Home / ಕವನ / ಕವಿತೆ / ದೀಪದ ಬೆಳಕು…

ದೀಪದ ಬೆಳಕು…

ಪಣತಿಯಿದೆ

ಎಣ್ಣೆಯಿದೆ
ಬತ್ತಿಯಿದೆ
ಕಡ್ಡಿಯಿದೆ!
ದೀಪ ಹಚ್ಚುತ್ತಿಲ್ಲ ನಾ…
ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ??
ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ,
ಜಗಮಗಿಸುವ ಚಿನಕುರುಳಿ,
ದಾರಿದೀಪಗಳಿವೆಯೆಂದೇ??
ಎಲ್ಲ ಇದ್ದು,
ಇಲ್ಲದವನಂತೆ,
ಎದ್ದು ದೀಪ ಮುಡಿಸುತ್ತಿಲ್ಲ ನಾ…
ಇಲ್ಲಿದ್ದು ಎದೆಗೊದೆಯಲಾರದೆ,
ವಿಲಿ ವಿಲಿ ಒದ್ದಾಡಿ… ಒದ್ದಾಡಿ…
ಯುಗ ಯುಗಗಳೇ ಉರುಳಿದವು!
ಇದೇ ಹೊಲೆಗೇರಿಲಿ ನನ್ನಪ್ಪ, ತಾತ, ಮುತ್ತಾತರೂ…
ತರತರಗುಟ್ಟಿ,
ಕತ್ತಲ ಕೂಪದಲಿ,
ಕಡು ತಾಪದಲಿ,
ಹಪಹಪಿಸಿ,
ಶತಶತಮಾನಗಳ ನೂಕಿದರು!!!
ಅಪಮಾನಗಳ ಅಳೆ ಅಳೆದು,
ಅಜ್ಞಾನವದ್ದು,
ಕಜ್ಜಿ ನಾಯಿ, ಹಂದಿ, ಇಲಿ, ಹೆಗ್ಗಣ,
ತಿಗಣೆ, ಸುಕ್ಕಾಡಿ, ನೊಣಗಳ ಜತೆ ಜತೆಲಿ,
ಬಿದ್ದ ಪಕ್ಕೇಲಿ, ಬಿದ್ದ ಪರಿಗೇ…
ಬೆಚ್ಚಿ ಬಿದ್ದೆ!
ಗಡ್ಡಕ್ಕೆ ಕಡ್ಡಿ ಕೊರೆದೆ…
ಹಚ್ಚಿದೆ ಹೊಲಗೇರಿಲಿ ದೀಪ
ಪಾಪ! ದೀಪಕ್ಕೇನು ಗೊತ್ತು?
ಪಣತಿ ಕುಂಬಾರಣ್ಣನದು…
ಎಣ್ಣೆ ಗಾಣಿಗರನೆಂದು…
ಬತ್ತಿ ವಕ್ಕಲಿಗನೆಂದು…
ಕಡ್ಡಿ ವೈಶ್ಯನದೆಂದು…
ಅಳುಕೆ??…
ಸೂರ್‍ಯಸ್ತಮಾನದ ಬೆಳಕೇ…
ವಿಶ್ವ ಬೆಳಗಬಲ್ಲೆಯಾ??
ಕಿಡಿ ಕಿಡಿಯಿಂದಲ್ಲವೇ?
ವಿಶ್ವ ಸುಟ್ಟು, ಸುರ್‍ಮಾಂಡ್ಲವಾಗಿದ್ದು, ಮರೆತ್ತಿಲ್ಲ ಸಾಕು!
ಕಡ್ಡಿ, ಗುಡ್ಡನಾ ಸುಡುವಾಗ-
ದೀಪ ಜಗವ ಬೆಳಗುವುದು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...