Home / ಬಾಲ ಚಿಲುಮೆ / ಕಥೆ / ಕುಲ್ಡಪ್ಪ ಶೆಟ್ಟಿ ಕಥೆ

ಕುಲ್ಡಪ್ಪ ಶೆಟ್ಟಿ ಕಥೆ

ಬಹಳ ಹಿಂದೆ ಒಂದು ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಕುಲ್ಡಪ್ಪ ಶೆಟ್ಟಿ ಎಂಬ ಮಹಾ ವರ್ತಕನಿದ್ದ.

ಆತ ಒಂದು ಉತ್ತಮವಾದ ಬಿಳಿ ಕತ್ತೆ ಸಾಕಿದ್ದ. ಆ ಕತ್ತೆ ಮೇಲೆ ಕುಳಿತು ಶಿರೇಕೊಳ್ಳ- ದೇವಸಮುದ್ರ- ರಾಂಪುರ ಸಂತೆಗಳಿಗೆ ಹೋಗಿ ಮುತ್ತು, ರತ್ನ, ವಜ್ರ, ವೈಡೂರ್ಯ, ಮಾಣಿಕ್ಯದ ವ್ಯಾಪಾರ ಮಾಡಿ ಬರುತ್ತಿದ್ದ, ಭಾರೀ ಭಾರೀ ಶ್ರೀಮಂತನಾಗಿದ್ದ. ಸುತ್ತ ೧೮ ಹಳ್ಳಿಗೆಲ್ಲ ಕುಲ್ಡಪ್ಪ ಶೆಟ್ಟಿ ಒಂದು ಕತ್ತೆ ಕಟ್ಟಿ ದೊಡ್ಡ…. ಹೆಸರು ವಾಸಿಯಾಗಿದ್ದ…!

ಅದೇ ಹಳ್ಳಿಯ ಮೂಲೆಯಲ್ಲಿ ಮೃತ್ಯುಂಜಯನೆಂಬ ಗುಡಿ ಪೂಜಾರಿಯೊಬ್ಬನಿದ್ದ. ಇವನು ಗುಡಿ ಪೂಜಾರಿಕೆ ಒಂದನ್ನು ಬಿಟ್ಟು ಜೊಲ್ಲು ಸುರಿಸುತ್ತಾ… ಇಡೀ ಹಳ್ಳಿಯ ಮೇಲು ಉಸಾಬರಿಕೆ ಮಾಡಿ ನಿತ್ಯ ಎಲ್ಲರ ಮೇಲೆ ಸುಮ್ಮನೇ ಕರುಬುತ್ತಿದ್ದ. ಬರೀ ಬೂಟಾಟಿಕೆ ನಡೆಸಿದ್ದ, ಎಲ್ಲರಿಗೆ ತಲೆನೋವಾಗಿ ಪರಿಣಮಿಸಿದ್ದ.

ಒಮ್ಮೆ- ಕುಲ್ಡಪ್ಪ ಶೆಟ್ಟಿಯನ್ನು ಮೃತ್ಯುಂಜಯ ಅಡ್ಡಗಟ್ಟಿ- “ಶೆಟ್ಟಿ… ಶೆಟ್ಟಿಽಽ… ನಿನ್ನ ಅದೃಷ್ಟವಂತದ ಬಿಳಿ ಕತ್ತೆಯನ್ನು ನನಗೆ ಮಾರಿ ಬಿಡು, ಗುಡಿ ಮುಂದಲ ತೋಟ, ಗದ್ದೆ, ಮಾಗಣೆ, ಹೊಲ… ನಿನಗೆ ಕೊಡ್ತೀನಿ! ನನಗದು ಕತ್ತೆಯಾಗಿ ಕಾಣುತ್ತಿಲ್ಲ! ಬಿಳಿ ಅರಬಿಯನ್ ಕುದುರೆಯಾಗಿ ಕಾಣುತ್ತಿದೆ. ನಾನೂ ನಿನ್ನಂಗೇ ವ್ಯಾಪಾರ ಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕೆಂದಿದ್ದೇನೆ” ಎಂದ… ಮೃತ್ಯುಂಜಯ…ಽಽ…

ಕುಲ್ಡಪ್ಪ ಶೆಟ್ಟಿ ಗಹಗಹಿಸಿ ನಕ್ಕ.

