ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು
ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ
ತಣಿ ತಣಿದು ಊರ ಹೊಲಗದ್ದೆಗಳ
ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು.

ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ
ಮೋಡಗಳು ಮಳೆ ಬೀಜ ಬಿತ್ತಿವೆ
ಆಷಾಢದ ಸಂಭ್ರಮ ಸಜ್ಜಾಗಿದೆ
ಗಡಿಯಾರದ ಮುಳ್ಳುಗಳು ಹಾಗೆ ಸರಿದುಹೋಗುತ್ತದೆ.

ರಸ್ತೆಯಲಿ ಜನ ಜಾತ್ರೆ ಹಬ್ಬ ಮದುವೆ
ಮುಂಜಾವಿಗೆ ಹಾಗೆ ಒಟ್ಟೊಟ್ಟಿಗೆ ಸಾಗಿ
ಸಂವತ್ಸರದ ನಡುವೆ ಪ್ರಾರಂಭಿಸಿದಾಗ
ಅನುಭವದ ಕಣ್ಣಿನೊಳಗೆ ಹಸ್ತ ಚಿತ್ತ ಸ್ವಾತಿ ಅರಳಿವೆ.

ಹಾಗೆ ಉಳಿದ ದಾರಿ ತೋಟಗದ್ದೆ
ಪಕ್ಷಿ ಸಂಕುಲ ತಮ್ಮ ಹಾಡು ಹಾಡಿವೆ
ತಾಯಿ ಒಡಲ ತುಂಬ ಶಕ್ತಿ ಹರಿದು
ಹರಸಿವೆ ಬಿಗುಬಿನ್ನಾಣಗಳಿರದೆ ಚಿಮ್ಮಿದೆ ಪ್ರೀತಿ.

ಸಾಲು ಸಾಲು ಹಂತೀ ಕಟ್ಟಿ
ಊರಿದ ಬೀಜಗಳು ಮೊಳೆತು ಚಿಗಿತು
ಒಡಲ ತುಂಬ ಹಸಿರು ನವಿಲು ನಾಟ್ಯ
ಕವಿತೆ ಬದುಕು ಎರಡೂ ಖುಷಿಯಿಂದ ಅರಳಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ವೀಣೆಯು ಮಲಗಿದೆ!
Next post ಸೂರ್ಯ ಕಲಾಕಾರ

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…