Home / ಕವನ / ಕವಿತೆ / ಬುರುಗಿನ ವಿದ್ಯೆಗೆ ಧಿಕ್ಕಾರ

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು
ಕಣ್ಣೆತ್ತಿ ನೋಡದ ಹಾಗೆ ಮಾಡುವ
ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ

ಜೀವನವೆಂದರೆ ಬದುಕೇನೆಂದರೆ
ಗೊತ್ತೇ ಇಲ್ಲದ ಮುಗುದ ಮಕ್ಕಳು
ಅನಂತ ವಿಶ್ವದ, ಅರಿಯದ ಭವಿಷ್ಯ
ಕಲ್ಪನೆ ಕನಸಿನ ಕಣ್ಣುಗಳು

ಬುರುಗು ಜೀವನಕೆ ಒಗ್ಗಿ ಹೋಗುತಿವೆ
ಬ್ಯಾಗಡಿ ಬದುಕಿಗೆ ಮಾರು ಹೋಗುತಿವೆ
ತಮಗೇ ತಿಳಿಯದ ರೀತಿಯಲಿ ಈ
ವಿದೇಶಿ ಮಾದರಿ ಓದಿನಲಿ

ಸಮವಸ್ತ್ರದ ಬೂಟ್ ಟೈ ಬಿಗಿತಗಳಲಿ
ಉಸಿರು ಕಟ್ಟುತಿದೆ ದೇಶೀಯತೆ
ಬುರುಗು ಪಾಠಗಳು ಬುರುಗು ನೋಟಗಳು
ಸಸಿಯದು ಬೆಳೆವುದು ಪರಕೀಯತೆ

ನೆಲದ ವಾಸನೆಯ ಹೀರದ ಪರಿಯಲಿ
ಕೃತಕ ವಾಸನೆಯ ಲೇಪನವು
ತಿಳಿಗಣ್ಣಲಿ ತಿಳಿದೃಶ್ಯವ ನೋಡಲು
ಬಣ್ಣ ಕನ್ನಡಕ ಅಂತರವು

ಬಟ್ಟೆಯಂಗಡಿಯ ಮಾಡೆಲ್ ಟೀಚರ್
ಮಾತು ಕೃತಿಗಳಲಿ ಕೃತಕತೆಯು
ಸಿನಿಮ ಟಿ.ವಿ.ಗಳ ಪರದೆ ಪಾತ್ರಗಳ
ಮಾದರಿ ಎದುರಲಿ ದಿನ ಕತೆಯು

ಮಾರ್ಕು ಉನ್ನತಿಯ ಹೋಂವರ್ಕ್ ಯಂತ್ರದಿ
ಬದುಕಿಗೆ ಮುಚ್ಚಿದ ಚಪ್ಪಡೆಯು
ಆಂಗ್ಲೀಕರಣದ ಮಾದರಿಯಚ್ಚಿನ
ಪ್ಲಾಸ್ಟಿಕ್ ಪದವೀಧರ ಪಡೆಯು

ಈ ನೆಲ ಯಾವುದು ಈ ಜನ ಯಾರು
ಈ ದೇಶದ ಬದುಕೆಂತಿಹುದು
ನಾಡನು ಕಟ್ಟುವ ಕೆಳಜನ ಯಾರು
ಅರಿವೇ ಇಲ್ಲದ ಪೀಳಿಗೆಯು

ಪಟ್ಟಣ ಸಂಸ್ಕೃತಿ ಧನಿಕರ ಸಂಸ್ಕೃತಿ
ಮಾದರಿಯಾಗಿದೆ ಎಲ್ಲರಿಗೆ
ವಿಷವು ರಕ್ತದಲಿ ಎಲ್ಲಿಡೆ ಹರಿದಿದೆ
ದೇಶವು ವಿಷಮಯವಾಗುತಿದೆ

ಮುಳ್ಳಿನ ಸಸಿಗಳು ಮರವಾಗಿ ಬೆಳೆದು
ದೇಶವು ಮುಳ್ಳಿನ ಕಾನನವು
ಮಣ್ಣಿನ ಜನರನು ಮೆತ್ತನೆ ಹಸಿರನು
ತೊತ್ತಳು ತುಳಿಯುವ ನರ್ತನವು

ಹಳ್ಳಿಯ ಜನಗಳು ಅವರ ಬದುಕುಗಳು
ಹೇಸಿಗೆ ಈ ಬುರುಗಿನ ಜನಕೆ
ಇಂಥ ಹೊದರು ಮುಳ್ಳುಗಳ ಸೃಷ್ಟಿಸುವ
ವಿದೇಶಿ ವಿದ್ಯೆ ನಮಗ್ಯಾಕೆ

ನಿಂತ ನೆಲವನೇ ಅಸಹ್ಯ ಕಾಣುವ
ಬೆಂತರ ಓದಿಗೆ ಧಿಕ್ಕಾರ
ತಾಯಿನಾಡ ಪರದೇಶಿ ಮಾಡುತಿಹ
ಬುರುಗು ಪೀಳಿಗೆಗೆ ಧಿಕ್ಕಾರ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...