Home / ಬಾಲ ಚಿಲುಮೆ / ಕಥೆ / ಯುಧಿಷ್ಠಿರನ ಕಥೆ

ಯುಧಿಷ್ಠಿರನ ಕಥೆ

ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು. ಗಾಯಕ್ಕೆ ಎನೋ ಅಪಥ್ಯವಾಗಿ, ಅದು ಕೀವು ಕಟ್ಟಿಕೊಂಡು ವಾಸಿಯಾಗುವುದೇ ಅಸಾಧ್ಯವಾಗಿ, ಕೊನೆಗೆ ಹೇಗೆ ಹೇಗೋ ವಾಸಿಯಾಯಿತು.
ಒಂದು ಸಲ ಅವನಿದ್ದ ದೇಶದಲ್ಲೆ ಕ್ಷಾಮವು ಬರಲು, ಅವನು ದೇಶಾಂತರ ಹೋಗಿ ಒಬ್ಬ “ರಾಜನ ಬಳಿ ಸೇವಕನಾದನು. ಆ ರಾಜನು ಅವನ ಹಣೆಯಲ್ಲಿರುವ ಭಾರಿಯ ಕಲೆಯನ್ನು ನೋಡಿ “ಇವನು ವೀರಪುರುಷನಿರಬೇಕು. ಇವನ ಹಣೆಯ ಮೇಲಿನ ಕಲೆಯು ಮಖಾಮಖಿ ಯುದ್ಧಮಾಡಿದಾಗ ಆದದ್ದು ಇರಬೇಕು.” ಎಂದುಕೊಂಡು ಅವನಿಗೆ ಬೇಕಾದ ಮಾನ ಮರ್ಯಾದೆಗಳನ್ನು ಮಾಡಿ ರಾಜಪುತ್ರರ ಬಳಿ ಇಟ್ಟುಕೊಂಡಿದ್ದನು.
ಒ೦ದು ದಿನ ಅರಸನು ವೀರ ಸಂಭಾವನೆಯನ್ನು ಕೊಡಲು ಎಲ್ಲರನ್ನೂ ಕರೆಸಿದನು. ಆನೆ ಕುದುರೆ ಮೊದಲಾದುವುಗಳೂ ವೀರ ಪುರುಷರೂ ಬಂದು ನಿಂತಿದ್ದರು. ಆಗ ಅಗಸನು ಕುಂಬಾರನನ್ನು ಕರೆದು, “ಎಲೈ ರಾಜಪುತ್ರ, ನಿನ್ನ ಹೆಸರೇನು? ನೀನು ಯಾವ  ಜಾತಿಯವನು? ಯಾವ ಯುದ್ಧದಲ್ಲಿ ಏಟು ತಿಂದು ನಿನಗೆ ಈ ಹಣೆಯು ಹೀಗಾಯಿತು?” ಎಂಡು ಕೇಳಿದನು. ಕುಂಬಾರನು “ದೇವ, ಇದು ಶಸ್ತ್ರದ ಗಾಯವಲ್ಲ. ಯುಧಿಸ್ಠಿರನೆಂಬ ಕುಂಬಾರನು ನಾನು. ನಮ್ಮ ಮನೆಯಲ್ಲಿ ಎಷ್ಟೋ ಓಡುಗಳು ಇದ್ದವು. ಒಂದು ದಿನ ನಾನು ಓಡಿಬರುತ್ತಾ ಒಂದು ಓಡಿನ ಮೇಲೆ ಬಿದ್ದೆನು. ಅದು ತಗಲಿ ಇಷ್ಟು ಗಾಯವಾಯಿತು” ಎಂದು
ಹೇಳಿದನು.
ರಾಜನು ಅದನ್ನು ಕೇಳಿ. “ಮೋಸವಾಯಿತು,” ಎಂದು ಕೊಂಡು ಮೊದಲು ಇವನನ್ನು ಹೊರಕ್ಕೆ ತಳ್ಳಿ ಎಂದನು. ಕುಂಬಾರನು, “ಅರಸಾ, ತಡೆ, ತಡೆ, ಯುದ್ಧ ಬರಲಿ, ನನ್ನ ಕೈ ತೋರಿಸುವೆನು.” ಎನ್ನಲು ಅರಸನು ಹೇಳಿದನು: “ಆಹಾ, ಅಲ್ಲವೇ? ನೀನು ಸರ್ವ ಗುಣ ಸಂಪನ್ನನು. ಆದರೂ ನಮಗೆ ಬೇಡ, ಕೇಳಲಿಲ್ಲವೇ?”
ಶೂರನೆ ಅಹುದು, ಸುಂದರನಹುದು, ಪಂಡಿತನಹುದು ॥
ಆದರು ಮಗನೆ, ನಿನ್ನವರಾನೆಯ ಕೊಂದವರಲ್ಲಾ ॥ ೨೦ ॥
ಕುಂಬಾರನು “ಅದು ಹೇಗೆ?” ಎನ್ನಲು : ಅರಸನು ಹೇಳಿದನು:-
*****
ನರಿಯ ಮರಿಯ ಕಥೆ ಓದಿ.
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...