ಕಳೆದು ಹೋದವನು

ನಾಲ್ಕು
ದಾರಿಗಳು ಸೇರುವ ಇಲ್ಲಿ
ಬಹುದಿನಗಳಿಂದ ಒಬ್ಬ
‘ಮುದುಕ’
ಕೋಲು ಹಿಡಿದು ನಿಂತಿದ್ದಾನೆ

ವೃತ್ತ
ಸುತ್ತಿಕೊಂಡು ಹೋಗುವ
ಜನ
ಯಾರನ್ನೂ ಗಮನಿಸುವುದಿಲ್ಲ
ಅವಸರದಲಿ
ನಡುವೆ ನಿಂತ ಅರೆ ಬೆತ್ತಲೆ
ಫಕೀರನನು
ಅಲ್ಲೇ ಮಲಗಿರುವ
ದನಗಳನೂ…

ಮುರುಕು ಚಾಳೀಸು
ಹರಕು ಪಂಚೆ
ನಿಂತ ಗಡಿಯಾರ
ಕದ್ದೊಯ್ದವರ
ಹಿಡಿದು ತರಲಿ ಎಲ್ಲಿಂದ
ನಡಿಯಲು ಸಾಕ್ಷಿ
ಕಿವಿ ಕಣ್ಣಿರದ ಕಟಕಟೆಗೆ?

ಖಾದಿ ಖದರಿನ
ಟೋಪಿ
ಜನಗಳ ನಡುವೆ
ಕಾಣೆಯಾಗಿರುವ ಮುದುಕ
ಹುಡುಕಿಕೊಡಿ
ನಿಮ್ಮ ಎದೆಯ ಮೂಲೆಯೊಳಗೆ
ಎಲ್ಲಾದರೂ
ಅವಿತುಕೊಂಡಿದ್ದರೆ

ನೆನಪಿರಲಿ
ಅವನ ಕೈಯೊಳಗೊಂದು
ಕೋಲಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟಿದ್ದೇನು ಕುಣಿದಿದ್ದೇನು!
Next post ಅಮ್ಮ ನಿನ್ನ ಕರುಣೆಯ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…