ಭೂಮಿ ಆಟದ ಮೈದಾನ

ಸುತ್ತಲೂ ಕತ್ತಲು
ನಂಬುವಂತಿಲ್ಲ ಯಾರೊಬ್ಬರನೂ
ಕತ್ತಿ ಹಿಡಿದು
ಮೇಲೇರಿ ಬಂದಂತೆ
ಕಡ್ಡಿ ಗೀರಿದೆ ಮೆಲ್ಲಗೆ
ದೀಪ ಹಚ್ಚಿದೆ
ಬೆಳೆಯುತ್ತಾ ಹೋಯಿತು
ಬೆಳಕು

ಮುಟ್ಟಿದರೆ ಎದೆಯಾಳಕ್ಕೆ
ಚುಚ್ಚಿಕೊಳ್ಳುವ
ಮುಳ್ಳು
ಪ್ರತಿ ಕೊಂಬೆಗೂ
ತುದಿಯಲೊಂದು ಸಣ್ಣ ಮೊಗ್ಗು
ನಗುತ್ತಿವೆ ಹೂವುಗಳು
ಅರಳಿ
ತೋಟದ ತುಂಬಾ

ಭಯದ ನೆರಳು ಸುತ್ತಮುತ್ತ
ಆಕಾಶಕ್ಕೆ ಹೆಣೆದ
ಬಲೆ
ಮೌನ ಮುರಿಯಿತು ಹಕ್ಕಿ
ರೆಕ್ಕೆ ಪಟಪಟ ಸದ್ದು
ಬಾನ ತುಂಬಾ
ಕಲರವ

ಕೈ ಕೈ ಹಿಡಿದ ಜನ
ಕೆಡವಿದರು
ಎಲ್ಲಾ ಗೋಡೆಗಳ

ಆಟದ ಮೈದಾನವಾಯಿತು
ಭೂಮಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವು ತೂಗಾಡಿದವು
Next post ಹತ್ತೊಂಬತ್ತನೇ ಶತಮಾನ ಕನ್ನಡ ಜನತೆಗೆ ದೌರ್ಭಾಗ್ಯದ ಶತಮಾನ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…