Home / ಬಾಲ ಚಿಲುಮೆ / ಕಥೆ / ಚಿತ್ರಾಂಗನ ಕಥೆ

ಚಿತ್ರಾಂಗನ ಕಥೆ

ಒಂದಾನೊಂದು ಊರಿನಲ್ಲಿ ಚಿತ್ರಾಂಗನೆಂಬ ನಾಯಿಯಿತ್ತು. ಆ ಊರಿನಲ್ಲಿ ಕ್ಷಾಮವು ಬಂತು. ತಿನ್ನುವುದಕ್ಕೆ ಎಂಜಲೂ ಇಲ್ಲದೆ ನಾಯಿಗಳು ನಾಶವಾಗಿ ಹೋದುವು. ಅದರಿಂದ ಚಿತ್ರಾಂಗನು ಹೊಟ್ಟೆಯಪಾಡು ನೋಡಿಕೊಳ್ಳಲು ದೇಶಾಂತರಕ್ಕೆ ಹೋಯಿತು.
ಅಲ್ಲೊಂದು ಊರಿನಲ್ಲಿ ಒಬ್ಬಳು ದಿನವೂ ಅಡಿಗೆಯ ಮನೆಯ ಬಾಗಿಲನ್ನು ಮುಚ್ಚುವುದನ್ನು ಮರೆತುಬಿಡುವಳು. ಈ ನಾಯಿಯು ಸಮಯ ಕಾದಿದ್ದು ಒಳನುಗ್ಗಿ ಬೇಕಾದ್ದನ್ನೆಲ್ಲ ತಿಂದುಬಿಡುವುದು. ಆದರೆ, ಈಚೆಗೆ ಬರುವ ವೇಳೆಗೆ ಸರಿಯಾಗಿ ಆ ಬೀದಿಯ ನಾಯಿಗಳು ಮೇಲೆ ಬಿದ್ದು ಕಚ್ಚಿ ಗೋಳುಗುಟ್ಟಿಸಿಬಿಡುವುವು.
ಹೀಗೆ ಕೆಲವುದಿನ ಕಷ್ಟದಿಂದ ಅಲ್ಲಿಯೇ ಕೆಲವು ದಿನವಿತ್ತು. ಕೊನೆಗೆ “ಇಲ್ಲಿದ್ದು ಈ ತಿಂಡಿ ತಿನ್ನುವುದೂ ಸಾಕು. ಈ ನಾಯಿಗಳಿಂದ ಕಚ್ಚಿಸಿಕೊಳ್ಳುವುದೂ ಸಾಕು. ನಮ್ಮೂರಲ್ಲಿ ತಿಂಡಿಯಿಲದಿದ್ದರೂ ಕಚ್ಚುವವರು ಯಾರೂ ಇಲ್ಲ” ಎಂದು ಆಲ್ಲಿ೦ದ ಹಿಂತಿರುಗಿ ಬಂತು.
ಅದರಿಂದ ಹಾಗೆ ಹೇಳಿದೆ. ಹೋಗು. ನಿನ್ನ ಮನೆಯನ್ನು ಹಿಡಿದುಕೊಂಡಿರುವನನೊಡನೆ ಯುದ್ಧ ಮಾಡಿ ಹೊಡೆದೋಡಿಸಿ ಮನೆಯನ್ನು ಸಾಧಿಸು” ಎಂದಿತು.
ಆ ಮೊಸಳೆಯೂ ಆ ಕಪಿಯು ಹೇಳಿದ ಬುದ್ಧಿಯ ಮಾತನ್ನು ಕೇಳಿ ಆ ಉಪದೇಶದಂತೆಯೇ  ನಡೆಯಿತು. ಅದಕ್ಕೆ ಮನೆಯೂ ಸಿಕ್ಕಿತು. ಅದೂ ಬಹುಕಾಲ ಅಲ್ಲಿ ಸುಖವಾಗಿತ್ತು. ಅದರಿಂದಲೇ ಹೇಳುವುದು
ಪೌರುಷಮಾಡದೆ ಪಡೆದಾಸಿರಿಯದು | 
ಹಿರಿದಾದರು ಫಲವಿಲ್ಲ | ವನದೊಳು ||
ದೈವವು ಕೊಟ್ಟಾ ಹುಲ್ಲನು ಸೊಪ್ಪನು | 
ತಿಂಬುದು ಮುದಿ ಗೂಳಿಯು ಕಾಣೆಯ ॥ ೩೨॥ 
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಮೊದಲನೆಯ ತಂತ್ರವು
*****
Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...