Home / ಕವನ / ಕವಿತೆ / ಊರಮಂದಿ ದೂರವಾಗೋ ಕಾಲ ಬರುತೈತಿ

ಊರಮಂದಿ ದೂರವಾಗೋ ಕಾಲ ಬರುತೈತಿ

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ
ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ

ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ
ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ

ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ
ಮರದ ತುಂಬಾ ಗಿಲಕಿ ಸದ್ದು ಗಿಲಕುತಿದ್ವಲ್ವೋಽಽಽ

ಅಂಗಳದಾಗ ಅಕ್ಕಿ ಆಯ್ದು ಹಸನು ಮಾಡ್ತಿದ್ವಲ್ಲೇಽಽಽ
ಕಡ್ಡಿ ಕಾಲಿಗೆ ಗೆಜ್ಜೆ ಕಟ್ಟಿ ತಕ ಥೈ ಕುಣಿಯುತಿದ್ವಲ್ಲೋಽಽಽ

ಗುಡಿಸಲಿಗೆ ಗೂಡು ಕಟ್ಟಿ ಜೋಗುಳ ಹಾಡ್ತಿದ್ವಲ್ಲೇಽಽಽ
ಬಾಯಿ ತುಂಬಾ ಬುತ್ತಿ ತಂದು ಉಣ್ಣಾಕಿಡ್ತಿದ್ವಲ್ಲೋಽಽಽ

ಹಠ ಮಾಡಿ ಅಳುವ ಕಂದ ನಿನ್ನ ನೋಡಿ ನಗ್ತಿದ್ದಲ್ಲೇಽಽಽ
ಆಕಾಡೀಕಡೆ ಗೋಣು ತಿರುಗಿಸಿ ನಿನ್ನಂದಾ ನೋಡ್ತಿದ್ವಲ್ಲೋಽಽಽ

ಜ್ವಾಳದೊಲದಾಗ ಬೆಳಸಿ ತಿಂದು ಜೋಕಾಲಿ ಜೀಕತಿದ್ವಲ್ಲೇಽಽಽ
ಮುಚ್ಚಳದಾಗಿನ ನೀರಿನಾಗ ಮುಳುಮುಳುಗಿ ಏಳತಿದ್ವಲ್ಲೋಽಽಽ

ಹಳ್ಳಿ ಮಂದಿಗೂ ಡಿಳ್ಳಿ ರೋಗ ಹೆಂಗ ಬಡದೈತಲ್ಲೇಽಽಽ
ಮಾತಾಡೋ ‘ಮಷಿನು’ ಮಾಯಾ ಮಾಡ್ಯಾವಂತಲ್ಲೋಽಽಽ

ಈ ಹರಕು ಬಾಯಿಗೆ ದೊಡ್ಡರೋಗ ಬಂದು ಸಾಯಬಾರ್ದೇಽಽಽ
ಗುಬ್ಬಿ ಸೆಟೆದಂಗೆ ಸೆಟೆಯೋ ರೋಗ ಅವ್ರುಗು ಬರಬಾರ್ದೆಽಽಽ

ಕಾಗೆ ಗುಬ್ಬಿ ಇಲ್ಲದಾಂಗ ಹೆಂಗೆ ಬದುಕ್ತಾರೋ ಯಮ್ಮಾಽಽಽ
ಎಂಡ್ರು ಮಕ್ಳು ಅಷ್ಟೇ ಅಂದ್ರೆ ಬದುಕು ಯಂಗೋ ಯಪ್ಪಾಽಽಽ

ನೋಡಾನಂದರೆ ಒಂದೂ ಇಲ್ಲಾ ಎಲ್ಲಿ ಹೋಗೀರೇಽಽಽ ಗುಬ್ಬೀಽಽಽ
ಕೇಳಾನಂದರೆ ಸದ್ದೇ ಇಲ್ಲಾ ಎಲ್ಲಿ ಅಡಗೀರೇಽಽಽ ಗುಬ್ಬೀಽಽಽ

ಊರಗುಬ್ಬಿ ಕಾಣದಾದ್ವಲ್ಲೇಽಽಽ ಯಮ್ಮಾಽಽಽ
ಊರಮಂದಿ ದೂರವಾಗೋ ಕಾಲ ಬರ್ತೈತೋಽಽಽ ಯಪ್ಪಾಽಽಽ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...