ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು
ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ
ತಣಿ ತಣಿದು ಊರ ಹೊಲಗದ್ದೆಗಳ
ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು.

ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ
ಮೋಡಗಳು ಮಳೆ ಬೀಜ ಬಿತ್ತಿವೆ
ಆಷಾಢದ ಸಂಭ್ರಮ ಸಜ್ಜಾಗಿದೆ
ಗಡಿಯಾರದ ಮುಳ್ಳುಗಳು ಹಾಗೆ ಸರಿದುಹೋಗುತ್ತದೆ.

ರಸ್ತೆಯಲಿ ಜನ ಜಾತ್ರೆ ಹಬ್ಬ ಮದುವೆ
ಮುಂಜಾವಿಗೆ ಹಾಗೆ ಒಟ್ಟೊಟ್ಟಿಗೆ ಸಾಗಿ
ಸಂವತ್ಸರದ ನಡುವೆ ಪ್ರಾರಂಭಿಸಿದಾಗ
ಅನುಭವದ ಕಣ್ಣಿನೊಳಗೆ ಹಸ್ತ ಚಿತ್ತ ಸ್ವಾತಿ ಅರಳಿವೆ.

ಹಾಗೆ ಉಳಿದ ದಾರಿ ತೋಟಗದ್ದೆ
ಪಕ್ಷಿ ಸಂಕುಲ ತಮ್ಮ ಹಾಡು ಹಾಡಿವೆ
ತಾಯಿ ಒಡಲ ತುಂಬ ಶಕ್ತಿ ಹರಿದು
ಹರಸಿವೆ ಬಿಗುಬಿನ್ನಾಣಗಳಿರದೆ ಚಿಮ್ಮಿದೆ ಪ್ರೀತಿ.

ಸಾಲು ಸಾಲು ಹಂತೀ ಕಟ್ಟಿ
ಊರಿದ ಬೀಜಗಳು ಮೊಳೆತು ಚಿಗಿತು
ಒಡಲ ತುಂಬ ಹಸಿರು ನವಿಲು ನಾಟ್ಯ
ಕವಿತೆ ಬದುಕು ಎರಡೂ ಖುಷಿಯಿಂದ ಅರಳಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ವೀಣೆಯು ಮಲಗಿದೆ!
Next post ಸೂರ್ಯ ಕಲಾಕಾರ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys