ಕರುಣ ಬಾರದೇನೋ ಸದಾಶಿವ

ಕರುಣ ಬಾರದೇನೋ ಸದಾಶಿವ
ಕರುಣ ಬಾರದೇನೋ                                        ||ಪ||

ಧರಣಿ ಜನರು ಈ ಪರಿ ಮರಗುದ ಕಂಡು                                ||ಅ||

ಹುಟ್ಟಿಸಿದೆಲ್ಲೋ ಭೂಮಿ ಈ ಲೋಕವ
ಕಟ್ಟಿ ಆಳುವ ಸ್ವಾಮಿ
ಕೆಟ್ಟ ಕರ್ಮದ ಕೊಲಿ
ಸುಟ್ಟು ಕೈಲಾಸದಿ
ಪಟ್ಟನಾಳು ಪರಮಾತ್ಮ ಪ್ರಭುವರ                                ||೧||

ಕಿಡಿಗಣ್ಣಿಲೆ ನೋಡಿದ್ಯಾ ಈ ದಕ್ಷಿಣ
ಕಡೆ ಬಾಗಿಲ ಕಾಯ್ದ್ಯಾ
ಬಿಡದೆ ಪೊಡವಿ ಸ್ಥಳಕೆ ಈ ಬರ ಹುಟ್ಟಿಸಿ
ಕಡು ಹರುಷದಿ
ಸುಡುಗಾಡ ಸೇರಿದ್ಯಾ ಸಾಂಬಾ                                ||೨||

ತುಸು ದಯವಿರಬೇಕೋ ಈ ಮನುಜರ
ಹಸನಾಗಿ ಸಲಹುದಕೋ
ವಸುಧಿಯೊಳು ಶಿಶುನಾಳ
ಪಶುಪತಿ ಸೇವಕ
ಉಸುರಿದ ನುಡಿಗೆ ನಸುನಗೆಯಿಂದಲಿ                                ||೩||
*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ನಿನ್ನ ಮಗ ನಗಗೇಡು ಮಾಡಬ್ಯಾಡ
Next post ನಂಬಿದೆ ನಾ ನಿನ್ನ ಶಂಭೋ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…