ಕರುಣ ಬಾರದೇನೋ ಸದಾಶಿವ

ಕರುಣ ಬಾರದೇನೋ ಸದಾಶಿವ
ಕರುಣ ಬಾರದೇನೋ                                        ||ಪ||

ಧರಣಿ ಜನರು ಈ ಪರಿ ಮರಗುದ ಕಂಡು                                ||ಅ||

ಹುಟ್ಟಿಸಿದೆಲ್ಲೋ ಭೂಮಿ ಈ ಲೋಕವ
ಕಟ್ಟಿ ಆಳುವ ಸ್ವಾಮಿ
ಕೆಟ್ಟ ಕರ್ಮದ ಕೊಲಿ
ಸುಟ್ಟು ಕೈಲಾಸದಿ
ಪಟ್ಟನಾಳು ಪರಮಾತ್ಮ ಪ್ರಭುವರ                                ||೧||

ಕಿಡಿಗಣ್ಣಿಲೆ ನೋಡಿದ್ಯಾ ಈ ದಕ್ಷಿಣ
ಕಡೆ ಬಾಗಿಲ ಕಾಯ್ದ್ಯಾ
ಬಿಡದೆ ಪೊಡವಿ ಸ್ಥಳಕೆ ಈ ಬರ ಹುಟ್ಟಿಸಿ
ಕಡು ಹರುಷದಿ
ಸುಡುಗಾಡ ಸೇರಿದ್ಯಾ ಸಾಂಬಾ                                ||೨||

ತುಸು ದಯವಿರಬೇಕೋ ಈ ಮನುಜರ
ಹಸನಾಗಿ ಸಲಹುದಕೋ
ವಸುಧಿಯೊಳು ಶಿಶುನಾಳ
ಪಶುಪತಿ ಸೇವಕ
ಉಸುರಿದ ನುಡಿಗೆ ನಸುನಗೆಯಿಂದಲಿ                                ||೩||
*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ನಿನ್ನ ಮಗ ನಗಗೇಡು ಮಾಡಬ್ಯಾಡ
Next post ನಂಬಿದೆ ನಾ ನಿನ್ನ ಶಂಭೋ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…