Home / ಕವನ / ಕವಿತೆ / ಫಂಢರಪುರದ ವಿಠೋಬನ ಸ್ತೋತ್ರ

ಫಂಢರಪುರದ ವಿಠೋಬನ ಸ್ತೋತ್ರ

ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ |
ಜರದ ಮಂದೀಲ ಶಾಲ
ಇಳಿಯ ಬಿಽಟ್ಟಾರ ಜೋಲ
ನಾದ ಬ್ರಹ್ಮ ಮೇಘ ಶಾಮ
ಸೃಷ್ಟಿ ಕರ್ತ ಸರ್ವ ಗೋಮ
ಸಾದು ಸಂತಽರ ಪ್ರೇಮ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ |
ಹ್ಯಾಂಗ ನಿಂತಾರೆನಗ ಪೇಳಿರೇ ||೧||

ಟೊಂಕದ ಮ್ಯಾಲ ಕೈಯನಿಟ್ಟು ಹೃದಯದಲ್ಲಿ ಲತ್ತಿಪೆಟ್ಟು
ತೆಗ್ಗು ಬಿತ್ತು ಒಳ್ಳೆ ಎಷ್ಟು
ದುಕ್ಕ ಇಲ್ಲ ಎಳ್ಳಿನಷ್ಟು
ತುಳಸಿ ಮಾಳಿ ಬುಽಕ್ಕಿಟ್ಟು
ಹಗಲ ಇರಳ ಭಜನಿಗೋಳು
ಅವಂದೇ ಅಂಸ ಮೃದುಂಗ ತಾಳ
ಮದನ ಮೂರ್ತಿ ಗೋಽಪಾಳ
ಸಾದು ಸಂತಽರ ಮ್ಯಾಳ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ |
ಹ್ಯಾಂಗ ನಿಂತಾರೆನಗ ಫೇಳಿರೇ ||೨||

ಟಿಪ್ಪಿಗೀ ಲಿಂಗಕಾರ ಟಿಳಕ ಬಣ್ಣ ಚಂದ್ರತಾರಾ
ಮುಂದ ಹರಿವ ಭೀಮ ತೀರ
ಪುಣ್ಯಕ್ಷೇತ್ರ ಪಂಡರಿಪೂರ
ಪುಂಡಲೀಕ ಗೋಪುಕಾರ
ಚಾತುರ್ಮಾನ ಪರಸಿ ಭಾಳ
ಯೋಗಿ ಜನರಿಗಽಪರೂಪ
ನೇಮದಿಂದ ಸುಡುವ ಪಾಪ
ಈತನೇನ ಬೌದ್ಧ್ಯ ರೂಪ
ಹ್ಯಾಂಗ ನಿಂತಾರೆನಗ ಪೇಳಿರೇ | ಶೀಪಾಂಡುರಂಗ |
ಹ್ಯಾಂಗ ನೀಂತಾರೆನಗ ಪೇಳಿರೇ ||೩||

ಹಾಸ್ಯನದನ ಕಮಲನಯನ ಶೇಷಶಯನ ಗರುಡವಾಹನ
ಶಿಷ್ಯಮೂಳ ನಿಜಧಾಮ
ರಾಮರಸ ರಸದಿಂದ
ಎಂದಿಗೀ ದೊರಕ್ಯಾನಂದ
ಹವಳ ಕೂಡಸ್ತ ಛೆಂದ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ |
ಹ್ಯಾಂಗ ನಿಂತಾರೆನಗ ಪೇಳಿರೇ ||೪||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...