Home / ಕವನ / ಕವಿತೆ / ದೀಪದ ಬೆಳಕು…

ದೀಪದ ಬೆಳಕು…

ಪಣತಿಯಿದೆ

ಎಣ್ಣೆಯಿದೆ
ಬತ್ತಿಯಿದೆ
ಕಡ್ಡಿಯಿದೆ!
ದೀಪ ಹಚ್ಚುತ್ತಿಲ್ಲ ನಾ…
ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ??
ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ,
ಜಗಮಗಿಸುವ ಚಿನಕುರುಳಿ,
ದಾರಿದೀಪಗಳಿವೆಯೆಂದೇ??
ಎಲ್ಲ ಇದ್ದು,
ಇಲ್ಲದವನಂತೆ,
ಎದ್ದು ದೀಪ ಮುಡಿಸುತ್ತಿಲ್ಲ ನಾ…
ಇಲ್ಲಿದ್ದು ಎದೆಗೊದೆಯಲಾರದೆ,
ವಿಲಿ ವಿಲಿ ಒದ್ದಾಡಿ… ಒದ್ದಾಡಿ…
ಯುಗ ಯುಗಗಳೇ ಉರುಳಿದವು!
ಇದೇ ಹೊಲೆಗೇರಿಲಿ ನನ್ನಪ್ಪ, ತಾತ, ಮುತ್ತಾತರೂ…
ತರತರಗುಟ್ಟಿ,
ಕತ್ತಲ ಕೂಪದಲಿ,
ಕಡು ತಾಪದಲಿ,
ಹಪಹಪಿಸಿ,
ಶತಶತಮಾನಗಳ ನೂಕಿದರು!!!
ಅಪಮಾನಗಳ ಅಳೆ ಅಳೆದು,
ಅಜ್ಞಾನವದ್ದು,
ಕಜ್ಜಿ ನಾಯಿ, ಹಂದಿ, ಇಲಿ, ಹೆಗ್ಗಣ,
ತಿಗಣೆ, ಸುಕ್ಕಾಡಿ, ನೊಣಗಳ ಜತೆ ಜತೆಲಿ,
ಬಿದ್ದ ಪಕ್ಕೇಲಿ, ಬಿದ್ದ ಪರಿಗೇ…
ಬೆಚ್ಚಿ ಬಿದ್ದೆ!
ಗಡ್ಡಕ್ಕೆ ಕಡ್ಡಿ ಕೊರೆದೆ…
ಹಚ್ಚಿದೆ ಹೊಲಗೇರಿಲಿ ದೀಪ
ಪಾಪ! ದೀಪಕ್ಕೇನು ಗೊತ್ತು?
ಪಣತಿ ಕುಂಬಾರಣ್ಣನದು…
ಎಣ್ಣೆ ಗಾಣಿಗರನೆಂದು…
ಬತ್ತಿ ವಕ್ಕಲಿಗನೆಂದು…
ಕಡ್ಡಿ ವೈಶ್ಯನದೆಂದು…
ಅಳುಕೆ??…
ಸೂರ್‍ಯಸ್ತಮಾನದ ಬೆಳಕೇ…
ವಿಶ್ವ ಬೆಳಗಬಲ್ಲೆಯಾ??
ಕಿಡಿ ಕಿಡಿಯಿಂದಲ್ಲವೇ?
ವಿಶ್ವ ಸುಟ್ಟು, ಸುರ್‍ಮಾಂಡ್ಲವಾಗಿದ್ದು, ಮರೆತ್ತಿಲ್ಲ ಸಾಕು!
ಕಡ್ಡಿ, ಗುಡ್ಡನಾ ಸುಡುವಾಗ-
ದೀಪ ಜಗವ ಬೆಳಗುವುದು!
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...