Home / ಕವನ / ಕವಿತೆ / ಬುರುಗಿನ ವಿದ್ಯೆಗೆ ಧಿಕ್ಕಾರ

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು
ಕಣ್ಣೆತ್ತಿ ನೋಡದ ಹಾಗೆ ಮಾಡುವ
ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ

ಜೀವನವೆಂದರೆ ಬದುಕೇನೆಂದರೆ
ಗೊತ್ತೇ ಇಲ್ಲದ ಮುಗುದ ಮಕ್ಕಳು
ಅನಂತ ವಿಶ್ವದ, ಅರಿಯದ ಭವಿಷ್ಯ
ಕಲ್ಪನೆ ಕನಸಿನ ಕಣ್ಣುಗಳು

ಬುರುಗು ಜೀವನಕೆ ಒಗ್ಗಿ ಹೋಗುತಿವೆ
ಬ್ಯಾಗಡಿ ಬದುಕಿಗೆ ಮಾರು ಹೋಗುತಿವೆ
ತಮಗೇ ತಿಳಿಯದ ರೀತಿಯಲಿ ಈ
ವಿದೇಶಿ ಮಾದರಿ ಓದಿನಲಿ

ಸಮವಸ್ತ್ರದ ಬೂಟ್ ಟೈ ಬಿಗಿತಗಳಲಿ
ಉಸಿರು ಕಟ್ಟುತಿದೆ ದೇಶೀಯತೆ
ಬುರುಗು ಪಾಠಗಳು ಬುರುಗು ನೋಟಗಳು
ಸಸಿಯದು ಬೆಳೆವುದು ಪರಕೀಯತೆ

ನೆಲದ ವಾಸನೆಯ ಹೀರದ ಪರಿಯಲಿ
ಕೃತಕ ವಾಸನೆಯ ಲೇಪನವು
ತಿಳಿಗಣ್ಣಲಿ ತಿಳಿದೃಶ್ಯವ ನೋಡಲು
ಬಣ್ಣ ಕನ್ನಡಕ ಅಂತರವು

ಬಟ್ಟೆಯಂಗಡಿಯ ಮಾಡೆಲ್ ಟೀಚರ್
ಮಾತು ಕೃತಿಗಳಲಿ ಕೃತಕತೆಯು
ಸಿನಿಮ ಟಿ.ವಿ.ಗಳ ಪರದೆ ಪಾತ್ರಗಳ
ಮಾದರಿ ಎದುರಲಿ ದಿನ ಕತೆಯು

ಮಾರ್ಕು ಉನ್ನತಿಯ ಹೋಂವರ್ಕ್ ಯಂತ್ರದಿ
ಬದುಕಿಗೆ ಮುಚ್ಚಿದ ಚಪ್ಪಡೆಯು
ಆಂಗ್ಲೀಕರಣದ ಮಾದರಿಯಚ್ಚಿನ
ಪ್ಲಾಸ್ಟಿಕ್ ಪದವೀಧರ ಪಡೆಯು

ಈ ನೆಲ ಯಾವುದು ಈ ಜನ ಯಾರು
ಈ ದೇಶದ ಬದುಕೆಂತಿಹುದು
ನಾಡನು ಕಟ್ಟುವ ಕೆಳಜನ ಯಾರು
ಅರಿವೇ ಇಲ್ಲದ ಪೀಳಿಗೆಯು

ಪಟ್ಟಣ ಸಂಸ್ಕೃತಿ ಧನಿಕರ ಸಂಸ್ಕೃತಿ
ಮಾದರಿಯಾಗಿದೆ ಎಲ್ಲರಿಗೆ
ವಿಷವು ರಕ್ತದಲಿ ಎಲ್ಲಿಡೆ ಹರಿದಿದೆ
ದೇಶವು ವಿಷಮಯವಾಗುತಿದೆ

ಮುಳ್ಳಿನ ಸಸಿಗಳು ಮರವಾಗಿ ಬೆಳೆದು
ದೇಶವು ಮುಳ್ಳಿನ ಕಾನನವು
ಮಣ್ಣಿನ ಜನರನು ಮೆತ್ತನೆ ಹಸಿರನು
ತೊತ್ತಳು ತುಳಿಯುವ ನರ್ತನವು

ಹಳ್ಳಿಯ ಜನಗಳು ಅವರ ಬದುಕುಗಳು
ಹೇಸಿಗೆ ಈ ಬುರುಗಿನ ಜನಕೆ
ಇಂಥ ಹೊದರು ಮುಳ್ಳುಗಳ ಸೃಷ್ಟಿಸುವ
ವಿದೇಶಿ ವಿದ್ಯೆ ನಮಗ್ಯಾಕೆ

ನಿಂತ ನೆಲವನೇ ಅಸಹ್ಯ ಕಾಣುವ
ಬೆಂತರ ಓದಿಗೆ ಧಿಕ್ಕಾರ
ತಾಯಿನಾಡ ಪರದೇಶಿ ಮಾಡುತಿಹ
ಬುರುಗು ಪೀಳಿಗೆಗೆ ಧಿಕ್ಕಾರ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...