“ನೀ ಬುದ್ಧಿಗೇಡಿ ಪೂಜಾರಿ ಇದ್ದೀಗಿ. ಮನೆ ಮುಂದೆ ಗುಡಿ, ನಿತ್ಯ ಮೂರು ಹೊತ್ತು ಪೂಜಾರಿಕೆ ಮಾಡಿಕೊಂಡು ಹಣ್ಣು, ಕಾಯಿ, ಪ್ರಸಾದ, ಹೂವು, ತೀರ್‍ಥ, ಫನ್ನೀರು, ಚಂದನ ಎಂದು ಖುಷಿಖುಷಿಯಾಗಿರದೂ ಬಿಟ್ಟು ಹಳ್ಳಿಹಳ್ಳಿ ತಿರುಗಿ ನೀ ಏನು ವ್ಯಾಪಾರ ಮಾಡೀಗಿ? ನಿನ್ನ ಹೊಟ್ಟೆ ಕರಗಿ ನೀರಾಗಿ ಗುಂಡೇರಹಳ್ಳವಾಗಿ ಹರಿವದು” ಎಂದು, ಬಲು ವ್ಯಂಗ್ಯ ಮಾಡಿ ನಕ್ಕು, ಬಿಳಿ ಕತ್ತೆ ಏರಿ ಹೊರಟೇ ಬಿಟ್ಟ….!

ಮೃತ್ಯುಂಜಯನಿಗೆ ಭಲೇ ಅವಮಾನವೆನಿಸಿತು. ಈ ಬಿಳಿ ಕತ್ತೆ ಏರಿ ನಾನೂ ವ್ಯಾಪಾರ ಆರಂಭಿಸಲೇಬೇಕು. ಪೂಜಾರಿಕೆಯಲ್ಲಿ ಈಗೀಗ ಸುಖ, ಶಾಂತಿ, ನೆಮ್ಮದಿಯಿಲ್ಲವೆನಿಸಿದೆ! ಎಂದು ಯೋಚಿಸಿದ.

ಹೀಗಿರಲಾಗಿ- ಒಂದು ದಿನ ಕುಲ್ಡಪ್ಪ ಶೆಟ್ಟಿ ಎಂದಿನಂತೆ ಕತ್ತೆ ಏರಿ ರಾಂಪುರದ ಸಂತೆಗೆ ಹೊರಟಿದ್ದ. ದಾರಿಯಲ್ಲಿ ದಂಡಿನ ಬೇಲಿಯಲ್ಲಿ ಯಾರೋ ರೋಧಿಸುವ “ಅಯ್ಯೋ ಅಪ್ಪ, ಅಮ್ಮಾ ನನ್ನ ಕಾಪಾಡಿಽ..” ಎಂಬ ಕೂಗು ಕೇಳಿದ. ಅಲ್ಲೇ ಕತ್ತೆಯಿಂದ ಇಳಿದ ಅವನನ್ನು ಬಾಚಿ ಎತ್ತಿ ತಂದು ಕತ್ತೆ ಮೇಲೆ ಕೂಡಿಸಿ ತಾನು ಹಿಂದಿಂದೆ ನಡೆಯುತ್ತಾ ಸಾಗಿದ್ದ.

ತುಸು ದೂರ ಅಲ್ಲೇ ತುರುಕರ ಘೋರಿಗಳ ಬಳಿ ಹೋಗಿ “ಏ ಶೆಟ್ಟೀ ನಾನೇ ಮೃತ್ಯಂಜಯ! ನಿನಗಿನ್ನು ಗುರ್‍ತು ಸಿಗಲಿಲ್ಲವೇ? ಈ ಕತ್ತೆ-ಕತ್ತೆ ಮೇಲಿನ ಮುತ್ತು, ರತ್ನ, ವಜ್ರ, ವೈಡೂರ್ಯ… ಎಲ್ಲ ಈಗ ನನ್ನದು! ನಾನಿನ್ನು ಬರುತ್ತೇನೆ” ಎಂದು ಮೃತ್ಯುಂಜಯ ಕತ್ತೆಯನ್ನು ಜೋರಾಗಿ ಓಡಿಸಲು ಮುಂದಾದ.

