Home / ಕವನ / ಕವಿತೆ / ಬುರುಗಿನ ವಿದ್ಯೆಗೆ ಧಿಕ್ಕಾರ

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು
ಕಣ್ಣೆತ್ತಿ ನೋಡದ ಹಾಗೆ ಮಾಡುವ
ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ

ಜೀವನವೆಂದರೆ ಬದುಕೇನೆಂದರೆ
ಗೊತ್ತೇ ಇಲ್ಲದ ಮುಗುದ ಮಕ್ಕಳು
ಅನಂತ ವಿಶ್ವದ, ಅರಿಯದ ಭವಿಷ್ಯ
ಕಲ್ಪನೆ ಕನಸಿನ ಕಣ್ಣುಗಳು

ಬುರುಗು ಜೀವನಕೆ ಒಗ್ಗಿ ಹೋಗುತಿವೆ
ಬ್ಯಾಗಡಿ ಬದುಕಿಗೆ ಮಾರು ಹೋಗುತಿವೆ
ತಮಗೇ ತಿಳಿಯದ ರೀತಿಯಲಿ ಈ
ವಿದೇಶಿ ಮಾದರಿ ಓದಿನಲಿ

ಸಮವಸ್ತ್ರದ ಬೂಟ್ ಟೈ ಬಿಗಿತಗಳಲಿ
ಉಸಿರು ಕಟ್ಟುತಿದೆ ದೇಶೀಯತೆ
ಬುರುಗು ಪಾಠಗಳು ಬುರುಗು ನೋಟಗಳು
ಸಸಿಯದು ಬೆಳೆವುದು ಪರಕೀಯತೆ

ನೆಲದ ವಾಸನೆಯ ಹೀರದ ಪರಿಯಲಿ
ಕೃತಕ ವಾಸನೆಯ ಲೇಪನವು
ತಿಳಿಗಣ್ಣಲಿ ತಿಳಿದೃಶ್ಯವ ನೋಡಲು
ಬಣ್ಣ ಕನ್ನಡಕ ಅಂತರವು

ಬಟ್ಟೆಯಂಗಡಿಯ ಮಾಡೆಲ್ ಟೀಚರ್
ಮಾತು ಕೃತಿಗಳಲಿ ಕೃತಕತೆಯು
ಸಿನಿಮ ಟಿ.ವಿ.ಗಳ ಪರದೆ ಪಾತ್ರಗಳ
ಮಾದರಿ ಎದುರಲಿ ದಿನ ಕತೆಯು

ಮಾರ್ಕು ಉನ್ನತಿಯ ಹೋಂವರ್ಕ್ ಯಂತ್ರದಿ
ಬದುಕಿಗೆ ಮುಚ್ಚಿದ ಚಪ್ಪಡೆಯು
ಆಂಗ್ಲೀಕರಣದ ಮಾದರಿಯಚ್ಚಿನ
ಪ್ಲಾಸ್ಟಿಕ್ ಪದವೀಧರ ಪಡೆಯು

ಈ ನೆಲ ಯಾವುದು ಈ ಜನ ಯಾರು
ಈ ದೇಶದ ಬದುಕೆಂತಿಹುದು
ನಾಡನು ಕಟ್ಟುವ ಕೆಳಜನ ಯಾರು
ಅರಿವೇ ಇಲ್ಲದ ಪೀಳಿಗೆಯು

ಪಟ್ಟಣ ಸಂಸ್ಕೃತಿ ಧನಿಕರ ಸಂಸ್ಕೃತಿ
ಮಾದರಿಯಾಗಿದೆ ಎಲ್ಲರಿಗೆ
ವಿಷವು ರಕ್ತದಲಿ ಎಲ್ಲಿಡೆ ಹರಿದಿದೆ
ದೇಶವು ವಿಷಮಯವಾಗುತಿದೆ

ಮುಳ್ಳಿನ ಸಸಿಗಳು ಮರವಾಗಿ ಬೆಳೆದು
ದೇಶವು ಮುಳ್ಳಿನ ಕಾನನವು
ಮಣ್ಣಿನ ಜನರನು ಮೆತ್ತನೆ ಹಸಿರನು
ತೊತ್ತಳು ತುಳಿಯುವ ನರ್ತನವು

ಹಳ್ಳಿಯ ಜನಗಳು ಅವರ ಬದುಕುಗಳು
ಹೇಸಿಗೆ ಈ ಬುರುಗಿನ ಜನಕೆ
ಇಂಥ ಹೊದರು ಮುಳ್ಳುಗಳ ಸೃಷ್ಟಿಸುವ
ವಿದೇಶಿ ವಿದ್ಯೆ ನಮಗ್ಯಾಕೆ

ನಿಂತ ನೆಲವನೇ ಅಸಹ್ಯ ಕಾಣುವ
ಬೆಂತರ ಓದಿಗೆ ಧಿಕ್ಕಾರ
ತಾಯಿನಾಡ ಪರದೇಶಿ ಮಾಡುತಿಹ
ಬುರುಗು ಪೀಳಿಗೆಗೆ ಧಿಕ್ಕಾರ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...