Home / ಬಾಲ ಚಿಲುಮೆ / ಕಥೆ / ನರಿಯ ಮರಿಯ ಕಥೆ

ನರಿಯ ಮರಿಯ ಕಥೆ

ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರಿಯು ಸಿಕ್ಕಲು, ಸಿಂಹವು ಅದನ್ನು ತಂದು ಹೆಂಡತಿಗೆ ಕೊಟ್ಟಿತು. ಸಿಂಹಿಯು ಅದನ್ನು ಕೊಲ್ಲದೆ, ಅದಕ್ಕೂ ಹಾಲು ಕೊಟ್ಟು ಸಾಕಿತು. ಆಮರಿಗಳೊಡನೆ ಅದೂ ಬೆಳೆಯಿತು.
ಅವು ಒ೦ದು ದಿನ ಅರಣ್ಯದಲ್ಲಿ ಅಲೆಯುತ್ತಿರುವಾಗ ಅವುಗಳ ಎದುರಿಗೆ ಒ೦ದು ಆನೆಯು ಬಂತು. ಸಿಂಹದ ಮರಿಗಳು ಅದನ್ನು ಕಂಡು ರೇಗಿ ಅದರ ಮೇಲೆ ಬೀಳಲು ಹೋದುವು. ನರಿಯ ಮರಿಯು “ಬೇಡ ಬೇಡ” ಎಂದು ತಡೆಯಿತು; ಅವು ನಿಲ್ಲದಿರಲು ತಾನು ಮನೆಯ ಕಡೆಗೆ “ಓಡಿತು. ಇದು ಓಡುತ್ತಲೂ ಅವು ಏನೋ ಎಂತೋ ಎಂದು ಅದರ ಹಿಂದೆಯೇ ಬಂದುಬಿಟ್ಟುವು. ಕೇಳಿಲ್ಲವೆ?
ಉತ್ಸಾಹಿ ಧೀರನಿಂದುತ್ಸಾಹ ಸೇನೆಗೆಲ್ಲ | 
ಸೋತೊಬ್ಬನೋಡಲ್ಕೆ ಸೋತಂತೆ ಸೇನೆಯೆಲ್ಲ ॥೨೧॥ 
ಮನೆಗೆ ಬಂದಮೇಲೆ ಸಿಂಹದ ಮರಿಗಳೆರಡೂ ತಾಯಿ ಬಳಿಯಲ್ಲಿ “ಅಮ್ಮಾ, ಅಣ್ಣ ಈ ವೊತ್ತು ಹೆದರಿ ಓಡಿ ಬಂದುಬಿಟ್ಟ” ಎಂದು ಹಾಸ್ಯಮಾಡಿ ನಗುತ್ತ ನರಿಯ ಮರಿಯು ಮಾಡಿದುದನ್ನೆಲ್ಲಾ ಹೇಳಿದುವು. ಅದನ್ನು ಕೇಳಿ ನರಿಯ ಮರಿಗೆ ಕೋಪ ಬಂತು. ಅವರನ್ನು ಗದರಿಸಿಕೊಂಡು ಬಯ್ಯಿತು.
ಸಿಂಹಿಯು ನರಿಯ ಮರಿಯನ್ನು ಬೇರೆಯಾಗಿ ಕರೆದು “ಮಗು, ನೀನು ಹೀಗೆಲ್ಲ ಹಾರಾಡಬಾರದು. ನಿನ್ನ ತಮ್ಮಂದಿರು ಅವರು” ಎನ್ನಲು, ಅದು ಇನ್ನೂ ರೇಗಿ ಹಾರಾಡಿತು. “ನಾನೇನು ಇವರಿಗಿಂತ ಕಡಿಮೆಯೋ? ನನಗೆ ಶೌರ್ಯವಿಲ್ಲವೋ? ರೂಪವಿಲ್ಲವೋ? ವಿದ್ಯೆಯಿಲ್ಲವೋ? ನನ್ನನ್ನು ಇವರು ಏಕೆ ಹಾಸ್ಯ ಮಾಡುವುದು?” ಎಂದು ಕೂಗಿತು. ಆಗ ಸಿಂಹಿಯು ನಗುತ್ತ ಹೇಳಿತು:-“ನೀನು ಎಲ್ಲವೂ ಅಹುದು. ಅದರೂ ನಿನ್ನವರು ಆನೆಯನ್ನು ಕೊಂದವರಲ್ಲ. ನೀನು ನರಿಯ ಮಗನು. ನಾನು ನಿನ್ನನ್ನು ಕಾಪಾಡಿದೆ ಅಷ್ಟೆ? ನನ್ನ ಮರಿಗಳಿಗೆ ನೀನು ನರಿಯೆಂಬುದು ಇನ್ನೂ ತಿಳಿಯದು. ಈಗಲೇ ಹೊರಟು ಹೋಗಿ ನಿನ್ನವರ ಜೊತೆ ಸೇರಿಕೊ. ಇಲ್ಲದಿದ್ದರೆ ಇವರ ಏಟು ತಿಂದು ಸತ್ತೀಯೆ” ಎಂದು ಹೇಳಿ ಅದನ್ನು ಅಲ್ಲಿಂದ ಕಳುಹಿಸಿ ಕೊಟ್ಟಿತು.
ಅದರಂತೆಯೇ ನೀನೂ ಈ ರಾಜಪುತ್ರರು ನೀನು ಕುಂಬಾರನೆಂದು ತಿಳಿಯುವುದಕ್ಕಿಂತ ಮುಂಚೆಯೇ ಓಡಿಬಿಡು.ಇಲ್ಲವಾದರೆ ಇವರ ಕೈಗೆ ಸಿಕ್ಕಿ ಬದುಕವುದೇ ಕಷ್ಟವಾದೀತು.” ಎಂದು ಹೇಳಲು ಅವನೂ ಹೋಗಿ ಬದಕಿದನು.
“ಎಲೆ ಮೊಸಳೆ, ನೀನು ನಿಜವಾಗಿ ಮೂರ್ಖನು. ಹೆಂಗಸಿನ ಮಾತು ಕೇಳಿ ಕೆಟ್ಟೆ. ಕಥೆಯನ್ನು ಕೇಳಿಲ್ಲವೇ?
ಹೆಣ್ಣು ಮಾಡೆನೆ ಗಂಡು ಮಾಡನದೇನ? 
ಕುದುರೆಯಿಲ್ಲದ ಅರಸು ಕೆನೆಯುವ ॥ ಪರ್ವ 
ಕಾಲವೆನ್ನದೆ ಮಂತ್ರಿ ಬೋಳಿಪ ತಲೆಯನು ॥ 
ಮೊಸಳೆಯು ಅದು ಹೇಗೆ ಎನ್ನಲು ಕಪಿಯು ಹೇಳಿತು: –
*****
ಅರಸು ಮಂತ್ರಿಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...