ಊರಮಂದಿ ದೂರವಾಗೋ ಕಾಲ ಬರುತೈತಿ

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ
ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ

ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ
ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ

ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ
ಮರದ ತುಂಬಾ ಗಿಲಕಿ ಸದ್ದು ಗಿಲಕುತಿದ್ವಲ್ವೋಽಽಽ

ಅಂಗಳದಾಗ ಅಕ್ಕಿ ಆಯ್ದು ಹಸನು ಮಾಡ್ತಿದ್ವಲ್ಲೇಽಽಽ
ಕಡ್ಡಿ ಕಾಲಿಗೆ ಗೆಜ್ಜೆ ಕಟ್ಟಿ ತಕ ಥೈ ಕುಣಿಯುತಿದ್ವಲ್ಲೋಽಽಽ

ಗುಡಿಸಲಿಗೆ ಗೂಡು ಕಟ್ಟಿ ಜೋಗುಳ ಹಾಡ್ತಿದ್ವಲ್ಲೇಽಽಽ
ಬಾಯಿ ತುಂಬಾ ಬುತ್ತಿ ತಂದು ಉಣ್ಣಾಕಿಡ್ತಿದ್ವಲ್ಲೋಽಽಽ

ಹಠ ಮಾಡಿ ಅಳುವ ಕಂದ ನಿನ್ನ ನೋಡಿ ನಗ್ತಿದ್ದಲ್ಲೇಽಽಽ
ಆಕಾಡೀಕಡೆ ಗೋಣು ತಿರುಗಿಸಿ ನಿನ್ನಂದಾ ನೋಡ್ತಿದ್ವಲ್ಲೋಽಽಽ

ಜ್ವಾಳದೊಲದಾಗ ಬೆಳಸಿ ತಿಂದು ಜೋಕಾಲಿ ಜೀಕತಿದ್ವಲ್ಲೇಽಽಽ
ಮುಚ್ಚಳದಾಗಿನ ನೀರಿನಾಗ ಮುಳುಮುಳುಗಿ ಏಳತಿದ್ವಲ್ಲೋಽಽಽ

ಹಳ್ಳಿ ಮಂದಿಗೂ ಡಿಳ್ಳಿ ರೋಗ ಹೆಂಗ ಬಡದೈತಲ್ಲೇಽಽಽ
ಮಾತಾಡೋ ‘ಮಷಿನು’ ಮಾಯಾ ಮಾಡ್ಯಾವಂತಲ್ಲೋಽಽಽ

ಈ ಹರಕು ಬಾಯಿಗೆ ದೊಡ್ಡರೋಗ ಬಂದು ಸಾಯಬಾರ್ದೇಽಽಽ
ಗುಬ್ಬಿ ಸೆಟೆದಂಗೆ ಸೆಟೆಯೋ ರೋಗ ಅವ್ರುಗು ಬರಬಾರ್ದೆಽಽಽ

ಕಾಗೆ ಗುಬ್ಬಿ ಇಲ್ಲದಾಂಗ ಹೆಂಗೆ ಬದುಕ್ತಾರೋ ಯಮ್ಮಾಽಽಽ
ಎಂಡ್ರು ಮಕ್ಳು ಅಷ್ಟೇ ಅಂದ್ರೆ ಬದುಕು ಯಂಗೋ ಯಪ್ಪಾಽಽಽ

ನೋಡಾನಂದರೆ ಒಂದೂ ಇಲ್ಲಾ ಎಲ್ಲಿ ಹೋಗೀರೇಽಽಽ ಗುಬ್ಬೀಽಽಽ
ಕೇಳಾನಂದರೆ ಸದ್ದೇ ಇಲ್ಲಾ ಎಲ್ಲಿ ಅಡಗೀರೇಽಽಽ ಗುಬ್ಬೀಽಽಽ

ಊರಗುಬ್ಬಿ ಕಾಣದಾದ್ವಲ್ಲೇಽಽಽ ಯಮ್ಮಾಽಽಽ
ಊರಮಂದಿ ದೂರವಾಗೋ ಕಾಲ ಬರ್ತೈತೋಽಽಽ ಯಪ್ಪಾಽಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ನಮ್ಮ ಕರೆದರು?
Next post ಕಾರ್ಗಿಲ್‌ನಿಂದ ಬಂದವನು…!

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys