ರಾಮ ರಾವೇಣ ಹರಿ

ರಾಮ ರಾವೇಣ ಹರಿ
ರಾಜಿತ ಪರಾತ್ಪರವಾದ ನಾಮದೊರಿ
ರಾಮ ರಾವೇಣ ಹರಿ                            ||ಪ||

ವಾಮ ಭಾಗದಿ ಶಿತಭವಾನಿ
ಪ್ರೇಮ ಸದ್ಗುರು ಮಲ್ಲಿಕಾರ್ಜುನ
ಕಾಮಿತಾರ್ಥ ಫಲದಾಯಕ
ರಾಮ ರಾವೇಣ ಹರಿ                            ||ಅ.ಪ.||

ಕಮಲದಿ ಕಾತ್ಯಾಯಿನಿ
ಕಾಮಿತಫಲ ಕರುಣ ಕೃಪಾಳು ನೀ
ಸಮರಮುಖದಲಿ ಗೆಲಿದು ಶುಂಭ
ನಿಶುಂಭ ಈರ್ವರನು ಸವರಿ ಶಾಶ್ವತ
ಕಾಂಬುಕಂದರಿ ಎನಿಸಿ ಲೋಕದಿ
ತುಂಬಿಕೊಂಡಿದೆ ತರುಣಿಮಣಿಯಳೆ
ರಾಮ ರಾವೇಣ ಹರಿ                            ||೧||

ಅಸಮ ಸುಗಂಧಿಯಳೆ
ಶಿಶುವಿನಾಳ ವಸುಧಿಗೆ ಬಂದಿಹಳೆ
ಹಸನವಾಹಿಹ ಪಾದಕಮಲಕೆ
ಬೆಸನ ಬೇಡುವೆ ಭವದುರಾತ್ಮಳೆ
ನಿಶಿಕಿರಣ ನಿಜಾನಂದ ಮೂರುತಿ
ಉಸುರುವೆನು ಆನಂದದಲಿ ಸದಾ
ರಾಮ ರಾವೇಣ ಹರಿ                            ||೨||
*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನುಮಂತ ಹಾರಿದ ಲಂಕಾ
Next post ಪಾಹಿ ಪರಮದಯಾಳು ಕೃಪಾಕರ

ಸಣ್ಣ ಕತೆ

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…