ಪ್ರೀತಿ ಮತ್ತು ಕ್ರಾಂತಿ

ಪ್ರೀತಿ ಮತ್ತು ಕ್ರಾಂತಿ
ಬಂಡಿಯ ಎರಡು ಚಕ್ರ
ಅಗಲಿ ಮುಂದೆ ಸಾಗಲಿ
ಸೇರಲಿ ನಿಜದ ತೀರ ||

ಬುದ್ಧ ಕಂಡ ಕನಸನು ಹೊತ್ತು
ಬಸವನು ಬಳಸಿದ ಸರಕನು ಹೊತ್ತು
ಅಂಬೇಡ್ಕರರ ಹೆದ್ದಾರಿಯಲಿ
ಸಾಗಲಿ ಬಂಡಿ ಸಾಗಲಿ;
ಸಾಗಲಿ ಬಂಡಿ ಸಾಗಲಿ
ನಿಜದ ತೀರ ಸೇರಲಿ ||೧||

ಸಮತೆಯ ಬೆಳಕನು ಹಾದಿಗೆ ಹರಿಸಿ
ಭ್ರಾತೃತ್ವದ ಬಾವುಟವನು ಏರಿಸಿ
ಕಾರ್ಲ್ ಮಾರ್ಕ್ಸ್‌ನ ಕೈಮರ ನಂಬಿ
ಸಾಗಲಿ ಬಂಡಿ ಸಾಗಲಿ;
ಸಾಗಲಿ ಬಂಡಿ ಸಾಗಲಿ
ಕನಸಿನ ತೀರ ಸೇರಲಿ ||೨||

ಇಲ್ಲಿ ಯಾವುದೂ ಅಸಾಧ್ಯವಲ್ಲ
ಅಮಾವಾಸ್ಯೆಯೂ ಅಂತಿಮವಲ್ಲ
ಹಿಡಿದ ಗ್ರಹಣವು ಬಿಡಲೇಬೇಕು
ನಾಳೆಯು ನಮ್ಮದೆ ಇದೆ ನಿಜ ಬೆಳಕು;
ಹರಿದಿದೆ ಈ ಕಡೆ ಬಂಡಿ
ನಿಲ್ಲದು ಕನಸಿನ ಬಂಡಿ ||೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಳಿಲ್ಲದ ಮನೆ ಮಾಲಿಯಿಲ್ಲದ ತೋಟ
Next post ಫಂಢರಪುರದ ವಿಠೋಬನ ಸ್ತೋತ್ರ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…