Home / ಕವನ / ಕವಿತೆ / ಕವಿಗಳು

ಕವಿಗಳು

ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ
ನೇರಮಾಡಲು ಇವರು ಸೆಣಸುತ್ತಾರೆ
ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ
ಇವರ ಎದೆ ಏನೇನೋ ಹಾಡುತ್ತದೆ
ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ
ಮೊಗೆಯುತ್ತಾರೆ
ಅಸಂಖ್ಯ ಅಭಿನಯ ದೃಶ್ಯ ತರಂಗ

ಏನು ರಸತುಂಬಿ ಕಳಿಸಿರುವನೋ ಅವನು ಇವರೆದೆಯಲ್ಲಿ
ಅದು ಗಾಳಿಯಲೆಗೂ ಕಲಕಲಗೊಳ್ಳುತ್ತದೆ
ತುಮುಲಗೊಳ್ಳುತ್ತದೆ ಕೊನೆಗೆ ಕುದಿಯತೊಡಗುತ್ತದೆ
ಇವರು ಆ ಕುದಿಯನುಕ್ಕಿಸುತ್ತಾರೆ ಕಕ್ಕುತ್ತಾರೆ
ನೂರೆನೂರೆ ಬಿಸಿಬಿಸಿ ಸಿಡಿಲಂತೆ ಕೆಂಡದ ಮಳೆಯಂತೆ

ಇವರ ವೀಣೆಯ ತಂತಿ ಬಲು ಕೋಮಲ
ಇತರೆಲ್ಲ ತಂತಿಗಳು ಮಿಡಿಯದ ತಾನಗಳಲ್ಲಿ
ಇವು ಮಿಡಿಯುತ್ತವೆ ನುಡಿಯುತ್ತವೆ
ಇತರರು ಅಂದುಕೊಳ್ಳಲೂ ಆಗದುದನು
ಇವರು ಅನುಭವಿಸಿ ದನಿದೋರುತ್ತಾರೆ
ನಿಮ್ಮ ಕಟ್ಟೆಯೇರಿಗಳಿವರಿಗೆ ಸೆರೆಮನೆ

ನಿಂತ ಹೊಂಡು ನೀರೆಂದೂ ಇವರಾಗಲಾರರು
ಹನಿಹನಿ ಜಿನುಗುವ ಒರತೆಯಾದರೂ ಸರಿ
ಕ್ಷಣ ಕ್ಷಣಕೂ ಸೃಷ್ಟಿಯು ಇವರನ್ನು
ಕುಂತಲ್ಲಿ ಕುಳ್ಳಿರಿಸದೆ, ನಿಂತಲ್ಲಿ ನಿಲ್ಲಿಸದೆ, ಮಲಗಗೊಡದೆ
ಹರಿದಾಡಿಸುತ್ತದೆ ಸ್ವಚ್ಛಂಧ ನಿರ್ಝರಿಯಂತೆ
ಧಾರೆ ಧಾರೆ ಜಲಪಾತದಂತೆ, ನೆಲಮುದ್ದಿಸುವ ಮಳೆಯಂತೆ
ಇವರ ನೀರಾಳ ನಿಮ್ಮಳತೆಗೆ ಸಿಗುವುದಂತೂ ಅಲ್ಲ
ನಿಮಗಂತೂ ಇವರ ನಡೆ ಸೊಟ್ಟು, ಹೆಜ್ಜೆ ಹುಚ್ಚುಚ್ಚಾರ
ನುಡಿ ಒಗಟು, ಚರಿತ್ರೆ ವಿಚಿತ್ರ, ನೀತಿ ಅತೀತ
ಇವರ ಬಟ್ಟೆ ಕಂಡಾಬಟ್ಟೆ, ಇವರ ವರ್ತನೆ
ಅದ್ವೈತ-ಅಯೋಮಯ….
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...