Home / ಕವನ / ಕವಿತೆ / ಕವಿಗಳು

ಕವಿಗಳು

ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ
ನೇರಮಾಡಲು ಇವರು ಸೆಣಸುತ್ತಾರೆ
ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ
ಇವರ ಎದೆ ಏನೇನೋ ಹಾಡುತ್ತದೆ
ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ
ಮೊಗೆಯುತ್ತಾರೆ
ಅಸಂಖ್ಯ ಅಭಿನಯ ದೃಶ್ಯ ತರಂಗ

ಏನು ರಸತುಂಬಿ ಕಳಿಸಿರುವನೋ ಅವನು ಇವರೆದೆಯಲ್ಲಿ
ಅದು ಗಾಳಿಯಲೆಗೂ ಕಲಕಲಗೊಳ್ಳುತ್ತದೆ
ತುಮುಲಗೊಳ್ಳುತ್ತದೆ ಕೊನೆಗೆ ಕುದಿಯತೊಡಗುತ್ತದೆ
ಇವರು ಆ ಕುದಿಯನುಕ್ಕಿಸುತ್ತಾರೆ ಕಕ್ಕುತ್ತಾರೆ
ನೂರೆನೂರೆ ಬಿಸಿಬಿಸಿ ಸಿಡಿಲಂತೆ ಕೆಂಡದ ಮಳೆಯಂತೆ

ಇವರ ವೀಣೆಯ ತಂತಿ ಬಲು ಕೋಮಲ
ಇತರೆಲ್ಲ ತಂತಿಗಳು ಮಿಡಿಯದ ತಾನಗಳಲ್ಲಿ
ಇವು ಮಿಡಿಯುತ್ತವೆ ನುಡಿಯುತ್ತವೆ
ಇತರರು ಅಂದುಕೊಳ್ಳಲೂ ಆಗದುದನು
ಇವರು ಅನುಭವಿಸಿ ದನಿದೋರುತ್ತಾರೆ
ನಿಮ್ಮ ಕಟ್ಟೆಯೇರಿಗಳಿವರಿಗೆ ಸೆರೆಮನೆ

ನಿಂತ ಹೊಂಡು ನೀರೆಂದೂ ಇವರಾಗಲಾರರು
ಹನಿಹನಿ ಜಿನುಗುವ ಒರತೆಯಾದರೂ ಸರಿ
ಕ್ಷಣ ಕ್ಷಣಕೂ ಸೃಷ್ಟಿಯು ಇವರನ್ನು
ಕುಂತಲ್ಲಿ ಕುಳ್ಳಿರಿಸದೆ, ನಿಂತಲ್ಲಿ ನಿಲ್ಲಿಸದೆ, ಮಲಗಗೊಡದೆ
ಹರಿದಾಡಿಸುತ್ತದೆ ಸ್ವಚ್ಛಂಧ ನಿರ್ಝರಿಯಂತೆ
ಧಾರೆ ಧಾರೆ ಜಲಪಾತದಂತೆ, ನೆಲಮುದ್ದಿಸುವ ಮಳೆಯಂತೆ
ಇವರ ನೀರಾಳ ನಿಮ್ಮಳತೆಗೆ ಸಿಗುವುದಂತೂ ಅಲ್ಲ
ನಿಮಗಂತೂ ಇವರ ನಡೆ ಸೊಟ್ಟು, ಹೆಜ್ಜೆ ಹುಚ್ಚುಚ್ಚಾರ
ನುಡಿ ಒಗಟು, ಚರಿತ್ರೆ ವಿಚಿತ್ರ, ನೀತಿ ಅತೀತ
ಇವರ ಬಟ್ಟೆ ಕಂಡಾಬಟ್ಟೆ, ಇವರ ವರ್ತನೆ
ಅದ್ವೈತ-ಅಯೋಮಯ….
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್