Home / ಕವನ / ಕವಿತೆ / ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ
ತ್ರಾಹಿ ಎನುತ ಪಾದಕೆರಗಿದ ಜನರಿಗೆ
ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ
ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ ||ಪ||

ಶೂರ ಪರಮ ಗಂಭೀರ ಅತಿ ಸುಂದರ ಮಾರುತಿ
ಶೌರ್ಯ ವಿಚಾರ ಪರಾಕ್ರಮ ಕಾರುಣ್ಯ ಕಪಿವರ ಮಾತುತಿ
ಬಾರಿ ಬಾರಿಗೂ ನುತಿಪ ಭಕುತರ ಮಾರುತಿ
ವಜ್ರ ಶರೀರ ನಿರಾಮಯ ವೀರ ನರನ ಧ್ವಜ ಸಾರಥಿ
ಮೀರಿದ ಉಗ್ರ ಅವತಾರದಿ ಪೂರ್ಣ
ವಾರಿಧಿಯೊಳು ಘನ ಸಾರವ ನಿರ್ಮಿಸಿ
ಧರಣಿಯಾತ್ಮಜ ಇದ್ದ ವನವನು ಸೇರುತ
ಹಾರಿ ಮುದ್ರಿಕೆಯ ತೋರಿದ ಮಾರುತಿ ||೧||

ಕುಸುಮಶರಪಿತನುಸುರಿದ ನುಡಿಯನು ಲಾಲಿಸಿ
ಮುಸುಕಿದ ಅಸುರರ ಪಡೆಯನಾವರಿಸಿ ಬಲವನು ತೋರಿಸಿ
ಅಸಮನು ಶಕ್ತಿಲೆ ಕುಂಭಕರ್ಣನನು ಸೋಲಿಸಿ ಲಂಕಾದೇಶಗೆಡಿಸಿದಿ
ವಾಲಾಗ್ರದ ಕೊನೆಯ ಜ್ವಲನದಿ ದಶಶಿರನಾಥನ ಮರ್ದಿಸಿ
ವಸುಧೆಯಾಳು ಹೊಸಪಟ್ಟ ವಿಭೀಷಣ ಶರಣಿಗೆ ನೀ-
ನತಿಶಯದಲಿ ಪಾಲಿಸಿದಿ ಪರಾತ್ಪರ ಹಸುಳನಾಗಿ ಹರಿಚರಣಕೆರಗಿದಿ ||೨||

ಮಂದಹಾಸ ಆನಂದಯೋಗ ದುರಂಧತಾ ಕರುಣಿಸು ಇಂದು
ಮುನೀಂದ್ರ ಮೌನವ್ರತ ಮಂತ್ರದಲಿ ಬಂಧುರ
ಇಂದ್ರಜಿತುಹರ ಚಂದ್ರರೂಪದಲಿ ಚಂದಿರಾ
ಅಂಜನಿ ಕಂದಾ ಮಣಿಯಮುಕುಟದಿ ಶೋಭಿಸುವ ಸುಂದರಾ
ಇಂದು ನಿಮ್ಮಯ ಪಾದಾರವಿಂದಗಳಿಗೆ ಕರ-
ಹೊಂದಿಸೆನ್ನ ಮನಮಂದಿರದೊಳು ಮುದದಿಂದ ಪೇಳೆ
ಗೋವಿಂದರಾಜ ಗುರುವಿಂದ ಪಡೆದ ಉಪದೇಶ ಬಲದಿ ನುತಿಪೆ ||೩||
* * * *

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...