Home / ಕವನ / ಕವಿತೆ / ಹುಲುಸು

ಹುಲುಸು

ಹೊಲಸಲ್ಲೇ ಹೊರಳಾಡುವುದು
ನಮಗೆ ಒಗ್ಗಿ ಹೋಗಿದೆ
ಊರ ಹತ್ತಿರ ಹೊರದಾರಿಗಳೆಲ್ಲ
ಬಯಲು ಕಕ್ಕಸುಗಳು
ಊರೂಳಗೆ ಹೋಗುವಾಗ ನಾವು
ಮೂಗು ಮುಚ್ಚಿಕೊಳ್ಳುವುದಿಲ್ಲ
ಏಕೆಂದರೆ ದುರ್ವಾಸನೆಗೆ ಸಹಜವಾಗಿ
ಒಗ್ಗಿಕೊಂಡ ದುರ್ವಾಸರು ನಾವು
ದೇವರುಗಳಿಗೆ ಮಾತ್ರ ಹೆದರುತ್ತೇವೆ
ವರ್ಷಕ್ಕೊಮ್ಮೆ ದೇವರ ಹಬ್ಬಕ್ಕೆ
ಮನೆ ಮನೆಗೆ ಸುಣ್ಣ ಬಣ್ಣ
ಓಣಿಗಳು ಅಲ್ಪಸ್ವಲ್ಪ ಸ್ವಚ್ಛ
(ಈಗಿನ ದೇವರು ಮಂತ್ರಿ ಮಾನ್ಯರು
ಬಂದಾಗಲು ಅಷ್ಟೆ)
ದೇವರು ಹೇಳಿಕೆ ಕೊಡುತ್ತವೆ
ಕೇಳಿದ್ದು ಕೊಡುತ್ತವೆ
ಎಂಬ ವದಂತಿ ಹಬ್ಬಿದರೆ ಸಾಕು
ಮರ ಸುತ್ತಿ ಚಪ್ಪಲಿ ಗುಡ್ಡೆ ಹಾಕುತ್ತೇವೆ
ಕೊಂಬೆಗಳಿಗೆ ತೊಟ್ಟಿಲು ಕಟ್ಟುತ್ತೇವೆ
ಮೈಮೇಲೆ ಬಂದು ಪೂಜಾರಿ
ಹೂಂಕರಿಸುತ್ತಾನೆ ಅಪ್ಪಣೆ ಕೊಡುತ್ತಾನೆ
ಭಯಭಕ್ತಿಯಿಂದ ಆರು ಮೊಳ ಮೈಯ
ಮೂರು ಗೇಣು ಮಾಡಿಕೊಂಡು
ಅಡ್ಡ ಬೀಳುತ್ತೇವೆ ಕಾಣಿಕೆ ಕೂಡುತ್ತೇವೆ
ತಿಂಗಳು ತಿಂಗಳು ವಾರಾವಾರಾ
ಆ ದೇವರಿಗೆ ತಪ್ಪದೆ ನಡೆದುಕೊಳ್ಳುತ್ತೇವೆ

ವಾಹನಗಳ ಸಾಲು ಸಾಲು
ಗುಂಪು ಗುಂಪು ಕುರಿಗಳ ಜಾತ್ರೆ
ಪುಣ್ಯಕ್ಷೇತ್ರಗಳ ಹೊಳೆಹಳ್ಳಗಳ
ದಂಡೆಗಳು ಶರೀರ ತ್ಯಾಜ್ಯ ತಿಂಡಿ ತ್ಯಾಜ್ಯ
ಗಳಿಂದ ಗಬ್ಬೆದ್ದು ನಾರುತ್ತವೆ
ನಾವು ಅಲ್ಲಿ ಮೂಗು ಮುಚ್ಚಿಕೊಳ್ಳದೆ
ಸೇವೆಗಳ ಮಾಡಲು ಹೋಗುತ್ತೇವೆ
ಧನ್ಯರಾಗುತ್ತೇವೆ
ದೇಹವೇ ದೇವಾಲಯವೆಂದು ಸಾರಿ
ಮೌಢ್ಯಗಳ ಹೊಲಸು ತೊಳೆಯಲು
ನಮ್ಮ ನಿಮ್ಮೊಳಗಿಂದಲೇ ಮೇಲೆದ್ದು ಬಂದ
ಮಾದಾರ ಮೇದಾರ ಡೋಹಾರ ಕುಂಬಾರ
ಕಂಬಾರ ಮಡಿವಾಳ ನೇಕಾರರಾದಿ
ಶರಣರು ಇದೇ ನೆಲದಲ್ಲೇ ಹುಟ್ಟಿಬಂದರೇ!
ಅವರಿಗೂ ಗುಡಿ ಮಠಗಳ
ಕಟ್ಟಿದ್ದೇವೆ ಬಿಡಿ
ನಮ್ಮ ಮಲಿನ ಮೌಢ್ಯಗಳನ್ನೆಲ್ಲ
ಅವುಗಳ ಸುತ್ತ ಗುಡ್ಡೆ ಹಾಕಲು
ಹೊಲಸು ಹುಲುಸು ಎನ್ನುತ್ತೇವೆ
ಹೊಲಸು ನಮಗೆ ಒಗ್ಗಿ ಹೋಗಿದೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...