ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು
ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ
ತಣಿ ತಣಿದು ಊರ ಹೊಲಗದ್ದೆಗಳ
ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು.

ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ
ಮೋಡಗಳು ಮಳೆ ಬೀಜ ಬಿತ್ತಿವೆ
ಆಷಾಢದ ಸಂಭ್ರಮ ಸಜ್ಜಾಗಿದೆ
ಗಡಿಯಾರದ ಮುಳ್ಳುಗಳು ಹಾಗೆ ಸರಿದುಹೋಗುತ್ತದೆ.

ರಸ್ತೆಯಲಿ ಜನ ಜಾತ್ರೆ ಹಬ್ಬ ಮದುವೆ
ಮುಂಜಾವಿಗೆ ಹಾಗೆ ಒಟ್ಟೊಟ್ಟಿಗೆ ಸಾಗಿ
ಸಂವತ್ಸರದ ನಡುವೆ ಪ್ರಾರಂಭಿಸಿದಾಗ
ಅನುಭವದ ಕಣ್ಣಿನೊಳಗೆ ಹಸ್ತ ಚಿತ್ತ ಸ್ವಾತಿ ಅರಳಿವೆ.

ಹಾಗೆ ಉಳಿದ ದಾರಿ ತೋಟಗದ್ದೆ
ಪಕ್ಷಿ ಸಂಕುಲ ತಮ್ಮ ಹಾಡು ಹಾಡಿವೆ
ತಾಯಿ ಒಡಲ ತುಂಬ ಶಕ್ತಿ ಹರಿದು
ಹರಸಿವೆ ಬಿಗುಬಿನ್ನಾಣಗಳಿರದೆ ಚಿಮ್ಮಿದೆ ಪ್ರೀತಿ.

ಸಾಲು ಸಾಲು ಹಂತೀ ಕಟ್ಟಿ
ಊರಿದ ಬೀಜಗಳು ಮೊಳೆತು ಚಿಗಿತು
ಒಡಲ ತುಂಬ ಹಸಿರು ನವಿಲು ನಾಟ್ಯ
ಕವಿತೆ ಬದುಕು ಎರಡೂ ಖುಷಿಯಿಂದ ಅರಳಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ವೀಣೆಯು ಮಲಗಿದೆ!
Next post ಸೂರ್ಯ ಕಲಾಕಾರ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…