ಭೂಮಿ ಆಟದ ಮೈದಾನ

ಸುತ್ತಲೂ ಕತ್ತಲು
ನಂಬುವಂತಿಲ್ಲ ಯಾರೊಬ್ಬರನೂ
ಕತ್ತಿ ಹಿಡಿದು
ಮೇಲೇರಿ ಬಂದಂತೆ
ಕಡ್ಡಿ ಗೀರಿದೆ ಮೆಲ್ಲಗೆ
ದೀಪ ಹಚ್ಚಿದೆ
ಬೆಳೆಯುತ್ತಾ ಹೋಯಿತು
ಬೆಳಕು

ಮುಟ್ಟಿದರೆ ಎದೆಯಾಳಕ್ಕೆ
ಚುಚ್ಚಿಕೊಳ್ಳುವ
ಮುಳ್ಳು
ಪ್ರತಿ ಕೊಂಬೆಗೂ
ತುದಿಯಲೊಂದು ಸಣ್ಣ ಮೊಗ್ಗು
ನಗುತ್ತಿವೆ ಹೂವುಗಳು
ಅರಳಿ
ತೋಟದ ತುಂಬಾ

ಭಯದ ನೆರಳು ಸುತ್ತಮುತ್ತ
ಆಕಾಶಕ್ಕೆ ಹೆಣೆದ
ಬಲೆ
ಮೌನ ಮುರಿಯಿತು ಹಕ್ಕಿ
ರೆಕ್ಕೆ ಪಟಪಟ ಸದ್ದು
ಬಾನ ತುಂಬಾ
ಕಲರವ

ಕೈ ಕೈ ಹಿಡಿದ ಜನ
ಕೆಡವಿದರು
ಎಲ್ಲಾ ಗೋಡೆಗಳ

ಆಟದ ಮೈದಾನವಾಯಿತು
ಭೂಮಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವು ತೂಗಾಡಿದವು
Next post ಹತ್ತೊಂಬತ್ತನೇ ಶತಮಾನ ಕನ್ನಡ ಜನತೆಗೆ ದೌರ್ಭಾಗ್ಯದ ಶತಮಾನ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…