ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ ||ಪ||

ನಾ ನಿನ್ನ ಮಗನು ಅಹುದೆನ್ನುವ ಮಾತಿದು
ಎನ್ನ ಗುರುವಿನುಪದೇಶ ವಚನದಿಂ
ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ
ಕುನ್ನಿ ಜನರ ಹಂಗಿನ್ನಾಯತಕ ಭಯ ಚೆನ್ನ ಶ್ರೀಗುರುವೆ ||೧||

ತಾಯಿ ತಂದೆಗಳ ಇಂದ್ರಿ ವಿಕಾರದಿ
ಕಾಯ ಜನಿಸಿ ಅದರೋಳ್ ಮನಮೋಹಿಸಿ
ನೋವು ಬ್ಯಾನಿಯಿಂದಾಯಾಸಪಡುತಿರೆ
ಸಾವಿಗಂಜಿ ಬಾಯಾರಿ ಬಳಲುತಿರೆ
ಜೀವದ ಪರವಿಯ ಬಿಟ್ಟಾಚರಿಸುವೆ ನೀ ರಕ್ಷಿಸು ಮಹಾದೇವ ದಯಾನಿಧೆ ||೨||

ಸಾರಲೇನು ಸಂಸಾರ ವಿಷಯ ಸುಖ
ಮೂರು ದೇಹದೊಳು ಹೇರಿ ಕಳುಹಿದ ಜೀವದ್ಯಾವಾರ
ಮರತು ವರಪಾರಮಾರ್ಥಲೊಳು ನಾ ಬ್ಯಾರಿರುತಿರೆ
ಧಾರುಣಿಯೊಳು ಶಿಶುನಾಳಧೀಶನ
ಆಧಾರ ಹಿಡಿದು ಆನಂದವಾದೆ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಹಿ ಪರಮದಯಾಳು ಕೃಪಾಕರ
Next post ಕರುಣ ಬಾರದೇನೋ ಸದಾಶಿವ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…