Home / ಕವನ / ಕವಿತೆ / ಬುರುಗಿನ ವಿದ್ಯೆಗೆ ಧಿಕ್ಕಾರ

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು
ಕಣ್ಣೆತ್ತಿ ನೋಡದ ಹಾಗೆ ಮಾಡುವ
ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ

ಜೀವನವೆಂದರೆ ಬದುಕೇನೆಂದರೆ
ಗೊತ್ತೇ ಇಲ್ಲದ ಮುಗುದ ಮಕ್ಕಳು
ಅನಂತ ವಿಶ್ವದ, ಅರಿಯದ ಭವಿಷ್ಯ
ಕಲ್ಪನೆ ಕನಸಿನ ಕಣ್ಣುಗಳು

ಬುರುಗು ಜೀವನಕೆ ಒಗ್ಗಿ ಹೋಗುತಿವೆ
ಬ್ಯಾಗಡಿ ಬದುಕಿಗೆ ಮಾರು ಹೋಗುತಿವೆ
ತಮಗೇ ತಿಳಿಯದ ರೀತಿಯಲಿ ಈ
ವಿದೇಶಿ ಮಾದರಿ ಓದಿನಲಿ

ಸಮವಸ್ತ್ರದ ಬೂಟ್ ಟೈ ಬಿಗಿತಗಳಲಿ
ಉಸಿರು ಕಟ್ಟುತಿದೆ ದೇಶೀಯತೆ
ಬುರುಗು ಪಾಠಗಳು ಬುರುಗು ನೋಟಗಳು
ಸಸಿಯದು ಬೆಳೆವುದು ಪರಕೀಯತೆ

ನೆಲದ ವಾಸನೆಯ ಹೀರದ ಪರಿಯಲಿ
ಕೃತಕ ವಾಸನೆಯ ಲೇಪನವು
ತಿಳಿಗಣ್ಣಲಿ ತಿಳಿದೃಶ್ಯವ ನೋಡಲು
ಬಣ್ಣ ಕನ್ನಡಕ ಅಂತರವು

ಬಟ್ಟೆಯಂಗಡಿಯ ಮಾಡೆಲ್ ಟೀಚರ್
ಮಾತು ಕೃತಿಗಳಲಿ ಕೃತಕತೆಯು
ಸಿನಿಮ ಟಿ.ವಿ.ಗಳ ಪರದೆ ಪಾತ್ರಗಳ
ಮಾದರಿ ಎದುರಲಿ ದಿನ ಕತೆಯು

ಮಾರ್ಕು ಉನ್ನತಿಯ ಹೋಂವರ್ಕ್ ಯಂತ್ರದಿ
ಬದುಕಿಗೆ ಮುಚ್ಚಿದ ಚಪ್ಪಡೆಯು
ಆಂಗ್ಲೀಕರಣದ ಮಾದರಿಯಚ್ಚಿನ
ಪ್ಲಾಸ್ಟಿಕ್ ಪದವೀಧರ ಪಡೆಯು

ಈ ನೆಲ ಯಾವುದು ಈ ಜನ ಯಾರು
ಈ ದೇಶದ ಬದುಕೆಂತಿಹುದು
ನಾಡನು ಕಟ್ಟುವ ಕೆಳಜನ ಯಾರು
ಅರಿವೇ ಇಲ್ಲದ ಪೀಳಿಗೆಯು

ಪಟ್ಟಣ ಸಂಸ್ಕೃತಿ ಧನಿಕರ ಸಂಸ್ಕೃತಿ
ಮಾದರಿಯಾಗಿದೆ ಎಲ್ಲರಿಗೆ
ವಿಷವು ರಕ್ತದಲಿ ಎಲ್ಲಿಡೆ ಹರಿದಿದೆ
ದೇಶವು ವಿಷಮಯವಾಗುತಿದೆ

ಮುಳ್ಳಿನ ಸಸಿಗಳು ಮರವಾಗಿ ಬೆಳೆದು
ದೇಶವು ಮುಳ್ಳಿನ ಕಾನನವು
ಮಣ್ಣಿನ ಜನರನು ಮೆತ್ತನೆ ಹಸಿರನು
ತೊತ್ತಳು ತುಳಿಯುವ ನರ್ತನವು

ಹಳ್ಳಿಯ ಜನಗಳು ಅವರ ಬದುಕುಗಳು
ಹೇಸಿಗೆ ಈ ಬುರುಗಿನ ಜನಕೆ
ಇಂಥ ಹೊದರು ಮುಳ್ಳುಗಳ ಸೃಷ್ಟಿಸುವ
ವಿದೇಶಿ ವಿದ್ಯೆ ನಮಗ್ಯಾಕೆ

ನಿಂತ ನೆಲವನೇ ಅಸಹ್ಯ ಕಾಣುವ
ಬೆಂತರ ಓದಿಗೆ ಧಿಕ್ಕಾರ
ತಾಯಿನಾಡ ಪರದೇಶಿ ಮಾಡುತಿಹ
ಬುರುಗು ಪೀಳಿಗೆಗೆ ಧಿಕ್ಕಾರ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...