Home / ಬಾಲ ಚಿಲುಮೆ / ಕಥೆ / ಯುಧಿಷ್ಠಿರನ ಕಥೆ

ಯುಧಿಷ್ಠಿರನ ಕಥೆ

ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು. ಗಾಯಕ್ಕೆ ಎನೋ ಅಪಥ್ಯವಾಗಿ, ಅದು ಕೀವು ಕಟ್ಟಿಕೊಂಡು ವಾಸಿಯಾಗುವುದೇ ಅಸಾಧ್ಯವಾಗಿ, ಕೊನೆಗೆ ಹೇಗೆ ಹೇಗೋ ವಾಸಿಯಾಯಿತು.
ಒಂದು ಸಲ ಅವನಿದ್ದ ದೇಶದಲ್ಲೆ ಕ್ಷಾಮವು ಬರಲು, ಅವನು ದೇಶಾಂತರ ಹೋಗಿ ಒಬ್ಬ “ರಾಜನ ಬಳಿ ಸೇವಕನಾದನು. ಆ ರಾಜನು ಅವನ ಹಣೆಯಲ್ಲಿರುವ ಭಾರಿಯ ಕಲೆಯನ್ನು ನೋಡಿ “ಇವನು ವೀರಪುರುಷನಿರಬೇಕು. ಇವನ ಹಣೆಯ ಮೇಲಿನ ಕಲೆಯು ಮಖಾಮಖಿ ಯುದ್ಧಮಾಡಿದಾಗ ಆದದ್ದು ಇರಬೇಕು.” ಎಂದುಕೊಂಡು ಅವನಿಗೆ ಬೇಕಾದ ಮಾನ ಮರ್ಯಾದೆಗಳನ್ನು ಮಾಡಿ ರಾಜಪುತ್ರರ ಬಳಿ ಇಟ್ಟುಕೊಂಡಿದ್ದನು.
ಒ೦ದು ದಿನ ಅರಸನು ವೀರ ಸಂಭಾವನೆಯನ್ನು ಕೊಡಲು ಎಲ್ಲರನ್ನೂ ಕರೆಸಿದನು. ಆನೆ ಕುದುರೆ ಮೊದಲಾದುವುಗಳೂ ವೀರ ಪುರುಷರೂ ಬಂದು ನಿಂತಿದ್ದರು. ಆಗ ಅಗಸನು ಕುಂಬಾರನನ್ನು ಕರೆದು, “ಎಲೈ ರಾಜಪುತ್ರ, ನಿನ್ನ ಹೆಸರೇನು? ನೀನು ಯಾವ  ಜಾತಿಯವನು? ಯಾವ ಯುದ್ಧದಲ್ಲಿ ಏಟು ತಿಂದು ನಿನಗೆ ಈ ಹಣೆಯು ಹೀಗಾಯಿತು?” ಎಂಡು ಕೇಳಿದನು. ಕುಂಬಾರನು “ದೇವ, ಇದು ಶಸ್ತ್ರದ ಗಾಯವಲ್ಲ. ಯುಧಿಸ್ಠಿರನೆಂಬ ಕುಂಬಾರನು ನಾನು. ನಮ್ಮ ಮನೆಯಲ್ಲಿ ಎಷ್ಟೋ ಓಡುಗಳು ಇದ್ದವು. ಒಂದು ದಿನ ನಾನು ಓಡಿಬರುತ್ತಾ ಒಂದು ಓಡಿನ ಮೇಲೆ ಬಿದ್ದೆನು. ಅದು ತಗಲಿ ಇಷ್ಟು ಗಾಯವಾಯಿತು” ಎಂದು
ಹೇಳಿದನು.
ರಾಜನು ಅದನ್ನು ಕೇಳಿ. “ಮೋಸವಾಯಿತು,” ಎಂದು ಕೊಂಡು ಮೊದಲು ಇವನನ್ನು ಹೊರಕ್ಕೆ ತಳ್ಳಿ ಎಂದನು. ಕುಂಬಾರನು, “ಅರಸಾ, ತಡೆ, ತಡೆ, ಯುದ್ಧ ಬರಲಿ, ನನ್ನ ಕೈ ತೋರಿಸುವೆನು.” ಎನ್ನಲು ಅರಸನು ಹೇಳಿದನು: “ಆಹಾ, ಅಲ್ಲವೇ? ನೀನು ಸರ್ವ ಗುಣ ಸಂಪನ್ನನು. ಆದರೂ ನಮಗೆ ಬೇಡ, ಕೇಳಲಿಲ್ಲವೇ?”
ಶೂರನೆ ಅಹುದು, ಸುಂದರನಹುದು, ಪಂಡಿತನಹುದು ॥
ಆದರು ಮಗನೆ, ನಿನ್ನವರಾನೆಯ ಕೊಂದವರಲ್ಲಾ ॥ ೨೦ ॥
ಕುಂಬಾರನು “ಅದು ಹೇಗೆ?” ಎನ್ನಲು : ಅರಸನು ಹೇಳಿದನು:-
*****
ನರಿಯ ಮರಿಯ ಕಥೆ ಓದಿ.
Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...