಗ
ಥಟ್ಟನೆ ಘನೀಬವಿಸಿ
ಮಂಜುಗಡ್ಡಯಾಗಿಬಿಡುವ
ಮಾಯೆಯ ಚಮತ್ಕಾರ!

ವಿವಿಧ ರೂಪದಲಿ, ಆಕಾರದಲಿ
ನಿನ್ನ ಭವ್ಯಚಿತ್ರ
ಸನ್ನಿವೇಶಕೆ ತಕ್ಕಂತೆ
ವೇಷ ಬದಲಿಸುವ ಪಾತ್ರ!

ಕಡಲೆಂದು ಕೈಮುಗಿವ ಗಳಿಗೆ
ನದಿಗಳೆಲ್ಲವ ನುಂಗಿ
ಅಟ್ಟಹಾಸದಿ ಧುಮ್ಮಿಕ್ಕಿ ಬೋರ್ಗರೆದು
ದಂಡೆಗಪ್ಪಳಿಸಿ ಮೆರೆವ
ರುದ್ರತಾಂಡವ
ಬಿಸಿಯೇರಿ ಆವಿಯಾಗುತ
ರೂಪ ಬದಲಿಸುವ ಸೋಜಿಗಕೆ
ಸೃಷ್ಟಿಯೇ ಬೆರಗು
ನಿನ್ನೆದುರಿಗೆ ನಾನೊಂದು ಮಗು!

ಎಲ್ಲ ಎಲ್ಲವೂ ನೀನೇ ಮಾಯಿ
ಎಲ್ಲವೂ ನಿನ್ನಿಂದಲೇ ತಾಯಿ

ಹಾಲೂ ನೀನೇ
ಹಾಲಾಹಲವೂ ನೀನೇ!

ನಿನ್ನಿಂದಲೇ
ಸೃಷ್ಟಿ, ಸ್ಥಿತಿ, ಲಯ!
ನೀನೇ ಜೀವನಾಧಾರ
ನೀನೇ ಮಹಾಪ್ರಳಯ!

ಹೇ ತಾಯೆ
ನೀ ಬರಿಯ ನೀರಲ್ಲ
ನೀರೆಂಬ ಮಾಯೆ
ನನ್ನ ಮಿತಿಗಳಲಿ
ನಿನ್ನ ಕಲ್ಪಿಸುತ
ತುಂಬಿಸಿಡುವ ನನ್ನ
ಹುಂಬತನವ
ಅನವರತ ಮನ್ನಿಸಿ ಕಾಯೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಕೇರಿಯ ಸುಬ್ಬ
Next post ಪಂದ್ಯ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys