Home / ಕವನ / ಕವಿತೆ / ಕಾರ್ಗಿಲ್‌ನಿಂದ ಬಂದವನು…!

ಕಾರ್ಗಿಲ್‌ನಿಂದ ಬಂದವನು…!

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ
ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ
ಇವರೆಲ್ಲ ಅಳುತ್ತಿದ್ದಾರೆ.
ದೇಶಭಕ್ತ ಇವ ನಮ್ಮ ಹುಡುಗ
ಜೈಕಾರ ಹಾಕುತ ಮನೆಯ ಬೆಳಕು ನುಂಗಿದ
ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು.

ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು
ಗುಂಗುರು ಕೂದಲು, ನೇರ ಮೂಗು
ಹೇಳಿ ಕೇಳಿ ಇಪ್ಪತ್ತೆರಡರ ಹರೆಯ ಅಷ್ಟೆ.
ಕಿತ್ತು ತಿನ್ನುವ ಬಡತನ
ಮನೆ ತುಂಬ ಮಕ್ಕಳಲಿ ಬೆಳೆದವ
ಕಿಚ್ಚು ರೊಚ್ಚಿನೊಳಗೆ ಹೊಸ ಬದುಕಿಗೆ ಹುಡುಕಾಟ
ಸಿಕ್ಕದ್ದು ಗಡಿಕಾಯುವ ಕೆಲಸ.

ದೇಶಭಕ್ತಿ-ಅಭಿಮಾನವೆಲ್ಲ
ಗಡಿ ಗುಂಪಿನೊಳಗೇ ಬೆಳೆಸಿಕೊಂಡಿದ್ದ.
ಮನೆ ಮಂದಿಯ ಪ್ರೀತಿ ಕೂಡಾ
ಅಲ್ಲೆ ನೆನೆಪಿಸಿಕೊಂಡು ಮಡವುಗಟ್ಟಿದ್ದ.
ಇಲ್ಲಿ ಇದ್ದಾಗಿನ ಸಿಟ್ಟು ಸೆಡವುಗಳನೆಲ್ಲ
ಅಲ್ಲಿ ಇಳಿಸಿಕೊಂಡು
ಉಳಿದೆಲ್ಲ ಜವಾಬ್ದಾರಿ
ನನಗಿರಲೆಂದು ಪತ್ರಬರೆದಿದ್ದ.

ದುರ್ದಿನದೊಂದು ದಿನ ಸಿಡಿಯಿತು
ವೈರಿಗಳ ಕಿಡಿ
ಧಗಧಗನೆ ಹೊತ್ತಿ ಉರಿಯಿತು
ಯೋಧರ ಎದೆ
ಕತ್ತಲು ಕಗ್ಗತ್ತಲಿಗಂಜದೆ
ಮಂಜು ಚಳಿ ಮಳೆಗೆ ಹೆದರದೆ
ಹಸಿವು ಪ್ರಾಣದ ಹಂಗು ತೊರೆದು
ಗುಂಡು ಮದ್ದುಗಳ ನಡುವೆ
ಹೋರಾಡಿದ್ದೇನು
ಉಸಿರು ಉಸಿರಿಗೆ ಪ್ರೀತಿಸಿದ್ದೇನು ದೇಶ.

ವೈರಿಗಳ ಸದ್ದಡಗಿಸುತ ನೆಲತಟ್ಟಿ
ಮಾತೃವಂದನೆ ಮಾಡಿ
ಮುಖಾಮುಖಿ ಕೊರಳಿಗೆ ಕೊರಳುಕೊಟ್ಟು
ದೇಶಭಕ್ತಿ ರಕ್ತ ಪತಾಕೆಗೆ ಹಾರಿಸಿ
ಹೋದ, ಅವ ದೂರ ಹೊರಟೇ ಹೋದ.
ಅವ ನಮ್ಮವ ನಿಮ್ಮವ ಎಲ್ಲರವ
ವೀರಕುಮಾರ, ಮನೆಯಮಗನವ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್