ಪ್ರೀತಿ ಮತ್ತು ಕ್ರಾಂತಿ

ಪ್ರೀತಿ ಮತ್ತು ಕ್ರಾಂತಿ
ಬಂಡಿಯ ಎರಡು ಚಕ್ರ
ಅಗಲಿ ಮುಂದೆ ಸಾಗಲಿ
ಸೇರಲಿ ನಿಜದ ತೀರ ||

ಬುದ್ಧ ಕಂಡ ಕನಸನು ಹೊತ್ತು
ಬಸವನು ಬಳಸಿದ ಸರಕನು ಹೊತ್ತು
ಅಂಬೇಡ್ಕರರ ಹೆದ್ದಾರಿಯಲಿ
ಸಾಗಲಿ ಬಂಡಿ ಸಾಗಲಿ;
ಸಾಗಲಿ ಬಂಡಿ ಸಾಗಲಿ
ನಿಜದ ತೀರ ಸೇರಲಿ ||೧||

ಸಮತೆಯ ಬೆಳಕನು ಹಾದಿಗೆ ಹರಿಸಿ
ಭ್ರಾತೃತ್ವದ ಬಾವುಟವನು ಏರಿಸಿ
ಕಾರ್ಲ್ ಮಾರ್ಕ್ಸ್‌ನ ಕೈಮರ ನಂಬಿ
ಸಾಗಲಿ ಬಂಡಿ ಸಾಗಲಿ;
ಸಾಗಲಿ ಬಂಡಿ ಸಾಗಲಿ
ಕನಸಿನ ತೀರ ಸೇರಲಿ ||೨||

ಇಲ್ಲಿ ಯಾವುದೂ ಅಸಾಧ್ಯವಲ್ಲ
ಅಮಾವಾಸ್ಯೆಯೂ ಅಂತಿಮವಲ್ಲ
ಹಿಡಿದ ಗ್ರಹಣವು ಬಿಡಲೇಬೇಕು
ನಾಳೆಯು ನಮ್ಮದೆ ಇದೆ ನಿಜ ಬೆಳಕು;
ಹರಿದಿದೆ ಈ ಕಡೆ ಬಂಡಿ
ನಿಲ್ಲದು ಕನಸಿನ ಬಂಡಿ ||೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಳಿಲ್ಲದ ಮನೆ ಮಾಲಿಯಿಲ್ಲದ ತೋಟ
Next post ಫಂಢರಪುರದ ವಿಠೋಬನ ಸ್ತೋತ್ರ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…