Home / ಬಾಲ ಚಿಲುಮೆ / ಕಥೆ / ಚಿತ್ರಾಂಗನ ಕಥೆ

ಚಿತ್ರಾಂಗನ ಕಥೆ

ಒಂದಾನೊಂದು ಊರಿನಲ್ಲಿ ಚಿತ್ರಾಂಗನೆಂಬ ನಾಯಿಯಿತ್ತು. ಆ ಊರಿನಲ್ಲಿ ಕ್ಷಾಮವು ಬಂತು. ತಿನ್ನುವುದಕ್ಕೆ ಎಂಜಲೂ ಇಲ್ಲದೆ ನಾಯಿಗಳು ನಾಶವಾಗಿ ಹೋದುವು. ಅದರಿಂದ ಚಿತ್ರಾಂಗನು ಹೊಟ್ಟೆಯಪಾಡು ನೋಡಿಕೊಳ್ಳಲು ದೇಶಾಂತರಕ್ಕೆ ಹೋಯಿತು.
ಅಲ್ಲೊಂದು ಊರಿನಲ್ಲಿ ಒಬ್ಬಳು ದಿನವೂ ಅಡಿಗೆಯ ಮನೆಯ ಬಾಗಿಲನ್ನು ಮುಚ್ಚುವುದನ್ನು ಮರೆತುಬಿಡುವಳು. ಈ ನಾಯಿಯು ಸಮಯ ಕಾದಿದ್ದು ಒಳನುಗ್ಗಿ ಬೇಕಾದ್ದನ್ನೆಲ್ಲ ತಿಂದುಬಿಡುವುದು. ಆದರೆ, ಈಚೆಗೆ ಬರುವ ವೇಳೆಗೆ ಸರಿಯಾಗಿ ಆ ಬೀದಿಯ ನಾಯಿಗಳು ಮೇಲೆ ಬಿದ್ದು ಕಚ್ಚಿ ಗೋಳುಗುಟ್ಟಿಸಿಬಿಡುವುವು.
ಹೀಗೆ ಕೆಲವುದಿನ ಕಷ್ಟದಿಂದ ಅಲ್ಲಿಯೇ ಕೆಲವು ದಿನವಿತ್ತು. ಕೊನೆಗೆ “ಇಲ್ಲಿದ್ದು ಈ ತಿಂಡಿ ತಿನ್ನುವುದೂ ಸಾಕು. ಈ ನಾಯಿಗಳಿಂದ ಕಚ್ಚಿಸಿಕೊಳ್ಳುವುದೂ ಸಾಕು. ನಮ್ಮೂರಲ್ಲಿ ತಿಂಡಿಯಿಲದಿದ್ದರೂ ಕಚ್ಚುವವರು ಯಾರೂ ಇಲ್ಲ” ಎಂದು ಆಲ್ಲಿ೦ದ ಹಿಂತಿರುಗಿ ಬಂತು.
ಅದರಿಂದ ಹಾಗೆ ಹೇಳಿದೆ. ಹೋಗು. ನಿನ್ನ ಮನೆಯನ್ನು ಹಿಡಿದುಕೊಂಡಿರುವನನೊಡನೆ ಯುದ್ಧ ಮಾಡಿ ಹೊಡೆದೋಡಿಸಿ ಮನೆಯನ್ನು ಸಾಧಿಸು” ಎಂದಿತು.
ಆ ಮೊಸಳೆಯೂ ಆ ಕಪಿಯು ಹೇಳಿದ ಬುದ್ಧಿಯ ಮಾತನ್ನು ಕೇಳಿ ಆ ಉಪದೇಶದಂತೆಯೇ  ನಡೆಯಿತು. ಅದಕ್ಕೆ ಮನೆಯೂ ಸಿಕ್ಕಿತು. ಅದೂ ಬಹುಕಾಲ ಅಲ್ಲಿ ಸುಖವಾಗಿತ್ತು. ಅದರಿಂದಲೇ ಹೇಳುವುದು
ಪೌರುಷಮಾಡದೆ ಪಡೆದಾಸಿರಿಯದು | 
ಹಿರಿದಾದರು ಫಲವಿಲ್ಲ | ವನದೊಳು ||
ದೈವವು ಕೊಟ್ಟಾ ಹುಲ್ಲನು ಸೊಪ್ಪನು | 
ತಿಂಬುದು ಮುದಿ ಗೂಳಿಯು ಕಾಣೆಯ ॥ ೩೨॥ 
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಮೊದಲನೆಯ ತಂತ್ರವು
*****
Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...