Home / ಕವನ / ಕವಿತೆ / ಕಾರ್ಗಿಲ್‌ನಿಂದ ಬಂದವನು…!

ಕಾರ್ಗಿಲ್‌ನಿಂದ ಬಂದವನು…!

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ
ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ
ಇವರೆಲ್ಲ ಅಳುತ್ತಿದ್ದಾರೆ.
ದೇಶಭಕ್ತ ಇವ ನಮ್ಮ ಹುಡುಗ
ಜೈಕಾರ ಹಾಕುತ ಮನೆಯ ಬೆಳಕು ನುಂಗಿದ
ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು.

ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು
ಗುಂಗುರು ಕೂದಲು, ನೇರ ಮೂಗು
ಹೇಳಿ ಕೇಳಿ ಇಪ್ಪತ್ತೆರಡರ ಹರೆಯ ಅಷ್ಟೆ.
ಕಿತ್ತು ತಿನ್ನುವ ಬಡತನ
ಮನೆ ತುಂಬ ಮಕ್ಕಳಲಿ ಬೆಳೆದವ
ಕಿಚ್ಚು ರೊಚ್ಚಿನೊಳಗೆ ಹೊಸ ಬದುಕಿಗೆ ಹುಡುಕಾಟ
ಸಿಕ್ಕದ್ದು ಗಡಿಕಾಯುವ ಕೆಲಸ.

ದೇಶಭಕ್ತಿ-ಅಭಿಮಾನವೆಲ್ಲ
ಗಡಿ ಗುಂಪಿನೊಳಗೇ ಬೆಳೆಸಿಕೊಂಡಿದ್ದ.
ಮನೆ ಮಂದಿಯ ಪ್ರೀತಿ ಕೂಡಾ
ಅಲ್ಲೆ ನೆನೆಪಿಸಿಕೊಂಡು ಮಡವುಗಟ್ಟಿದ್ದ.
ಇಲ್ಲಿ ಇದ್ದಾಗಿನ ಸಿಟ್ಟು ಸೆಡವುಗಳನೆಲ್ಲ
ಅಲ್ಲಿ ಇಳಿಸಿಕೊಂಡು
ಉಳಿದೆಲ್ಲ ಜವಾಬ್ದಾರಿ
ನನಗಿರಲೆಂದು ಪತ್ರಬರೆದಿದ್ದ.

ದುರ್ದಿನದೊಂದು ದಿನ ಸಿಡಿಯಿತು
ವೈರಿಗಳ ಕಿಡಿ
ಧಗಧಗನೆ ಹೊತ್ತಿ ಉರಿಯಿತು
ಯೋಧರ ಎದೆ
ಕತ್ತಲು ಕಗ್ಗತ್ತಲಿಗಂಜದೆ
ಮಂಜು ಚಳಿ ಮಳೆಗೆ ಹೆದರದೆ
ಹಸಿವು ಪ್ರಾಣದ ಹಂಗು ತೊರೆದು
ಗುಂಡು ಮದ್ದುಗಳ ನಡುವೆ
ಹೋರಾಡಿದ್ದೇನು
ಉಸಿರು ಉಸಿರಿಗೆ ಪ್ರೀತಿಸಿದ್ದೇನು ದೇಶ.

ವೈರಿಗಳ ಸದ್ದಡಗಿಸುತ ನೆಲತಟ್ಟಿ
ಮಾತೃವಂದನೆ ಮಾಡಿ
ಮುಖಾಮುಖಿ ಕೊರಳಿಗೆ ಕೊರಳುಕೊಟ್ಟು
ದೇಶಭಕ್ತಿ ರಕ್ತ ಪತಾಕೆಗೆ ಹಾರಿಸಿ
ಹೋದ, ಅವ ದೂರ ಹೊರಟೇ ಹೋದ.
ಅವ ನಮ್ಮವ ನಿಮ್ಮವ ಎಲ್ಲರವ
ವೀರಕುಮಾರ, ಮನೆಯಮಗನವ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...