“ಲೋ… ಮೃತ್ಯುಂಜಯ! ನೀ ಗಂಟೆ ಅಲ್ಲಾಡಿಸಿದಷ್ಟು ಜೋಲ್ಲು ಸುರಿಸಿ… ಹಸಿರು ಗೊಣ್ಣೆ ಬಿಟ್ಟಷ್ಟು… ಆರತಿ ತಟ್ಟೆ ಬೆಳಗಿದಷ್ಟು- ಗುಡಿಯ ಪೂಜಾರಿಕೆ ಮಾಡಿದಷ್ಟು ಸುಲಭವಲ್ಲ…! ಅದೂ ನನ್ನ ಕತ್ತೆ! ಅಷ್ಟು ಸಲೀಸಿಲ್ಲ ನೀ ಅದರ…. ಮೇಲೆ ಕುಳಿತು ಸವಾರಿ ಮಾಡುವುದು?? ಅದು ನನ್ನ ಕತ್ತೆ! ಅದೂ ಕುದುರೆಗೂ ಮಿಗಿಲು! ಅದೃಷ್ಟ ಲಕ್ಷ್ಮೀ…. ನಾ ಹೇಳಿದಂತೆ ಕೇಳುವುದು…. ಬೇಗ ಕೆಳಗಿಳಿ! ಇಲ್ಲವಾದರೆ… ಆಹಾಽ ನಿನಗೇ ಆಪತ್ತು!” ಎಂದು ಕುಲ್ಡಪ್ಪ ಶೆಟ್ಟಿ ಮೃತ್ಯುಂಜಯನಿಗೆ ಅಂದನಲ್ಲದೆ ಕತ್ತೆಯಂಗೇ ಒಂದು ಕೂಗು ಹಾಕಿದ! ಅಷ್ಟೇ ಸಾಕಾಯಿತು ಕತ್ತೆಗೇ….!

ಮೃತ್ಯುಂಜಯ ಉಢಾಳ- ದುಷ್ಠ- ಕ್ರೂರಿ-ಕೆಡುಕ-ಕುಡುಕ, ಕೆಟ್ಟ ಬುದ್ಧಿಯವ… ಕತ್ತೆಗೆ ಓಡಿಸಲು ಕೈಯಿಂದ ಜೋರಾಗಿಯೇ ಗುದ್ದಿದ. ಆ ಬಿಳಿ ಕತ್ತೆ ಓಡದೆ ಅವನನ್ನು ಕೆಳಕ್ಕೆ ಬೀಳಿಸಿ, ಕಾಲಿನಿಂದ ಜೋರಾಗಿ ಎರಡು ಮೂರು ಸಾರಿ ಒದೆಯಿತು. ಕಾಲುಗಳಿಂದ ತುಳಿಯಿತು, ಕೆನೆಯಿತು…. ಅವನನ್ನು ಹಣ್ಣುಗಾಯಿ ನೀರಾಯಿ ಮಾಡಿತು!

ಅಷ್ಟರಲ್ಲಿ ಕುಲ್ಡಪ್ಪ ಶೆಟ್ಟಿ ಓಡಿ ಬಂದು ಕತ್ತೆಯಿಂದ ಮೃತ್ಯುಂಜಯನನ್ನು ರಕ್ಷಿಸಿದ. ಅವನ ಬೆನ್ನು ಶಾಶ್ವತವಾಗಿ ಮುರಿದು ಹೋಗಿತ್ತು! ಹಲ್ಲುಗಳು ಉದುರಿ ಮೈ ಮನವೆಲ್ಲ ರಕ್ತಮಯವಾಗಿ ಹೋಗಿದ್ದವನನ್ನು ಆಸ್ಪತ್ರೆಗೆ ಸಾಗಿಸಿ, ಶೆಟ್ಟಿ ಪುಣ್ಯ ಕಟ್ಟಿಕೊಂಡ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...